Friday, August 30, 2013

ಹೊಯ್ಸಳರ ಕಾಲದ ತೆರಿಗೆಗಳು

ZÀ£ÀßgÁAiÀÄ¥ÀlÖt vÁ®ÆQ£À ºÉÆAiÀÄì¼ÀgÀ PÁ®zÀ ±Á¸À£ÉÆÃPÀÛ vÉjUÉUÀ¼ÀÄ
²æà ªÀÄzsÀÄgÁeï
PÀAzÁAiÀÄ ¥ÀzÀUÀ¼À ªÀĺÀvÀéªÀ£ÀÄß ªÀÄ£ÀUÁtĪÀ zÀȶ֬ÄAzÀ ºÁ¸À£À f¯ÉèAiÀÄ ZÀ£ÀßgÁAiÀÄ¥ÀlÖt vÁ®ÆQ£À°è zÉÆgÉvÀ ±Á¸À£ÀUÀ¼À°è PÀAqÀħAzÀ vÉjUÉAiÀÄ ¥ÀzÀUÀ¼À£ÀÄß §¼À¹PÉÆAqÀÄ ¨sËUÉÆýPÀ ¸À¤ßªÉñÀzÀ C£ÀĸÁgÀ «¢ü¸À¯ÁzÀ vÉjUÉUÀ¼À §UÉÎ CzsÀåAiÀÄ£À £Àqɹ PÀAzÁAiÀÄ ¥ÀzÀÞwAiÀÄ gÀÆ¥ÀÅgÉõÉUÀ¼À£ÀÄß «±Éèö¸ÀĪÀ MAzÀÄ ¥ÀæAiÀÄvÀß EzÁVzÉ. E°è ºÉÆAiÀÄì¼ÀgÀ D½éPÉAiÀÄ CªÀ¢üUÉ ¸ÉÃjzÀAvÀºÀ ±Á¸À£ÀUÀ¼À£ÀÄß ªÀiÁvÀæ «±ÉèõÀuÉUÉ §¼À¹PÉƼÀî¯ÁVzÉ. ZÀ£ÀßgÁAiÀÄ¥ÀlÖt vÁ®ÆQ£À°è MlÄÖ £ÀÆgÀ £À®ªÀvÀÛ ªÀÄÆgÀÄ ±Á¸À£ÀUÀ¼ÀÄ zÉÆgÉwzÀÄÝ, EzÀgÀ°è 58 (LªÀvÉÛAlÄ) ±Á¸À£ÀUÀ¼ÀÄ ºÉÆAiÀÄì¼ÀgÀ D½éPÉAiÀÄ PÁ¯ÁªÀ¢üUÉ ¸ÀA§AzsÀ¥ÀlÖzÁÝVgÀÄvÀÛzÉ. E°è ºÀ¢£Á®ÄÌ ±Á¸À£ÀUÀ¼À°è ªÀiÁvÀæ vÉjUÉ CxÀªÁ ±ÀÄ®ÌzÀ ¥ÀzÀUÀ¼À£ÀÄß £ÁªÀÅ PÁt§ºÀÄzÁVzÉ. ±Á¸À£ÀUÀ¼À°è C¨sÁåUÀvÉ, QgÀÄPÀļÀ, ¥ÀlÖ¨sÀzÀÝ, D£ÉAiÀÄ ¸É¸É, PÀÄzÀÄgÉAiÀÄ ¸É¸É, SÁt, ªÉǼÀªÁgÀÄ, ºÉÆgÀªÁgÀÄ, ªÉÆzÀ® ¹zÁÞAiÀÄ, ªÉÇêÀvÀÛPÁgÀÄtå, ªÀÄUÀΪÀiÁ£Àå, ªÀÇgÀªÀļÀ§æAiÀÄ, w¥Éà ¸ÀÄAPÀ, UÁtzÉgÉ, ¸É¸É ªÀiÁ£Àå, ¸É¸É, ºÀ¢PÉ ªÀÄÄAvÁzÀ MlÄÖ ªÀÄƪÀvÉÛüÀÄ vÉjUÉAiÀÄ ¥ÀzÀUÀ¼À G¯ÉèÃR«zÉ. ZÀ£ÀßgÁAiÀÄ ¥ÀlÖt vÁ®ÆQ£À°è PÀAqÀħgÀĪÀ MlÄÖ ±ÀÄ®Ì ¥ÀzÀUÀ¼À ¸ÀASÉå E¥ÀàvÉÛöÊzÀÄ. F ±Á¸À£ÀUÀ¼À£ÀÄß PÁ¯Á£ÀÄPÀæªÀÄzÀ°è eÉÆÃr¹zÁUÀ Qæ.±À. 1117 jAzÀ Qæ.±À. 1276gÀ ªÀgÉV£À CªÀ¢AiÀÄzÁÝVzÉ.  ¥Àæ¥ÀæxÀªÀÄ ¨ÁjUÉ PÀAqÀÄ §gÀĪÀAvÀºÀ vÉjUÉAiÀÄ ¥ÀzÀ ¸É¸É EzÀÄ Qæ.±À. 12£ÉAiÀÄ ±ÀvÀªÀiÁ£ÀzÀ d¤ªÁgÀ1 ±Á¸À£ÀzÀ°è £ÉÆÃqÀ§ºÀÄzÁVzÉ.
CvÀåAvÀ ºÉZÀÄÑ G¯ÉèÃRªÁzÀ ¹zÁÞAiÀÄ JA§ vÉjUÉAiÀÄ ¥ÀzÀ JAlÄ ¨Áj ¥ÀÄ£À§ð¼ÀPÉAiÀiÁzÀÄzÀ£ÀÄß £ÉÆÃqÀ§ºÀÄzÀÄ. ªÀiÁvÀæªÀ®è, F ¥ÀzÀ J¯Áè PÁWÀlÖzÀ°è PÁt¹QÌzÀÄÝ, CvÀåAvÀ ¥ÀæzsÁ£ÀªÁzÀ DzÁAiÀÄzÀ ªÀÄÆ®ªÁVzÀÄÝ, EAvÀºÀ ¹zÁÞAiÀÄ ¥ÀzÀªÀÅ ¹zÀÞ+DAiÀÄ J£ÀÄߪÀ ¥ÀzÀ¢AzÀ gÀavÀªÁVzÀÄÝ ¹ÜgÀªÁzÀ CxÀªÁ RavÀªÁzÀ DzÁAiÀÄ J£ÀÄߪÀ CxÀðªÀ£ÀÄß PÉÆqÀÄvÀÛªÉ2. DzÀÝjAzÀ F vÉjUÉ gÁdåzÀ DzÁAiÀÄzÀ ¥ÀæzsÁ£À DPÀgÀªÁVvÉÛAzÀgÉ vÀ¥ÁàUÀ¯ÁgÀzÀÄ. F vÉjUÉAiÀÄ ¥ÀzÀªÀ£ÀÄß ¸ÁªÀiÁ£ÀåªÁV ¨sÀÆ«ÄAiÀÄ MqÉvÀ£ÀzÀ ªÉÄÃ¯É «¢ü¸ÀÄwÛzÀÝ vÉjUÉAiÉÄAzÀÄ ¨sÁ«¸À¯ÁVvÀÄÛ. DzÀgÉ EzÀ£ÀÄß ªÀÄ£É, CAUÀr ºÁUÀÆ CUÀæºÁgÀ ºÀ½îUÀ¼À ªÉÄÃ¯É «¢ü¸ÀĪÀ ¥ÀzÀUÀ¼À eÉÆvÉUÉ §¼ÀPÉAiÀiÁVgÀĪÀÅzÀ£ÀÄß £ÁªÀÅ ««zsÀ ±Á¸À£ÀUÀ¼À°è £ÉÆÃqÀ§ºÀÄzÁVzÉ. DzÀÝjAzÀ ¹zÁÞAiÀÄ PÉêÀ® PÀȶ ¨sÀÆ«ÄAiÀÄ ªÉÄÃ¯É «¢ü¹zÀ ±ÀĮ̪ÁVgÀzÉ EvÀgÀ ªÀÄÆ®UÀ½AzÀ®Æ MUÀÆÎrzÀAvÀºÀ ±ÀĮ̪ÀÇ ºËzÀÄ, ºÉZÁÑV ¹zÁÞAiÀĪÀ£ÀÄß ªÁ¶ðPÀªÁV £ÀUÀzÀÄ CxÀªÁ zsÁ£Àå gÀÆ¥ÀzÀ°è gÁeÁåqÀ½vÀªÀÅ ¥ÀqÉzÀÄPÉƼÀÄîwÛvÀÄÛ. CzÀ®èzÉ F ±ÀÄ®ÌzÀ ¥ÀæªÀiÁtªÀ£ÀÄß PÁ®PÁ®PÉÌ ¤UÀ¢¥Àr¸ÀĪÀ ºÁUÀÆ ¥ÀjµÀÌgÀuÉUÉƽ¸ÀĪÀ ¥Àj¥ÁoÀªÀÇ eÁjAiÀÄ°èvÉÛA§ C©ü¥ÁæAiÀĪÀ£ÀÄß F »AzÉ £ÀqÉzÀ vÉjUÉ ¥ÀzÀÞwAiÀÄ ¸ÀA±ÉÆÃzsÀ£ÉUÀ½AzÀ ªÀåPÀÛªÁVzÉ3.
         zÉÆgÉvÀ ºÀ¢£Á®ÄÌ ±Á¸À£ÀUÀ¼À°è JAlÄ ±Á¸À£ÀUÀ¼ÀÄ `¹zÁÞAiÀÄ ¥ÀzÀªÀ£ÀÄß G¯ÉèÃT¹zÀÄÝ, CªÀÅUÀ¼À°è ªÀÄÆgÀÄ ±Á¸À£ÀUÀ¼ÀÄ PÉêÀ® `¹zÁÞAiÀÄ ¥ÀzÀªÀ£Àß®èzÉ E¤ßvÀgÀ AiÀiÁªÀÅzÉà vÉjUÉ ¥ÀzÀªÀ£ÀÄß ºÉÆA¢gÀzÉ EgÀĪÀÅzÀÄ `¹zÁÞAiÀÄ gÁdåzÀ DzÁAiÀÄzÀ ¹AºÀ¥Á®£ÀÄß ¥ÀqÉ¢vÉÛ£ÀÄߪÀÅzÀgÀ°è ¸ÀA±ÀAiÀÄ«®è. Qæ.±À. 1189gÀ D£ÉPÉgÉ4 ±Á¸À£ÀzÀ°è zÁR¯ÁzÀ ªÉÆzÀ® `¹zÁÞAiÀÄ ¥ÀzÀªÀÅ ¹zÁÞAiÀÄzÀ ¥ÀǪÀð ¤UÀ¢ ºÁUÀÆ ¥ÀjµÀÌgÀuÉAiÀÄ §UÉÎ £ÀqÉzÀ ZÀZÉðUÉ ªÀĺÀvÀéªÀ£ÀÄß ¤ÃqÀÄvÀÛzÉ.
`¸É¸É CxÀªÁ `¸ÉÃ¸É vÉjUÉAiÀÄ ¥ÀzÀ vÀ¯Á ªÀÄÆgÀÄ ¨Áj ¥Àæ¸ÁÛ¦¸À¯ÁVzÉ. `¸É¸É ¥ÀzÀ CxÉðʸÀĪÀ°è UÉÆAzÀ®UÀ½gÀĪÀÅzÀ£ÀÄß UÀªÀĤ¸À§ºÀÄzÀÄ. F vÉjUÉAiÀÄ£ÀÄß gÁd CxÀªÁ ZÀPÀæªÀwðAiÀÄ «ºÁºÀ ¸ÀªÀiÁgÀA¨sÀzÀ ¥ÀæAiÀÄÄPÀÛ «¢ü¸ÀÄwÛzÀÝ vÉjUÉ5 JA§ ªÁzÀªÀÅ MAzÉqÉAiÀiÁzÀgÉ, F `¸É¸ÉAiÀÄ£ÀÄß gÁd£ÀÄ PÉ®ªÉÇAzÀÄ «±ÉõÀ ¸ÀAzÀ¨sÀðzÀ°è zsÁå£ÀzÀ gÀÆ¥ÀzÀ°è ¸ÀAUÀ滸ÀÄwÛzÀÝ vÉjUÉAiÀÄ «zsÀ JA§ ªÁzÀ E£ÉÆßAzÉqÉ EzÀ®èzÉ `¸É¸É JA§ ¥ÀzÀ vÀ¥ÁàV ±Á¸À£ÀUÀ¼À°è `¸É¸É JAzÀÄ PÉÆgÉAiÀįÁVzÀÄÝ, gÁd¤UÉ ¤ÃqÀÄwÛzÀÝ MAzÀÄ §UÉAiÀÄ vÉjUÉ6 CxÀªÁ ªÉÄë£À ªÉÄÃ¯É ºÉÃgÀÄwÛzÀÝ vÉjUÉAiÀÄÆ DVgÀ§ºÀÄzÉA§ C¤¹PÉAiÀÄÆ EzÉ. Qæ.±À. 1276gÀ ¨Á¼ÀUÀAa7 ±Á¸À£ÀzÀ°è zÁR¯ÁzÀ `SÁt vÉjUÉ ¥ÀzÀªÀÅ ªÉÄë£À ªÉÄÃ¯É «¢ü¸ÀÄwÛzÀÝ vÉjUÉAiÀÄ£ÀÄß ¥Àæw¤¢ü¸ÀÄvÀÛzÉ.
`D£ÉAiÀÄ ¸É¸É ªÀÄvÀÄÛ `PÀÄzÀÄgÉAiÀÄ ¸É¸É JA§ JgÀqÀÄ vÉjUÉ ¥ÀzÀUÀ¼À G¯ÉèÃRªÀÅ ±Á¸À£ÀUÀ¼À°è JgÀqÀÄ ¨Áj G¯ÉèÃRUÉÆArzÉ. `D£ÉAiÀÄ ¸É¸É ªÀÄvÀÄÛ `PÀÄzÀÄgÉAiÀÄ ¸É¸É JA§ JgÀqÀÄ vÉjUÉ ¥ÀzÀUÀ¼ÀÄ Qæ.±À. 1252gÀ CUÀæºÁgÀ ¨É¼ÀÄUÀ° ±Á¸À£À8 ªÀÄvÀÄÛ Qæ.±À. 1276gÀ ¨Á¼ÀUÀAa9 ±Á¸À£ÀzÀ°è ¥ÀævÉåÃPÀªÁV MAzÉÆAzÀÄ ¨Áj F ±Á¸À£ÀUÀ¼À°è zÁR¯ÁVzÉ. MAzÀÄ C©ü¥ÁæAiÀÄzÀAvÉ gÁd£ÀÄ vÀ£Àß D£É ªÀÄvÀÄÛ PÀÄzÀÄgÉUÀ½UÉ ªÉÄêÀ£ÀÄß ¥ÀÇgÉʸÀ®Ä vÉjUÉUÀ¼À£ÀÄß «¢ü¸ÀÄwÛzÀÝ. EzÀ£ÀÄß `SÁt JAzÀÄ £ÀªÀÄÆ¢¹gÀĪÀÅzÀÄ ¨É¼ÀQUÉ §A¢zÉ. ZÉ£ÀßgÁAiÀÄ ¥ÀlÖt vÁ®ÆQ£À°è Qæ.±À. 1276gÀ ¨Á¼ÀUÀAa10 ±Á¸À£ÀzÀ°è §¼ÀPÉAiÀiÁVgÀĪÀÅzÀ£ÀÄß UÀªÀĤ¸À§ºÀÄzÀÄ. E£ÉÆßAzÉqÉ ªÁå¥ÁgÀ¸ÀÜgÀÄ «zÉñÀ CxÀªÁ zÀÆgÀzÀ Hj¤AzÀ vÀAzÀ PÀÄzÀÄgÉ ªÀÄvÀÄÛ D£ÉUÀ¼À ªÉÄë£À RZÀð£ÀÄß ¸ÀjzÀÆV¸À®Ä «¢ü¹gÀ§ºÀÄzÁzÀ vÉjUÉ JA§ ªÁzÀªÀÇ EzÉ. gÁd£ÀÄ vÀ£Àß ¥ÀæeÉUÀ½UÉ gÀPÀëuÉAiÀÄ£ÀÄß ¤ÃqÀĪÀÅzÀÄ ªÉÆzÀ® DzÀåvÉAiÀiÁVzÀÄÝ, D ¤nÖ£À°è §°µÀ× ¸ÉÊ£ÀåzÀ CªÀ±ÀåPÀvÉ EzÀÄÝ, D£É ªÀÄvÀÄÛ PÀÄzÀÄgÉUÀ¼ÀÄ ¸ÉÊ£ÀåzÀ ±ÀQÛ ºÉaѸÀÄvÀÛzÉ JA§ÄzÀÄ ¤d ¸ÀAUÀw. D PÁgÀtPÁÌV gÁd£ÀÄ vÀ£Àß CvÀåAvÀ zÉÆqÀØ ¥ÀæªÀiÁtzÀ ªÉZÀѪÀ£ÀÄß ¨sÀj¸À®Ä F vÉjUÉUÀ¼À£ÀÄß ªÀ¸ÀÆ° ªÀiÁqÀĪÀ ¸ÁzsÀåvÉ EzÉ. G½zÀAvÉ J¯Áè vÉjUÉ ¥ÀzÀUÀ¼ÀÄ PÉêÀ® MAzÉÆAzÀÄ ¨Áj ¥ÀævÉåÃPÀ ±Á¸À£ÀUÀ¼À°è G¯ÉèÃR UÉÆArzÀÄÝ, gÁd£À ¨ÉÆPÀ̸ÀPÉÌ ºÉaÑ£À DzÁAiÀÄ vÀgÀĪÀAvÀºÀ ±ÀÄ®ÌzÀ ªÀÄÆ®UÀ¼ÁVgÀ®Ä ¸ÁzsÀå«®è.
F «±ÉèõÀuÉUÉ M¼À¥Àr¹zÀ ºÀ¢£Á®ÄÌ ±Á¸À£ÀUÀ¼À£ÀÄß PÁ¯Á£ÀÄPÀæªÀÄzÀ°èj¹ £ÉÆÃrzÁUÀ ªÉÆzÀ® ªÀÄÆgÀÄ ±Á¸À£ÀUÀ¼À°è vÀ¯Á MAzÀÄ vÉjUÉ ¥ÀzÀzÀ G¯ÉèÃRªÀ£ÀÄß £ÁªÀÅ PÁtÄvÉÛêÉ. E°è ªÀÄÆgÀÆ ±Á¸À£ÀUÀ¼ÀÄ ºÉÆAiÀÄì¼À «µÀÄÚªÀzsÀð£À£À D½éPÉAiÀÄ CªÀ¢üUÉ ¸ÉÃjzÀÄÝ, gÁd£ÀÄ PÀ¯ÁåtzÀ ZÁ®ÄPÀågÀ ¸ÁªÀÄAvÀ£ÁzÀ gÁd¤UÉ PÉ®ªÉÇAzÀÄ vÉjUÉUÀ¼À£ÀÄß «¢ü¸ÀĪÀAvÀºÀ ¸ÁévÀAvÀæöå E®èªÁVvÉÛAzÀÄ w½zÀħgÀÄvÀÛzÉ. ªÀiÁvÀæªÀ®è gÁdåªÀÅ vÀ£Àß ¨Á¯ÁåªÀ¸ÉÜAiÀÄ°ègÀĪÀÅzÀ£ÀÄß ¥Àæw©A©¸ÀĪÀAvÉ PÁtÄvÀÛzÉ. KPÉAzÀgÉ F vÉjUÉUÀ¼À£ÀÄß ºÉÆgÀvÁzÀ «±ÉõÀ DzÀAiÀĪÉãÀÆ gÁdåQÌgÀ°®èªÉA§ÄzÀÄ UÉÆZÀj¸ÀÄvÀÛzÉ. E°è UÀªÀĤ¸À¨ÉÃPÁzÀ ªÀÄvÉÆÛAzÀÄ CA±ÀªÉAzÀgÉ Qæ.±À. 1139gÀ CtwAiÀÄ°è zÉÆgÉvÀ ±Á¸À£À11 ªÀÄvÀÄÛ C¯Éèà zÉÆgÉvÀ E£ÉÆßAzÀÄ ±Á¸À£ÀzÀ°è `¹zÁÞAiÀÄ12 ¥ÀzÀªÀ£ÀÄß  G¯ÉèÃT¸ÀĪÀ ªÀÄÆ®PÀ `¹zÁÞAiÀÄzÀ ªÀĺÀvÀéªÀ£ÀÄßJwÛ »rAiÀÄÄvÀÛzÉ.
Qæ.±À. 1181gÀ £ÀAvÀgÀ zÉÆgÉvÀ ±Á¸À£ÀUÀ¼ÀÄ ««zsÀ ¥ÀæzÉñÀUÀ¼À°è ºÀAa ºÉÆÃVzÀÄÝ, £Á£Á jÃwAiÀÄ vÉjUÉ ¥ÀzÀUÀ¼À G¯ÉèÃRªÀ£ÀÄß £ÁªÀÅ £ÉÆÃqÀ§ºÀÄzÁVzÉ. F PÁ®WÀlÖzÀ°è ºÉÆAiÀÄì¼ÀgÀÄ ¸ÀévÀAvÀæUÉÆAqÀÄ DqÀ½vÀªÀ£ÀÄß £ÀqɹzÀAvÀºÀ PÁ®ªÁVzÀÄÝ, ¸ÁªÀiÁædåzÀ «¸ÀÛgÀuÉAiÀÄÆ DVgÀĪÀÅzÀjAzÀ PÀAzÁAiÀÄ «¢ü¸ÀĪÀ C¢üPÁgÀ ºÁUÀÆ ªÁå¦Û ºÉaѹPÉÆArgÀĪÀÅzÀ£ÀÄß F ±Á¸À£ÀUÀ¼ÀÄ RavÀ¥Àr¸ÀÄvÀÛªÉ. EzÀ®èzÉ vÉjUÉ «£Á¬Äw ¤ÃqÀĪÀAvÀºÀ ¥ÀzÀUÀ¼ÁzÀ `ªÉÇêÀvÀ PÁgÀÄtå `¸ÉøɪÀiÁ£Àå, `ªÀÄUÀÎ ªÀiÁ£Àå EvÁå¢UÀ¼À£ÀÄß UÀªÀĤ¹zÁUÀ vÉjUÉ ºÉÃgÀĪÀ ºÁUÀÆ «£Á¬Äw ¤ÃqÀĪÀ ¸ÀªÁð¢üPÁgÀ gÁdgÀ°è vÉÛA§ÄzÀÄ ºÉZÀÄÑ CxÀð¥ÀÇtðªÁV ªÀåPÀÛªÁVzÉ. Qæ.±À. 1181gÀ ZÀ£ÀßgÁAiÀÄ¥ÀlÖtzÀ ±Á¸À£À `UÁtzÉgÉ13AiÀÄ ªÀÄvÀÄÛ Qæ.±À. 1223gÀ PÉA¨Á¼ÀÄ ±Á¸À£À `ªÀÄUÀΪÀiÁ£Àå14 ¥ÀzÀªÀ£ÀÄß G¯ÉèÃT¸ÀÄvÀÛzÉ. F JgÀqÀÆ ¥ÀzÀUÀ¼ÀÄ JuÉÚ CxÀªÁ ¨É®è vÀAiÀiÁjPÉ ªÀÄvÀÄÛ PÉʪÀÄUÀÎzÀ (ºÀwÛ ªÀÄvÀÄÛ gÉõÉäAiÀÄ) WÀlPÀUÀ¼À ªÉÄÃ¯É «¢ü¸ÀÄwÛzÀÝ vÉjUÉAiÀiÁVzÀÄÝ, F ¥ÀæzÉñÀUÀ¼ÀÄ PÉÊUÁjPÉUÀ¼À vÁtªÁVvÉÛA§ÄzÀ£ÀÄß ¸ÀÆa¸ÀÄvÀÛzÉ. G½zÀAvÉ ¨ÉÃgÉ AiÀiÁªÀ ±Á¸À£ÀUÀ¼À®Æè EAvÀºÀ vÉjUÉUÀ¼À G¯ÉèÃR«®è.
ºÉÆAiÀÄì¼ÀgÀ ¸ÀªÀÄPÁ°Ã£À PÉ®ªÀÅ UÀæAxÀUÀ¼ÀÄ ¸ÀÄAPÀ ¥ÀzÀÞw ºÁUÀÆ CzÀgÀ ¥ÀæªÀiÁtªÀ£ÀÄß ¤UÀ¢¥Àr¹gÀĪÀÅzÀ£ÀÄß £ÁªÀÅ PÁtÄvÉÛêÉ. GzÁºÀgÀuÉUÉ: ¸ÉÆêÉÄñÀégÀ£À ¥ÀæPÁgÀ ¥ÁætÂUÀ¼ÀÄ ªÀÄvÀÄÛ a£ÀßzÀ ªÉÄÃ¯É ±ÉÃPÀqÁ 50 gÀµÀÄÖ ¸ÀÄAPÀ «¢ü¸À¨ÉÃPÀÄ. E¤ßvÀgÀ ªÀ¸ÀÄÛUÀ¼ÁzÀ ¸ÀÄUÀAzsÀ zÀæªÀå, OµÀ¢ü, ºÀÇ, ºÀtÄÚ, vÀgÀPÁj, ªÀÄtÂÚ£À ªÀÄrPÉ, ZÀªÀÄðzÀ ¸ÁªÀÄVæ EvÁå¢UÀ¼À ªÉÄÃ¯É ±ÉÃPÀqÁ 16gÀµÀÄÖ ¸ÀÄAPÀªÀ£ÀÄß «¢ü¸À§ºÀÄzÉA§ C©ü¥ÁæAiÀĪÀ£ÀÄß ªÀåPÀÛ¥Àr¸ÀÄvÁÛ£É.15 ºÉÆAiÀÄì¼ÀgÀ ¸ÁªÀiÁædåzÀ°è ªÁå¥ÁgÀ ªÀ»ªÁlÄ ¸ÀªÀÄÈzÀÞªÁVzÀÝjAzÀ ¸ÀÄAPÀ¢AzÀ §AzÀ DzÁAiÀĪÀÅ gÁeÁåzÁAiÀÄzÀ ªÀÄÄRå DPÀgÀªÁVvÉÛA§ÄzÀÄ ¸ÀàµÀÖ.
Qæ.±À. 1181gÀ ZÀ£ÀßgÁAiÀÄ¥ÀlÖt ±Á¸À£À `ºÉÆAUÉ «Ã¸ÀzÀ(?) `ªÉǼÀªÁgÀÄ ªÀÄvÀÄÛ ºÉÆgÀªÁgÀÄ16 Qæ.±À. 1189 `D£ÉPÉgÉ ±Á¸À£À `ªÉÇêÀvÀÛ PÁgÀÄtå17 (DªÀÄzÀÄ ¸ÀÄAPÀ gÀ»vÀ ¥ÀæzÉñÀ) ºÁUÀÆ Qæ.±À.1191gÀ PÀÄAzÀÆgÀÄ ±Á¸À£À18 ®ºÀPÀ̪ÉA§ ºÀ½îAiÀÄ£ÀÄß DªÀÄzÀĸÀÄAPÀ¢AzÀ ªÀÄÄPÀÛUÉƽ¹zÀ ¥Àæ¸ÁÛ¥À E°è G¯ÉèÃSÁºÀðªÁVzÉ. ¸ÁªÀiÁ£ÀåªÁV ¥ÀgÀªÀiÁ¢üPÁgÀªÀ£ÀÄß ºÉÆA¢gÀĪÀ ¸ÁªÀiÁædåzÀ°è «zÉñÀ¢AzÀ CxÀªÁ E¤ßvÀgÀ DqÀ½vÀPÉÌ M¼À¥ÀlÖ ¥ÀæzÉñÀ¢AzÀ §AzÀAvÀºÀ ¸ÀgÀPÀÄUÀ¼À ªÉÄÃ¯É DªÀÄzÀÄ ¸ÀÄAPÀªÀ£ÀÄß «¢ü¸ÀĪÀÅzÀÄ ¸ÁªÀiÁ£Àå. DzÀgÉ E°è ¸ÀA¥ÀÇtð ¸ÀÄAPÀ ºÉÃjzÀ CxÀªÁ ªÀÄÄPÀÛUÉƽ¹zÀ GzÁºÀgÀuÉUÀ¼ÀÄ UÉÆÃZÀj¸ÀÄwÛzÀÄÝ, EzÀÄ ¸ÀܽÃAiÀÄ DqÀ½vÀUÀ¼ÀÄ ¸ÁéAiÀÄvÀÛvÉAiÀÄ£ÀÄß ¥ÀqÉ¢vÉÛA§ÄzÀ£ÀÄß vÉÆÃj¸ÀĪÀÅzÀÄ ªÀiÁvÀæªÀ®èzÉ PÉÃAzÁæqÀ½vÀzÀ°è wêÀævÀgÀªÁzÀ §zÀ¯ÁªÀuÉ PÀAqÀÄ §AzÀgÀÆ ¸ÀܽÃAiÀiÁqÀ½vÀzÀ°è CzÀPÀÌ£ÀÄUÀÄtªÁV §zÀ¯ÁªÀuÉUÀ¼ÀÄ PÀAqÀħgÀÄwÛgÀ°®èªÉA§ÄzÀPÉÌ GvÀÛªÀÄ ¤zÀ±Àð£ÀªÁVzÉ.
Qæ.±À. 1205gÀ ¸ÁUÀvÀªÀ½îAiÀÄ ±Á¸À£À `¨Á®¥Àt19 vÉjUÉ ¥ÀzÀzÀ G¯ÉèÃR«gÀĪÀÅzÀ£ÀÄß UÀªÀĤ¸À§ºÀÄzÁVzÉ. §ºÀıÀB EzÀÄ ¥À±ÀÄUÀ¼À ªÉÄÃ¯É «¢ü¸ÀĪÀ vÉjUÉAiÀiÁVgÀ§ºÀÄzÉA§ C©ü¥ÁæAiÀĪÀ£ÀÄß PÉòÃgÁd£À `±À§ÝªÀÄtÂzÀ¥Àðt PÀÈwAiÀÄÄ zÀÈqsÀ¥Àr¸ÀÄvÀÛzÉ. FvÀ£À ¥ÀæPÁgÀ ºÉʺÀAiÀÄ£ÀÄ ²ªÀ£À MAzÀÄ JvÁÛzÀgÀÆ ¸ÀjAiÉÄà ¨Á® ¥ÀtªÀ£ÀÄß PÉüÀzÉ ©qÀĪÀªÀ£À®è (¨Á®ªÀtªÀA ¨ÉÃqÀĪÀ £ÉÆAzÉ UÉÆAzÉUÀªÀÄ£ÀA UÁgÀwAiÀÄA ºÉʺÀAiÀÄA) vÉjUÉ ºÁPÀĪÀ MAzÀÄ ºÀ¸ÀÄ«UÉ JAzÀÄ ºÉüÀĪÀ §zÀ®Ä MAzÀÄ ¨Á®PÉÌ JAzÀÄ ºÉüÀĪÀ ¸ÀA¥ÀæzÁAiÀÄ GvÀÛgÀ ¨sÁgÀvÀzÀ°è FUÀ®Æ ¥ÀæwÃwAiÀÄ°èzÉ.20 DzÀgÉ ¸ÁUÀvÀªÀ½îAiÀÄ ±Á¸À£ÀªÀÅ C¸ÀàøµÀå ªÀÄUÀÄ«£À ªÉÄÃ¯É (ºÉƯÉAiÀÄgÀ ¨Á®¥Àt) JAzÀÄ £ÀªÀÄÆ¢¹gÀĪÀÅzÀ£ÀÄß UÀªÀĤ¹zÀgÉ EAvÀºÀ vÉjUÉUÀ¼À£ÀÄß MAzÀÄ ¤¢ðµÀÖ ¸ÀªÀÄÄzÁAiÀÄzÀ ªÀÄPÀ̼À ªÉÄÃ¯É ºÉÃgÀÄwÛzÀÝ vÉjUÉ21AiÀiÁVgÀ§ºÀÄzÉA§ HºÉAiÀÄ£ÀÄßAlĪÀiÁqÀÄvÀÛzÉ.
Qæ.±À. 1223gÀ PÉA¨Á¼ÀÄ ±Á¸À£À `w¥Éà¸ÀÄAPÀ22zÀ G¯ÉèÃR«zÀÄÝ F ¥ÀæzÉñÀzÀ°è ªÀåªÀ¸ÁAiÀÄ ºÁUÀÆ ¥À±ÀĸÀAUÉÆÃ¥À£É ªÀÄÄRå fêÀ£ÁzsÁgÀ PÀ¸ÀĨÁVvÉÛ£Àß §ºÀÄzÀÄ.
Qæ.±À. 1276gÀ ¨Á¼ÀUÀAaAiÀÄ ±Á¸À£À `ªÀÇgÀªÀļÀ§æAiÀÄ23 vÉjUÉ ¥ÀzÀªÀ£ÀÄß ºÉÆA¢zÀÄÝ DqÀ½vÀªÀÅ ¥ÀæwAiÉÆAzÀÄ HgÀ£ÀÄß MAzÉÆAzÀÄ vÉjUÉAiÀÄ WÀlPÀUÀ¼ÁV «AUÀr¹vÀÄÛ J£ÀߧºÀÄzÀÄ.
`ºÀ¢PÉ JA§ ±ÀÄ®ÌzÀ G¯ÉèÃRªÀÅ Qæ.±À. 1259gÀ `¥ÀÅgÀ ±Á¸À£À24zÀ°è PÁt§ºÀÄzÁVzÉ, §ºÀĵÀB EzÀÄ MAzÀÄ «zsÀzÀ PÁtÂPÉ CxÀªÁ PÀ¥ÀàªÁVzÉ. PÉ®ªÉÇAzÀÄ ¸ÀAzÀ¨sÀðUÀ¼À°è ªÀiÁvÀæ gÁd£ÀÄ EzÀ£ÀÄß ¤jÃQë¸ÀÄwÛzÀÝAvÉ ªÀåPÀÛªÁUÀÄvÀÛzÉ. Qæ.±À. 1220gÀ ±Á¸À£ÀªÀÅ `PÉÆÃmÉAiÀÄ ºÀ¢PÉ25 JA§ ±ÀÄ®ÌzÀ ¥Àæ¸ÁÛ¥À ªÀiÁrgÀĪÀÅzÀjAzÀ ºÀ¢PÉAiÀÄÄ PÀAzÁAiÀÄzÀ ¥ÀzÀªÁVzÉAiÉÄA§ÄzÀPÉÌ ¥ÀÅgÁªÉ MzÀV¸ÀÄvÀÛzÉ.
F CzsÀåAiÀÄ£ÀªÀ£ÀÄß Qæ.±À. 1117gÀ ±Á¸À£À¢AzÀ ªÉÆzÀ®ÄUÉÆAqÀÄ ªÀÄÄA¢£À PÁ®WÀlÖªÀ£ÀÄß UÀªÀĤ¸ÀÄvÁÛ ºÉÆÃzÀAvÉ F »AzÉ PÀAqÀjAiÀÄzÀ ºÉƸÀ vÉjUÉ ¥ÀzÀUÀ¼À G¯ÉèÃRªÀ£ÀÄß £ÁªÀÅ £ÉÆÃqÀ§ºÀÄzÀÄ.
F ªÉÆzÀ¯Éà «±Éèö¹zÀAvÉ `¹zÁÞAiÀÄzÀ G¯ÉèÃR ¸ÁªÀiÁ£ÀåªÁVzÀÄÝ ¸ÁªÀiÁædåzÁºÀ ºÉZÁÑzÀAvÉ «¸ÁÛgÀªÁzÀ ¸ÁªÀiÁædåzÀ ¨sÀzÀævÉUÉ §°µÀ× ¸ÉãÉAiÀÄ CUÀvÀå«zÀÄÝ, ¥ÀæeÉUÀ¼À ¸ÀA¥ÀvÀÄÛ ªÀÄvÀÄÛ fêÀzÀ gÀPÀëuÉUÉ PÀÄAzÀÄAmÁUÀ¨ÁgÀzÉA§ GzÉÝñÀ¢AzÀ ¥ÀæeÉUÀ¼À ªÉÄÃ¯É ºÉZÀÄѪÀj vÉjUÉ ºÉÃgÀ®Ä  ªÀÄÄAzÁUÀÄvÀÛªÉ, ºÁUÁV ¸ÉãÁ PÁAiÀÄðZÀgÀuÉUÉ vÀUÀ®ÄªÀ ªÉZÀѪÀ£ÀÄß ¥sÀ¯Á£ÀĨsÀ«UÀ¼ÀÄ ¨sÀj¸ÀÄwÛzÀÝgÀÄ. ¸ÁªÀÄAvÀgÁV zÁÝUÀ EAvÀºÀ ªÉZÀÑ ªÀiÁvÀæªÀ®è ±ÀvÀÄæ ¨sÀAiÀĪÀÇ PÀrªÉĬÄzÀÄÝ, CªÀ±ÀåPÀvÉUÀ¼À£ÀÄß E¤ßvÀgÀ ªÀÄÆ®UÀ½AzÀ ¸ÀjzÀÆV¸À §ºÀÄzÁVvÀÄÛ. DzÀgÉ ºÉÆgÉ ºÉZÁÑzÀAvÉ ¸ÉãÉAiÀĪÉZÀÑ, «¢ü¸ÀĪÀ vÉjUÉUÀ¼ÀÄ ºÉZÁÑUÀÄvÁÛ ºÉÆÃUÀÄvÀÛzÉ. FUÁUÀ¯Éà w½¹zÀAvÉ D£ÉAiÀÄ ¸É¸É ªÀÄvÀÄÛ PÀÄzÀÄgÉAiÀÄ ¸É¸É vÀ¯Á JgÀqÀÄ ¨Áj G¯ÉèÃRUÉÆArzÀÄÝ, ¥ÀÅ£ÀgÁªÀvÀð£ÉUÉÆAqÀ ªÀÄÆgÀ£ÉAiÀÄ vÉjUÉ ¥ÀzÀ EzÁVzÉ. EzÀ®èzÉ Qæ.±À. 1276gÀ ¨Á¼ÀUÀAa ±Á¸À£À `PÀlPÀ¸ÉøÉ26 (¸ÉãÉAiÀÄ ±ÀÄ®Ì)ªÀ£ÀÄß ¥Àæ¸ÁÛ¦¹gÀĪÀÅzÀÄ ¸ÀªÀÄAiÀÄzÀ CªÀ±ÀåPÀvÉAiÀÄ£ÀÄß vÉÆÃj¸ÀĪÀÅzÀgÀ eÉÆvÉUÉ AiÀÄÄzÀÞªÀÅ ¥ÀæeÉUÀ¼À ªÉÄÃ¯É ºÉÆgÉAiÀÄ£ÀÄß ¢éUÀÄtUÉƽ¸ÀÄwÛvÀÄÛ JA§ÄzÀgÀ°è JgÀqÀÄ ªÀiÁw®è.
F ±Á¸À£ÀªÀÅ ºÀ®ªÀÅ £ÀÆvÀ£À vÉjUÉ ¥ÀzÀUÀ¼À ¥ÀæAiÉÆÃUÀ ªÀiÁrgÀĪÀÅzÀ£ÀÄß £ÉÆÃqÀ§ºÀÄzÀÄ. E°è G¯ÉèÃRUÉÆAqÀ QgÀÄPÀļÀ JAzÀgÉ aPÀÌ vÉjUÉ, ¸ÀªÀiÁ£Àå ªÀ¸ÀÄÛUÀ¼ÀÄ vÉjUɬÄAzÀ «£Á¬Äw ¥ÀqÉ¢gÀ°®è JA§ÄzÀ£ÀÄß w½¸ÀÄvÀÛzÉ. EzÀ®èzÉ `C¨sÁåUÀvÉAiÀÄ£ÀÄß gÁd£ÀÄ £ÀqɸÀĪÀ Cwy ¸ÀvÁÌgÀPÁÌV vÀUÀ®ÄªÀAvÀºÀ «±ÉõÀªÁzÀ ªÉZÀѪÀ£ÀÄß ¨sÀj¸ÀĪÀÅzÀPÁÌV «¢ü¸ÀĪÀ vÉjUÉAiÀiÁVgÀ§ºÀÄzÀÄ CzÀgÀAvÉ `¥ÀÅvÉÆæÃbÁѺÀ JA§ vÉjUÉAiÀÄ£ÀÄß UÀAqÀÄ ªÀÄUÀÄ«£À d£À£ÀPÉÌ «¢ü¸ÀĪÀAvÀºÀ vÉjUÉAiÀiÁVzÀÄÝ F PÁ®WÀlÖzÀ°è UÀAqÀÄ ²±ÀÄ MAzÀÄ «±ÉõÀ ¸Ë®¨sÀå CxÀªÁ ¸ÁªÀiÁfPÀªÁV UËgÀªÀ vÀgÀĪÀAvÀºÀ «µÀAiÀĪÉAzÀÄ ¨sÁ«¸À¯ÁUÀÄwÛvÀÄÛ. gÁd£ÀÄ ¥ÀmÁÖ©üµÉÃPÀ PÁAiÀÄðPÀæªÀÄPÉÌ vÀUÀ®ÄªÀ ªÉZÀѪÀ£ÀÄß ¨sÀj¸ÀĪÀ GzÉÝñÀ¢AzÀ «¢ü¸ÀĪÀ «±ÉõÀ vÉjUÉAiÉÄà `¥ÀlÖ¨sÀzÀÞ’ ªÁVgÀ§ºÀÄzÀÄ. F ¥ÀæzÉñÀ gÁdzsÁ¤UÉ ¸À«ÄÃ¥ÀzÀ°èzÀÄÝzÀjAzÀ F vÉjUÉUÉ CºÀðgÁV¢ÝgÀ§ºÀÄzÉAzÀÄ £ÁªÀÅ UÀ滸À§ºÀÄzÀÄ. `PÉgÉ, `PÀmÉÖ, `PÁ®ÄªÉUÀ¼À ªÉÄð£À ±ÀĮ̪À£ÀÄß F ±Á¸À£À ¥Àæ¸ÁÛ¦¹zÀÄÝ PÀȶUÉ ¥ÀÇgÀPÀªÁV ¤ÃgÁªÀj ¸Ë®¨sÀåªÀ£ÀÄß ¤ÃqÀĪÀÅzÀPÉÆÌøÀÌgÀ ¥sÀ¯Á£ÀĨsÀ«UÀ½AzÀ F vÉjUÉAiÀÄ£ÀÄß ¥ÀqÉAiÀįÁUÀÄwÛvÀÄÛ. CzÀgÀAvÉ `C½ªÀÅ JA§ vÉjUÉ ¥ÀzÀ ¥ÁæPÀÈwPÀ «PÉÆÃ¥À¢AzÀ GAmÁUÀĪÀ £ÀµÀÖªÀ£ÀÄß ¸ÀjvÀÆV¸À®Ä D¥ÀwÛ£À ¸ÀAzÀ¨sÀðzÀ°è «¢ü¸À¯ÁzÀ vÉjUÉAiÉÄAzÀgÉ vÀ¥ÁàUÀ¯ÁgÀzÀÄ. E°è G¯ÉèÃRUÉÆAqÀ ªÀÄvÉÆÛAzÀÄ vÉjUÉ ¥ÀzÀ `©nÖ;27 JAzÀgÉ zÉÊ»PÀ ±ÀæªÀÄgÀÆ¥ÀzÀ vÉjUÉ EzÀ£ÀÄß ªÀÄ£ÀÄ-`PÀıÀ®PÀ«ÄðUÀ¼ÀÄ;, `±ÀÆzÀægÀÄ ªÀiÁ¹PÀªÁV MAzÉgÀqÀÄ ¢£ÀUÀ¼À zÉÊ»PÀ ±ÀæªÀĪÀ£ÀÄß gÁdåPÉÌ PÉÆqÀ¨ÉÃPÉA¢zÁÝ£É. DzÀgÉ zÀQët ¨sÁgÀvÀzÀ°è AiÀiÁªÀÅzÁzÀgÀÆ ¤ÃgÁªÀj AiÉÆÃd£ÉUÀ¼ÀÄ ªÀÄvÀÄÛ zÉêÀ¸ÁÜ£ÀzÀ ¤ªÀiÁðt PÁAiÀÄðUÀ½UÉ d£ÀjAzÀ GavÀªÁV CxÀªÁ ©nÖAiÀiÁV zÉÊ»PÀ ±ÀæªÀĪÀ£ÀÄß gÁdåzÀ CªÀ±ÀåPÀvÉUÀ½UÀ£ÀÄUÀÄtªÁV ¤ÃqÀ¨ÉÃQvÀÄÛ.28
Qæ.±À. 1117jAzÀ 1276gÀ ªÀgÉV£À CªÀ¢üAiÀÄ°è 14 PÀAzÁAiÀÄ ¸ÀA§A¢üvÀ ±Á¸À£ÀUÀ¼À°è ¥ÀæxÀªÀÄ CgÀªÀvÀÄÛ ªÀµÀðUÀ¼À CªÀ¢üAiÀÄ°è PÉêÀ® ªÀÄÆgÀÄ PÀAzÁAiÀÄ ¥ÀzÀUÀ¼À G¯ÉèÃR PÀAqÀÄ §A¢zÉ. £ÀAvÀgÀzÀ LªÀvÀÄÛ ªÀµÀðUÀ¼À CªÀ¢üAiÀÄ°è LzÀÄ ±Á¸À£ÀUÀ¼À°è 23 vÉjUÉ ¥ÀzÀUÀ¼ÀÄ PÀAqÀÄ §A¢zÉ. PÁ®PÀÌ£ÀÄUÀÄtªÁV gÁdåzÀ DzÁAiÀÄ ªÀÈ¢Þ¸À®Ä ºÉÆAiÀÄì¼ÀgÀ PÁ®zÀ°è ««zsÀ PÀAzÁAiÀÄUÀ¼À£ÀÄß «¢ü¸ÀÄvÁÛ §A¢gÀĪÀÅzÀÄ RavÀªÁV w½AiÀÄÄvÀÛzÉ. PÀAzÁAiÀÄ ¥ÀzÀUÀ¼À ªÁå¦Û PÀæªÉÄÃt ºÉaÑ, gÁdåzÀ dªÁ¨ÁÝjAiÀÄÄ ºÉZÁÑVzÀÄÝzÀÄ F ±Á¸À£ÀUÀ¼À CzsÀåAiÀÄ£À¢AzÀ £ÀªÀÄUÉ PÁtÄvÀÛzÉ. ZÀ£ÀßgÁAiÀÄ¥ÀlÖt vÁ®ÆèQ£À°è F ±Á¸À£ÀUÀ¼À PÀAzÁAiÀÄ ¥ÀzÀUÀ¼ÀÄ ºÉÆAiÀÄì¼ÀgÀ PÁ®zÀ°è DzÁAiÀÄ ºÉaѹPÉƼÀî¨ÉÃPÁzÀ C¤ªÁAiÀÄðvÉAiÀÄ£ÀÄß ªÀåPÀÛ¥Àr¸ÀÄvÀÛzÉ. EA¢£À gÁdåUÀ¼À PÀAzÁAiÀÄ ªÀåªÀ¸ÉÜAiÀÄ ªÉʱÁ®åvÉ ªÀµÀð¢AzÀ ªÀµÀðPÉÌ ºÉZÁÑUÀÄwÛgÀĪÀ jÃwAiÀįÉèà ºÉÆAiÀÄì¼ÀgÀ PÁ®zÀ®Æè PÀAzÁAiÀÄ ªÀåªÀ¸ÉÜ «¸ÀÛøvÀUÉƼÀÄîvÁÛ ¸ÁVgÀĪÀÅzÀ£ÀÄß F CzsÀåAiÀÄ£À ºÁUÀÆ «±ÉèõÀuÉUÀ¼ÀÄ RavÀ¥Àr¸ÀÄvÀÛzÉ.

DzsÁgÀ¸ÀÆa ªÀÄvÀÄÛ n¥ÀàtÂUÀ¼ÀÄ

1.      J¦UÁæ¦üAiÀÄ PÀ£ÁðnPÀ, ¸ÀA. 10, (¥ÀjµÀÌøvÀ) J.PÀ. 10, ZÀ£ÀßgÁAiÀÄ¥ÀlÖt, 
Ÿ 
2.     Dr. S. Gururajachar., Some aspects of Economic and Social Life in Karnataka, (A.D., 1000-1300), p. 142.
3.      Ibid, p.p. 142,143.
4. qÁ. JA. azÁ£ÀAzÀªÀÄÆwð., PÀ£ÀßqÀ ±Á¸À£ÀUÀ¼À ¸ÁA¸ÀÌøwPÀ CzsÀåAiÀÄ£À, (Qæ.±À. 450-1150) ¥ÀÅl 447.
5.   
6.     Dr. S. Gururajachar., Some aspects of economic and Social Life in Karnataka, (A.D., 1000-1300), p.p. 146, 143
7.     EC X CP 134, C. 1276  A..
8.     EC X CP 92 C. 1252  A.D.
9.     EC X CP 134, C. 1276  A.D
10.   EC X CP 134, C. 1276 A.D.
11.   EC X CP 78, C. 1139 A.D.
12.    EC X CP 79, C. 1139 A.D.
13.    EC X CP 9, C. 1181 A.D.
14.    EC X CP 70, C. 1223 A.D.
15.    Dr. S. Gururajachar some aspects of Economic and Social Life in Karnataka, (A.D. 1000-1300) P.157
16.    EC X CP 9, C. 1181 A.D.
17.    EC X CP 33, C. 1189 A.D.
18.    EC X CP 56, C. 1191 A.D.
19.    EC X CP 22, C. 1205 A.D.
20.          qÁ. JA. azÁ£ÀAzÀªÀÄÆwð., PÀ£ÀßqÀ ±Á¸À£ÀUÀ¼À ¸ÁA¸ÀÌøwPÀ CzsÀåAiÀÄ£À, (Qæ.±À. 450-1150) ¥ÀÅl 445..
21.    Dr. S. Gururajachar., Some aspects of Economic and Social life in Karnataka, (A.D. 1000-1300) PP.159, 160
22.    EC X CP 70, C. 1223 A.D.
23.    EC X CP 134, C. 1276 A.D.
24.    EC X CP 126, C. 1259 A.D.
25.    Dr. S. Gururajachar., Some aspects of economic and social life in karnataka, (A.D. 1000-1300) P.163
26.    EC X CP 134, C. 1276 A.D.
27.         qÁ. JA. azÁ£ÀAzÀªÀÄÆwð., `PÀ£ÀßqÀ ±Á¸À£ÀUÀ¼À ¸ÁA¸ÀÌøwPÀ CzsÀåAiÀÄ£À (Qæ.±À. 450-1150) ¦. 445.
28.   Dr. S. Gururajachar., some aspects of economic and social life in karnataka, (A.D. 1000-1300) PP.160,161.


Tuesday, August 27, 2013

ನವಶೋಧಕ್ಕೆ ಅಭಿನಂದನೆ


Murugeshi Turuvekere

I  congratulate you for the discovery of the dolmens in the Uduppi area. The dolmen is comparatively bigger than the Dolmens of Kerala.      Thank you
                                              Dr S Hemachandran

Monday, August 26, 2013

ಇತಿಹಾಸ ಪರಂಪರೆ-ಶಿವಮೊಗ್ಗ

ವರದಿ: ಡಾ.ಬಾಲಕೃಷ್ಣ ಹೆಗಡೆ
ಶಿವಮೊಗ್ಗ: ಪೂರ್ವಿಕರಿಂದ ಐತಿಹಾಸಿಕವಾಗಿ ಬಂದ ಪರಂಪರೆಗಳು ನಮ್ಮ ನಾಡಿನ ದ್ಯೋತಕವಾಗಿವೆ. ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಯವರಿಗೆ ತಲುಪಿಸುವ ಜವಾಬ್ದಾರಿ ಇಂದಿನ ಇತಿಹಾಸ ಅಧ್ಯಾಪಕರ ಹಾಗೂ ಇತಹಾಸ ಆಸಕ್ತರ ಮೀಲಿದೆ ಎಂದು ಕುವೆಂಪು ವಿಶ್ವಿವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರ ಡಾ.ರಾಜಾರಾಮ ಹೆಗಡೆ ತಿಳಿಸಿದರು.
ಅವರು ದಿ.೧೯-೦೮-೨೦೧೩ರಂದು ನಗರದ ಡಿ.ವಿ.ಎಸ್.ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಘಟಕ ಹಾಗೂ ಆ ಕಾಲೇಜಿನ ಇತಿಹಾಸ ವೇದಿಕೆ ಸಂಯುಕ್ತವಾಗಿ ಏರ್ಪಡಿಸಿದ್ದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪ್ರವಾಸೋದ್ಯಮ ದೃಷ್ಟಿಯಿಂದ ನಾಡಿನ ಪುರಾತನ ದೇವಾಲಯಗಳು, ಕೋಟೆ ಕೊತ್ತಲಗಳು, ಸ್ಮಾರಕಗಳು ಮಹತ್ವ ಪಡೆದುಕೊಂಡಿವೆಯಾದರೂ ಪ್ರತಿಯೊಂದು ಗ್ರಾಮದಲ್ಲೂ ಸಣ್ಣ ಸಣ್ಣ ಸಂಗತಿಗಳು ಪರಂಪರೆಯ ಮಹತ್ವ ಹೊಂದಿವೆ. ಅವುಗಳ ಸಂರಕ್ಷಣೆಯೂ ತೀರಾ ಮಹತ್ವದ್ದಾಗಿದೆ ಎಂದು ಅಭಿಪ್ರಾಯ ಪಟ್ಟರು.

ಶಿವಮೊಗ್ಗ ಜಿಲ್ಲೆಯಲ್ಲಿ ಲಕ್ಷಾಂತರ ವರ್ಷಗಳ ಪುರಾತನ ಸಂಸ್ಕೃತಿಗಳ ನೆಲೆಗಳು ಸಿಗುವುದು ಕಷ್ಟ ಎಂಬ ಕಲ್ಪನೆ ಇತ್ತು. ಆದರೆ ಇತ್ತೀಚಿನ ವ ರ್ಷಗಳಲ್ಲಿ ಕೈಗೊಳ್ಳಲಾದ ಭೂ ಉತ್ಖನಗಳಿಂದ ಮಲೆನಾಡು ಅದರಲ್ಲಿಯೂ ಶಿವಮೊಗ್ಗ ಜಿಲ್ಲೆಗೆ ಅತ್ಯಂತ ಪುರಾತನ ಇತಿಹಾಸವಿದೆ ಎಂದು ಭದ್ರಾ ಪ್ರಾಜೆಕ್ಟ ಪ್ರದೇಶದಲ್ಲಿ ದೊರೆತ ಪಳಿವಳಿಕೆಗಳಿಂದ ತಿಳಿದು ಬಂದಿದೆ ಎಂದರು.
ಜಿಲ್ಲೆಯಲ್ಲಿ ಪಶುಸಂಗೋಪನೆ ಅಧಿಕವಾಗಿತ್ತು ಎನ್ನುವುದು ಅನೇಕ ಕಡೆ ದೊರೆತ ಗೋಸಾಸ ಕಲ್ಲುಗಳಿಂದ ತಿಳಿದುಬರುತ್ತದೆ. ಅಲ್ಲದೆ ಮಡಿಕೆ, ಮಡಿಕೆ ಚೂರು ದೊರೆಯುವ ಸ್ಥಳ, ವೀರಗಲ್ಲು, ಮಹಾಸತಿ ಕಲ್ಲು, ನಿಷಧಿ ಕಲ್ಲು, ಗಡಿ ಕಲ್ಲುಗಳು, ನಿಲಸ್‌ಗಲ್ಲುಗಳು, ತಾಳೆಗರಿ, ತಾಮ್ರ ಪತ್ರಗಳು ನಮ್ಮ ಪೂವಿಕರು ನೀಡಿದ ಪರಂಪರೆಯಾಗಿವೆ. ಅವುಗಳನ್ನು ಶೋಧಿಸಿ ಸಂರಕ್ಷಿಸುವ ಕೆಲಸವಾಗಬೇಕು ಎಂದು ಅವರು ಕರೆ ನೀಡಿದರು.
ಮಲೆನಾಡಿಗೆ ಬಹಯ ಹಿಂದೆಯೇ  ಕಬ್ಬಣ ಬಂದ ಕುರುಹುಗಳು ಕಮ್ಮಾರಘಟ್ಟದಲ್ಲಿ ಸಿಕ್ಕ ಅವಶೇಷಗಳಿಂದ ತಿಳಿದು ಬರುತ್ತದೆ ಎಂದ ಅವರು ಪೂರ್ವಿಕರು ನೀಡಿದ ಪರಂಪರೆಯನ್ನು ಹಾಳು ಮಾಡುವ ಹಕ್ಕು ನಮಗೆ ಇಲ್ಲ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಇತಿಹಾಸ, ಪರಂಪರೆಗಳಿಗೆ ಸಂಬಂಧಿಸಿದಂತೆಇನ್ನೂ ವ್ಯಾಪಕ ಸಂಢೋಧನೆ, ಕ್ಷೇತ್ರಕಾರ್ಯಗಳು ಆಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾಡನಾಡಿದ ಅಕಾಡೆಮಿಯ ಜಿಲ್ಲಾ ಸಂಚಾಲಕ ಡಾ.ಬಾಲಕೃಷ್ಣ ಹೆಗಡೆ, ಕನಾಟಕ ಇತಿಹಾಸ ಅಕಾಡೆಮಿ ಕಳೆದ ೨೬ ವರ್ಷಗಳಿಂದ ನಾಡಿನ ಐತಿಹಾಸಕಿ ಪರಂಪರೆ ಉಳಿಸುವ ನಿಟ್ಟಿನಲ್ಲಿ ಪ್ರತಿ ವ ರ್ಷ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಂಡು ಬರುತ್ತಿದೆ. ಆನಸಾಮಾನ್ಯರಿಗೆ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ತಲುಪಿಸುವ, ಅವುಗಳನ್ನು ರಕ್ಷಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು.
ಡಿ.ವಿ.ಎಸ್.ಕಾಲೇಜಿನ ಪ್ರಾಂಶುಪಾಲ ಪ್ರೊ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಎಸ್.ಗೋಪಾಲ್, ಡಾ.ಎಸ್.ಜಿ.ಸಾಮಕ ಮೊದಲಾದವರು ಉಪಸ್ಥಿತರಿದ ಕಾಲೇಜಿನ ಇತಿಹಾಸ ವೇದಿಕೆ ಸಂಚಾಲಕ ಪ್ರೊ.ಕೆ.ಜಿ.ವೆಂಕಟೇಶ ಸ್ವಾಗತಿಸಿದರು. ಕಿರಣಕುಮಾರ ಎಚ್.ಕಾರ್ಯಕ್ರಮ ನಿರ್ವಹಿಸಿದರು. ಬಾಷಾ ವಂದಿಸಿದರು.




Sunday, August 25, 2013

ವೀರ ಸೋಮೇಶ್ವರ ದೇವಾಲಯ- ಡಾ.ಬಾಲಕೃಷ್ಣ ಹೆಗಡೆ

  

ಡಾ.ಬಾಲಕೃಷ್ಣ ಹೆಗಡೆ





ಗುರುಪುರ (ಪುರಲೆ) ವೀರಸೋಮೇಶ್ವರ ದೇವಾಲಯ-ಒಂದು ಟಿಪ್ಪಣಿ
                                             
     ಶಿವಮೊಗ್ಗ ಕರ್ನಾಟಕದಲ್ಲಿ ಪ್ರಾಚೀನ ದೇವಾಲಯಗಳ ಶ್ರೀಮಂತಿಕೆಯನ್ನು ಹೊಂದಿದ ಪ್ರಮುಖ ಪ್ರದೇಶಗಳಲ್ಲೊಂದು. ಈ ಪ್ರದೇಶವು ಸುಮಾರು ಚಾಲುಕ್ಯ ಕಾಲದಿಂದಲೂ ಬೇರೆ ಬೇರೆ ರಾಜ ಸಂತತಿಗಳ ಆಳ್ವಿಕೆಗಳ ವಿವಿಧ ವಾಸ್ತು ಶೈಲಿಗಳನ್ನೊಳಗೊಂಡ ಅನೇಕ ದೇವಾಲಯಗಳನ್ನು ಹೊಂದಿದ ಪ್ರದೇಶವಾಗಿದೆ. ಕೆಲ ದೇವಾಲಯಗಳು ಸ್ವತ: ಆಳರಸರಿಂದಲೇ ನಿರ್ಮಿತವಾಗಿದ್ದರೆ ಇನ್ನು ಕೆಲವು ಅವರ ಸಾಮಂತರ, ಮಾಂಡಲೀಕರ, ಅಂದಿನ ಕಾಲದ ವರ್ತಕರ ಮತ್ತು ವ್ಯಕ್ತಿಗತವಾಗಿ ಧರ್ಮದ ಬಗ್ಗೆ ಶ್ರದ್ಧಾ-ಭಕ್ತಿಯುಳ್ಳವರಿಂದ ನಿರ್ಮಿತ ದೇವಾಲಯಗಳು ಈ ಪ್ರದೇಶದಲ್ಲಿವೆ. ಇವುಗಳಲ್ಲಿ ಹೆಚ್ಚಿನವು ಜೈನ, ಶೈವ, ವೀರಶೈವ ಹಾಗೂ ಅಪರೂಪಕ್ಕೆ ಶಾಕ್ತ ದೇವಾಲಯಗಳು ಕಂಡುಬರುತ್ತವೆ.
     ಬಹುತೇಕ ಜೈನ ಬಸದಿಗಳು, ವೈಷ್ಣವ ದೇವಾಲಯಗಳು ಕಾಲಾನಂತರದಲ್ಲಿ ಅಂದಿನ ಪ್ರಸಿದ್ಧ ಅರಸರು, ಅವರ ಅಧಿಕಾರಿಗಳ ಪ್ರಭಾವಗಳಿಂದ ಶೈವ ದೇವಾಲಯಗಳಾಗಿ ಮಾರ್ಪಟ್ಟಿದ್ದನ್ನೂ ಇಲ್ಲಿ ಕಾಣುತ್ತೇವೆ. ಇಂಥಹ ದೇವಾಲಯಗಳ ವಾಸ್ತು ಶೈಲಿಯನ್ನು, ಅಲ್ಲಿ ಕಂಡುಬರುವ ವಾಸ್ತು ಲಕ್ಷಣಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ  ಆ ದೇವಾಲಯಗಳ ಮೂಲಗಳ ಕುರಿತು ಮಾಹಿತಿ ದೊರಕುತ್ತದೆ.
     ವಾಸ್ತು ವಿನ್ಯಾಸದ ಪ್ರಕಾರ, ದೇವಾಲಯಗಳ ತಲವಿನ್ಯಾಸ, ಸಾಮಾನ್ಯವಾಗಿ ಎಲಿವೇಶನಲ್ ಸಂಗತಿಗಳು, ಬೇರೆ ಬೇರೆ ಪಂಥಗಳಿಗೆ ಸಂಬಂಧಿಸಿದ ದೇವಾಲಯಗಳು, ಬೇರೆ ಬೇರೆ ಕಾಲಘಟ್ಟಕ್ಕೆ ಸೇರಿದವುಗಳು ಹೆಚ್ಚು ಕಡಿಮೆ ಒಂದೇ ತೆರನಾಗಿ ಕಂಡುಬರುತ್ತವೆ. ಮಾರ್ಪಾಡುಗೊಂಡ ದೇವಾಲಯಗಳ ಭಿತ್ತಿಗಳ ಮೇಲಿರುವ ಕೇವಲ ಶಿಲ್ಪಗಳ ಅಭಿವ್ಯಕ್ತಿ, ದ್ವಾರಪಾಲಕರ ಕೆತ್ತನೆಗಳು, ಲಲಾಟಬಿಂಬಗಳಲ್ಲಿನ ಚಿಕಣಿ ಶಿಲ್ಪಗಳುಮೊದಲಾದವು ಆ ದೇವಾಲಯ ಮೂಲತ: ಯಾವ ಪಂಥಕ್ಕೆ ಅಥವಾ ಧರ್ಮಕ್ಕೆ ಸೇರಿದ್ದು ಎಂಬುದನ್ನು ತಿಳಿಸುವುದೂ ವಿಶೇಷವಾಗಿದೆ.
     ಶಿವಮೊಗ್ಗ ಪ್ರದೇಶದಲ್ಲಿ ಅಂಥ ಲಕ್ಷಣಗಳನ್ನು ಹೊಂದಿದ ಕೆಲ ಜೈನ ಬಸದಿಗಳಿವೆ. ವಾಸ್ತು ಶೈಲಿಯ ಪ್ರಕಾರ ಅವು ತಮ್ಮದೇ ಆದ ಕೆಲ ವೈಶಿಷ್ಟ್ಯತೆಗಳನ್ನು ಹೊಂದಿವೆ.  ಒಂದು ಕಾಲದಲ್ಲಿ ದೇವಾಲಯ ವಾಸ್ತು ಶೈಲಿಯ ಬೆಳವಣಿಗೆಗೆ ಈ ಜೈನ ದೇವಾಲಯಗಳು ಮಹತ್ತರ ಕೊಡುಗೆ ನೀಡಿದ್ದೂ ಕಂಡುಬರುತ್ತದೆ. ಅಂಥಹ ದೇವಾಲಯಗಳಲ್ಲಿ ಶಿವಮೊಗ್ಗ ಗುರುಪುರ (ಪುರಲೆ)ದಲ್ಲಿರುವ ಶ್ರೀ ವೀರಸೋಮೇಶ್ವರ ದೇವಾಲಯ ಒಂದು.
     ಈ ದೇವಾಲಯದ ವಾಸ್ತು ಶೈಲಿ, ಅದರಲ್ಲಿನ ಮೂಲ ಕೆತ್ತನೆ ಇತ್ಯಾದಿಗಳನ್ನು ಅವಲೋಕಿಸಿದಾಗ ಮೂಲತ: ಇದೊಂದು ಜೈನ ಬಸದಿಯಾದ್ದು ಹೊಯ್ಸಳ ಕಾಲಕ್ಕೆ ಸೇರಿದ್ದಾಗಿರುವುದಾಗಿ ತಿಳಿದು ಬರುತ್ತದೆ. ದೇವಾಲಯದ ಗರ್ಭಗೃಹದಲ್ಲಿರುವ ಕಪ್ಪು ಶಿಲೆಯ ಉದ್ದನೆ ಪಾಣಿ ಪೀಠದ ಆಕಾರ ಬಹುಷ: ಅದು ಜೈನ ವಿಗ್ರಹವನ್ನು ಪ್ರತಿಷ್ಠಾಪಿಸಲು ಮಾಡಿದ್ದಿರಬಹುದೆಂದು ಕಂಡುಬರುತ್ತದೆ. ಸಾಮಾನ್ಯವಾಗಿ ಇಂಥ ಪೀಠಗಳು ಶಿವಲಿಂಗ ಸ್ಥಾಪಿಸಲು ಬಳಸಲಾಗುವುದಿಲ್ಲ ಎಂಬ ಪ್ರತೀತಿ ಇದೆ. ಈ ಪೀಠದ ಈ ಪೀಠದ ಮೇಲೆ ಹತ್ತು ಸಾಲಿನ ಶಾಸನವಿದ್ದು ಕ್ರಿ.ಶ.೧೧-೧೨ನೇ ಶತಮಾನದ ಹಳೆಗನ್ನಡ ಭಾಷೆಯಲ್ಲಿದೆ.
     ಈ ಶಾಸನದಲ್ಲಿ ವೀರ ಬಲ್ಲಾಳ, ನೀಮಿಚಂದ್ರ ಭಟ್ಟಾರಕ ದೇವರಿಗೆ, ನಾಲು ಪ್ರಭು ಇತ್ಯಾದಿ ಶಬ್ದಗಳು ಗಮನ ಸೆಳೆಯುತ್ತವೆ. ಹೊಯ್ಸಳ ಅರಸು ತ್ರಿಭುವನಮಲ್ಲ ಎಂಬ ಬಿರುದನ್ನು ಹೊಂದಿದ ವೀರ ಬಲ್ಲಾಳ ಜೈನ ದೇವಾಲಯಗಳಿಗೆ ಹೆಚ್ಚಿನ ದಾನ ನೀಡಿದ್ದನ್ನು ಉಲ್ಲೇಖಿಸಬಹುದು. ಈತ ಕೇವಲ ತನ್ನ ರಾಜಧಾನಿಯಲ್ಲಷ್ಟೇ ಅಲ್ಲ ರಾಜಧಾನಿಯ ಹೊರಗೂ ಅನೇಕ ಜೈನ ದೇವಾಲಯಗಳನ್ನು ನಿರ್ಮಿಸಿದ್ದ.
     ಈ ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ ದೇವಾಲಯದ ಅಧಿಷ್ಠನದಲ್ಲಿ ಹೊಯ್ಸಳ ವಾಸ್ತು ಶೈಲಿಯಲ್ಲಿ ಕಂಡುಬರುವ ಭದ್ರ ಕರಣಗಳು ಕಂಡುಬರುತ್ತವೆ. ದೇವಾಲಯ ಚೌಕಾಕಾರದ ಗರ್ಭಗೃಹ ಹೊಂದಿದ್ದು ಚೌಕಾಕರದ ಅಂತರಾಳವನ್ನೂ ಹೊಂದಿದೆ. ಮೊದಲು ದೇವಾಲಯಕ್ಕೆ ಮುಖ ಮಂಟಪವಿತ್ತು. ಆದರೆ ಈಗ ಅದು ಇಲ್ಲ. ಮುಖಮಂಟಪದ ಕಂಬ ಇತ್ಯಾದಿಗಳನ್ನು ಶಿವಮೊಗ್ಗ ಕೋಟೆ ಆಚಿಜನೇಯ ದೇವಸ್ಥಾನಕ್ಕೆ ಸ್ಥಳಾಂತರಿಸಿ ಅಲ್ಲಿ ಮುಖ ಮಂಟಪ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.
     ಅಲ್ಲಿನ ತಿರುಗುಣಿ ಸ್ಥಂಭವೊಂದರ ಪೀಠದಲ್ಲಿರುವ ಶಾಸನವನ್ನು ಡಾ.ಎಚ್.ಆರ್.ರಘುನಾಥ ಭಟ್ಟ ಅವರು ಓದಿದ್ದು ಅದು ಹೊಯ್ಸಳ ಕಾಲಕ್ಕೆ ಸೇರಿದ್ದೆಂದೂ ಜೈನ ಧರ್ಮದ ಬಗ್ಗೆ ಮಾಹಿತಿ ಇದೆ ಎಂದೂ ತಮ್ಮ ವರದಿಯಲ್ಲಿ ಪ್ರಕಟಿಸಿದ್ದಾರೆ. ಕೆಳದಿ ಅರಸರು ಶೈವ ಧರ್ಮಾವಲಂಬಿಗಳಾಗಿದ್ದು  ಪುರಲೆಯಲ್ಲಿದ್ದ ಈ ತಿರುಗುಣಿ (ಐಚಿಣheಜ) ಕಂಬಗಳನ್ನು ಕೋಟೆ ಆಂಜನೇಯ ದೇವಸ್ಥಾನದಲ್ಲಿ ತಂದಿರಿಸಿದ್ದಿರಬಹುದೆಂದು ನಂಬಲಾಗಿದೆ.
     ಪುರಲೆ ದೇವಾಲಯದ ಈಗಿನ ಅಂತರಾಳದ ಲಲಾಟಬಿಂಬದಲ್ಲಿನ ಚಿತ್ರಗಳು ಜೈನದಿಂದ ಶೈವಕ್ಕೆ ಮಾರ್ಪಾಟು ಹೊಂದಿದ್ದನ್ನು ಕಾಣುತ್ತೇವೆ. ಕುಳಿತ ಭಂಗಿಯಲ್ಲಿನ ಜೈನ ತೀರ್ಥಂಕರ ವಿಗ್ರಹವನ್ನು ಪರಿವರ್ತಿಸಿ ನಾಗ ಲಿಂಗ ಶಿಲ್ಪವನ್ನಾಗಿಸಿದ್ದಾರೆ. ಗರ್ಭಗೃಹದ ಪಾಣಿ ಪೀಠದಲ್ಲಿ ಶಿವ ಲಿಂಗ ಪ್ರತಿಷ್ಠಾಪಿಸಲಾಗಿದೆ. ಕೋಟೆ ಶ್ರೀ ಆಂಜನೇಯ ದೇವಾಲಯದ ಗರ್ಭಗೃಹದ ಲಲಾಟಬಿಂಬದಲ್ಲೂ ಜೈನ ತೀರ್ಥಂಕರ ವಿಗ್ರಹದ ಜಾಗದಲ್ಲಿ ಶಿವ ಲಿಂಗ ಕಾಣುತ್ತೇವೆ.
     ವೀರ ಸೋಮೇಶ್ವರ ದೇವಾಲಯದ ಹಿಂಭಾಗದಲ್ಲಿ ನಿಂತ ಭಂಗಿಯಲ್ಲಿರುವ ಸಾಬೂನು ಶಿಲೆಯ ಮೂರು ಭಗ್ನ ಜೈನ ವಿಗ್ರಹಗಳಿವೆ. ಇವು ಹೊಯ್ಸಳ ಶಿಲ್ಪಕಾರರಿಂದ ಕೆತ್ತಲ್ಪಟ್ಟಿವೆ. ದೇವಾಲಯದ ಮುಂಭಾಗದಲ್ಲಿ ಕಪ್ಪು ಶಿಲೆಯ ಪಾರ್ಶ್ವನಾಥ ವಿಗ್ರಹವೊಂದಿದೆ.  ಕಾಲ ಕಾಲದಲ್ಲಿ ಈ ದೇವಾಲಯ ನಿರ್ಮಾಣದಲ್ಲಿ ಬದಲಾವಣೆಯಾಗಿದ್ದನ್ನೂ ಕಾಣುತ್ತೇವೆ.
ಹೊಸ ಶಾಸನ ಶೋಧ :

     ಈ ದೇವಾಲಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯವೆಂದೆ ನನ್ನ ಕ್ಷೇತ್ರ ಕಾರ್ಯದಲ್ಲಿ ಪತ್ತೆ ಮಾಡಿದ ಜಾಲಂದ್ರ ಶಾಸನ. ದೇವಾಲಯದ ಅಂತರಾಳದ ಬಲ ಭಾಗದ ಕಿಟಕಿಯ ಮೇಲ್ಗಡೆ ಇರುವ  ಮೂರು ಸಾಲಿನ, ಒಂದು ಅಡಿ ಉದ್ದದ ಚಿಕ್ಕ ಶಾಸನ ಇದು.  ಅಂತರಾಳದ ಎಡ ಭಾಗದಲ್ಲೂ ಒಂದು ಶಾಸನವಿದ್ದು ಸಂಪೂರ್ಣ ತ್ರುಟಿತಗೊಂಡಿದೆ. ಬಲ ಭಾಗದಲ್ಲಿರುವ ಜಾಲಂದ್ರದಲ್ಲಿರುವ ಶಾಸನದ ಪಾಠ ಇಂತಿದೆ:
೧.     ...ರರಚ್ಚರಮಿಳಕಳತ ಪ್ರವೀಣ.ಕೆಗೆ..ನಾದ
೨.     ರ‍್ವಸಳ.ಗ್ರ ವರ.ತ್ಯಾ ಸತ್ಯವಾದಿನ..ಪ್ರ
೩.     ದೆ
ಇಲ್ಲಿ ಉದ್ಭವಿಸಿರುವ ಪ್ರಶ್ನೆಗಳು:
೧.     ಈ ದೇವಾಲಯ ಹೊಯ್ಸಳ ತ್ರಿಕೂಟಾಚಲ ದೇವಾಲಯವಾಗಿತ್ತೆ?
೨.     ಈ ದೇವಾಲಯದ ಮುಂಭಾಗದಲ್ಲಿ ತೆರೆದ ಅಂಗಳದಲ್ಲಿರಿಸಲಾಗಿರುವ ಕಪ್ಪು ಶಿಲೆಯ ಏಳು ಹೆಡೆ ಸರ್ಪ ಹೊಂದಿರುವ ಸುಪಾರ್ಶ್ವನಾಥ? ವಿಗ್ರಹ ದೇವಾಲಯದ ಗರ್ಭಗೃಹದಲ್ಲಿರುವ ಕಪ್ಪು ಶಿಲಿಯ ಪಾಣಿ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿತ್ತೆ?
೩.     ಶಾಸನದಲ್ಲಿ ಉಕ್ತವಾಗಿರುವ ಪ್ರವೀಣ ಎಂಬ ಪದ ಶಿಲ್ಪಿಯದೆ?ಅಥವಾ ದೇವಾಲಯದ ವಾಸ್ತು ಶಿಲ್ಪಕಾರನದ್ದಾಗಿರಬಹುದೆ? ಕೊನೆಯದಾಗಿ
೪.     ಶಾಸನದ ಕೊನೆಯ ಪದ ನಾದ ಪದ ಯಾವುದಾದರೂ ಗಣಗಳಾಗಿದ್ದಿರಬಹುದೆ? ಇತ್ಯಾದಿ.
     ಒಟ್ಟಿನಲ್ಲಿ ಈ ದೇವಾಲಯದ ಸಮಗ್ರ ಮಾಹಿತಿಯನ್ನು ಅರಿಯಲು ಇದಕ್ಕೆ ಸಂಬಂಧಿಸಿದಂತೆ ಇನ್ನ ಷ್ಟು ಹೆಚ್ಚಿನ ಅಧ್ಯಯನ ಆಗಬೇಕಿದೆ. ಈ ಶಾಸನವನ್ನು ಓದಲು ಸಹಕರಿಸಿದ ಕರ್ನಾಟಕ ಸರ್ಕಾರದ ಪರಂಪರೆ, ಪುರಾತತ್ವ ಇಲಾಖೆಯ ಇಂಜಿನೀಯರ್ ಡಾ.ಜಗದೀಶ ಅಗಸೆಬಾಗಿಲವರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಆಧಾರ ಗ್ರಂಥಗಳು:
೧.ಡಾ.ಅ.ಸುಂದರ, ಸಮ್ ಜೈನ ಟೆಂಪಲ್ಸ್ ಇನ್ ನಾರ್ಥ ಕರ್ನಾಟಕ ಆಂಡ್ ಇಟ್ಸ್ ಡಿಸ್ಟಿಂಕ್ಟಿವ್ ಫೀಚರ‍್ಸ.
೨. ಎಫಿಗ್ರಾಫಿಯಾ ಕರ್ನಾಟಿಕಾ ಸಂ.೧. ಐ, ಮೈಸೂರು ಆರ್ಕಿಯಾಲಾಜಿಕಲ್ ಸೀರಿಸ್.
೩. ನನ್ನ ಕ್ಷೇತ್ರ ಕಾರ್ಯ ಹಾಗೂ ಡಾ.ಜಗದೀಶ್ ಅಗಸೆಬಾಗಿಲವರ ಅವರ ಜತೆ ಚರ್ಚೆ.
------------------------------------------
ಡಾ.ಬಾಲಕೃಷ್ಣ ಹೆಗಡೆ, ಇತಿಹಾಸ ವಿಭಾಗ, ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು,
ಶಿವಮೊಗ್ಗ-೫೭೭ ೨೦೧, ಮೊ.೦೯೪೪೮೧೮೧೪೯೨, ಮೇಲ್: ಜಡಿ.bಚಿಟಚಿಞಡಿishಟಿಚಿhege@gmಚಿiಟ.ಛಿom





Saturday, August 24, 2013

ಅರಗರಾಜ್ಯದ ಭೌಗೋಳಿಕ ವ್ಯಾಪ್ತಿ-ಸುಕಂ ಗೋವರ್ಧನ್‌

ಶಾಸನಗಳ ಹಿನ್ನೆಲೆಯಲ್ಲಿ ಆರಗ ರಾಜ್ಯದ ಭೌಗೋಳಿಕ ವ್ಯಾಪ್ತಿ
ಸುಂಕಂ ಗೋವರ್ಧನ
ವಿಜಯನಗರವು ಅರಸರು ಸಾಮ್ರಾಟರಾಗಿ ಆಡಳಿತ ವನ್ನು ಆರಂಭಿಸಿದ ನಂತರ ತಮ್ಮ ಒಟ್ಟು ಸಾಮ್ರಾಜ್ಯವನ್ನು ಹಲವಾರು ರಾಜ್ಯಗಳಾಗಿ ವಿಂಗಡಿಸಿ ಅಧಿಕಾರದ ವಿಕೇಂದ್ರೀಕರಣವನ್ನು ಮಾಡಿದರು. ವಿಜಯನಗರದ ಆರಂಭದ ಅರಸರಾದ ಸಂಗಮರೇ ಈ ರೀತಿಯ ಪ್ರಕ್ರಿಯೆಗೆ ನಾಂದಿ ಹಾಡಿದವರು. ಐದೂ ಜನ ಸಂಗಮ ಸೋದರರು ವಿವಿಧ ಭಾಗಗಳಲ್ಲಿ ನೆಲೆ ನಿಂತು ವಿಸ್ತಾರವಾದ ಸಾಮ್ರಾಜ್ಯದ ಅಧಿಕಾರವನ್ನು ನೋಡಿಕೊಳ್ಳುತ್ತಿದ್ದರು. ಆಯಾ ಪ್ರದೇಶಗಳ ಭೌಗೋಳಿಕ ಅಂಶಗಳನ್ನು ಸರಿಯಾಗಿ ಗುರುತಿಸಿ ಅದರಂತೆಯೇ ಆಡಳಿತ ಘಟಕಗಳನ್ನು ಏರ್ಪಡಿಸುತ್ತಾ ನಡೆದರು.
ಹೀಗೆ ರೂಪುಗೊಂಡ ರಾಜ್ಯಗಳಲ್ಲಿ ಮಲೆನಾಡಿನ ಭಾಗವನ್ನು ಮಲೆರಾಜ್ಯವೆಂದು ಕರೆದು ಸುತ್ತಮುತ್ತಲ ನಾಡುಗಳನ್ನು ಈ ರಾಜ್ಯದಲ್ಲಿ ಅಂತರ್ಗತಗೊಳಿಸಲಾಯಿತು. ಈ ಮಲೆರಾಜ್ಯವನ್ನು ಆರಗ ರಾಜ್ಯವೆಂದು ಕರೆಯುತ್ತಿದ್ದರು. ಕಾರಣ ಆರಗ ಇದರ ರಾಜಧಾನಿಯಾಗಿತ್ತು. ಸಂಗಮ ದೊರೆಗಳ ಸೋದರರಲ್ಲಿ ಒಬ್ಬನಾದ ಮಾರಪ್ಪ ಒಡೆಯನು ಈ ಆರಗ ರಾಜ್ಯದ ಚುಕ್ಕಾಣಿಯನ್ನು ಹಿಡಿದನು. ಆರಗದ ೧೮ ಕಂಪಣಗಳೂ ಹಾಗೂ ಗುತ್ತಿಯ ೧೮ ಕಂಪಣಗಳನ್ನು ಒಳಗೊಂಡ ಆರಗ-ಗುತ್ತಿ ೩೬ ಕಂಪಣಗಳಿಗೆ ಮಾದಪ್ಪನು ಒಡೆಯನಾಗಿದ್ದನು.
ಆರಗ
ಇಂದಿನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೋಬಳಿಕೇಂದ್ರವಾಗಿರುವ ಆಗರವು ಇತಿಹಾಸದಲ್ಲಿ ರಾಜಧಾನಿಯಾಗಿ ಮೆರೆದ ಊರಾಗಿದೆ. ಆರಗವು ಭೌಗೋಳಿಕವಾಗಿ ತುಂಗಾ ನದಿಯ ತೀರದಲ್ಲಿದೆ. ಸಣ್ಣ ತೊರೆಗಳಾದ ಕುಶಾವತಿ ಮತ್ತು ಗೋಪೀನಾಥಗಳು ಆರಗದ ಬಳಿಯೇ ಹರಿಯುತ್ತದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಅತ್ಯಂತ ಸಂಪದ್ಭರಿತ ವನರಾಶಿಯಿಂದಲೂ, ಸಮೃದ್ಧವಾದ ನೀರಿನಿಂದಲೂ ತುಂಬಿರುವ ಆರಗವು ವಿಪುಲವಾದ ಕಾಡಿನಿಂದ ಆವರಿಸಲ್ಪಟ್ಟಿದೆ. ಹೀಗೆ ವಿಪುಲವಾದ ಪ್ರಾಕೃತಿಕ ಸಂಪತ್ತು ಇರುವುದರಿಂದಲೇ ಮಾರುಕಟ್ಟೆ ಬೆಳೆಯನ್ನು ಬೆಳೆಯುವ ಪ್ರದೇಶವಾಗಿದೆ. ಇಲ್ಲಿನ ಸಾಂಬಾರ ಪದಾರ್ಥಗಳಿಗೆ ದೇಶ-ವಿದೇಶಗಳ ಮಾರುಕಟ್ಟೆಗಳಲ್ಲಿ ಉತ್ತಮ ಬೆಲೆಯಿದೆ. ವ್ಯಾಪಾರಕ್ಕೆ ಪೂರಕವಾದ ವಾತಾವರಣವಿರುವುದರಿಂದಲೇ ಇಲ್ಲಿ ದೊಡ್ಡ ಗ್ರಾಮವೊಂದು ಮೂಡಿ ರಾಜಧಾನಿಯಾಗಿ ರೂಪುಗೊಂಡಿತು.
ಆರಗವು ಗಂಗರ ಕಾಲದಲ್ಲಿ ಮಂಡಳಿ ೧೦೦೦ ಎಂಬ ಆಡಳಿತ ವಿಭಾಗದಲ್ಲಿ ಅಂತರ್ಗತವಾಗಿದ್ದ ಒಂದು ಸಣ್ಣ ಗ್ರಾಮವಾಗಿತ್ತು. ಆಗ ಆರಗಕ್ಕೆ ಅಂತಹ ವಿಶೇಷವಾದ ಪ್ರಾಶಸ್ತ್ಯವೇನೂ ಇರಲಿಲ್ಲ. ನಂತರ ಹೊಯ್ಸಳರ ಕಾಲದಲ್ಲಿ ಸಾಂತಳಿಗೆ ನಾಡು ರೂಪುಗೊಂಡಾಗ ಆರಗವು ಈ ಸಾಂತಳಿಗೆ ನಾಡಿನಲ್ಲಿತ್ತು. ಮುಂದೆ ಹೊಂಬುಜವನ್ನು [ಇಂದಿನ ಹುಂಚ] ಕೇಂದ್ರವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಶಾಂತರರು ಇದೇ ಶಾಂತಳಿಗೆ ನಾಡನ್ನು ವಿಸ್ತರಿಸಿ ಸಾಂತಳಿಗೆ ಸಾವಿರ ಎಂಬ ಆಡಳಿತ ಘಟಕವನ್ನು ರೂಪಿಸಿದರು.
ಮುಂದೆ ವಿಜಯನಗರದ ಅರಸರ ಕಾಲದಲ್ಲಿ ತುಂಗಾ ನದಿಯ ತೀರದಲ್ಲಿರುವ ಆರಗಕ್ಕೆ ವಿಶೇಷವಾದ ಸ್ಥಾನಮಾನ ದೊರೆಯುವಂತಾಯಿತು. ಸಮುದ್ರಯಾನದಿಂದ ನಡೆಯುತ್ತಿದ್ದ ವ್ಯಾಪಾರಕ್ಕೆ ಆರಗವು ಮುಖ್ಯ ಹೆಬ್ಬಾಗಿಲಾಗಿತ್ತು. ಆರಗದ ಮೂಲಕ ಸಾಮಾನು-ಸರಂಜಾಮುಗಳು ಸಾಗಣೆಯಾಗುತ್ತಿತ್ತು. ಅದುದರಿಂದ ವಿಸ್ತಾರವಾದ ಮಲೆ ರಾಜ್ಯವನ್ನು ಕಟ್ಟಬೇಕಾದ ಸಂದರ್ಭದಲ್ಲಿ ಆರಗಕ್ಕೆ ಹೆಚ್ಚಿನ ಸ್ಥಾನಮಾನವನ್ನು ನೀಡಿ ಆರಗವನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡಲಾಯಿತು.
ಆರಗ ರಾಜ್ಯವನ್ನು ಉಲ್ಲೇಖಿಸುವ ಶಾಸನಗಳು ೧೩೬೨ ರಿಂದ ಆರಂಭವಾಗಿ ವಿಜಯನಗರದ ಕೊನೆಯ ಕಾಲಘಟ್ಟವಾದ ೧೬೬೫ರವರೆಗೆ ಇದೆ. ವಿಜಯನಗರದ ಆಡಳಿತದ ನಂತರವು ಬಹುತೇಕ ಆರಗ ರಾಜ್ಯವು ಕೆಳದಿಯ ಅರಸರ ಆಡಳಿತಕ್ಕೆ ಸಂದು ಕ್ರಿ.ಶ.೧೬೯೫ರವರೆಗೆ ದಾಖಲಾಗಿದೆ. ಈ ಆರಗ ರಾಜ್ಯದಲ್ಲಿ ೧೮ ಕಂಪಣಗಳು ಹಾಗೂ ಮೂರು ಪಟ್ಟಣಗಳು ಇದ್ದವು ಎಂದು ಬಹುತೇಕ ಶಾಸನಗಳು ತಿಳಿಸುತ್ತವೆ. ಒಳಗೋಡಿನ ಕ್ರಿ.ಶ.೧೫೬೦ರ [ತೀರ್ಥಹಳ್ಳಿ ೧೮೦] ಶಾಸನವೊಂದು ಆರಗ ರಾಜ್ಯದಲ್ಲಿ ೫೦ ನಾಡುಗಳು ಅಂತರ್ಗತವಾಗಿದ್ದವು ಎಂದು ತಿಳಿಸುತ್ತದೆ. ಭಾರತೀಪುರ ಹಾಗೂ ಹುಂಚದ ಕಟ್ಟೆಯ ಶಾಸನಗಳು ಆರಗ ರಾಜ್ಯದಲ್ಲಿ ಪ್ರಮುಖವಾದ ೬೦ ಅಗ್ರಹಾರಗಳಿದ್ದವು ಎಂದು ತಿಳಿಸುತ್ತದೆ.
ಕಂಪಣವೆನ್ನುವುದು ಬಹುಶಃ ನಾಡಿನಂತೆಯೇ, ಶಬ್ದಕೋಶವು ಕಂಪಣವನ್ನು ನಾಡಿನ ಒಂದು ಭಾಗವೆಂದು ತಿಳಿಸುತ್ತದೆ. ಆದರೆ ಆರಗ ರಾಜ್ಯದಲ್ಲಿ ೫೦ ನಾಡುಗಳು ಇರುವ ಸೂಚನೆ ಶಾಸನದಲ್ಲಿಯೇ ಇರುವುದರಿಂದ ಕೆಲವು ನಾಡುಗಳ ಆಡಳಿತವು ಒಂದು ಕಂಪಣಕ್ಕೆ ಸಂದು ಇಂತಹ ೧೮ ಕಂಪಣಗಳು ಆರಗ ರಾಜ್ಯದಲ್ಲಿದ್ದವು. ಈ ಆರಗ ೧೮  ಕಂಪಣವನ್ನು ಇಚ್ಛೆ ೯ ಕಂಪಣ ಹಾಗೂ ಈಳೆ ೯ ಕಂಪಣ ಎಂದು ಎರಡು ರೀತಿಯಲ್ಲಿ ವಿಂಗಡಿಸಲಾಗಿತ್ತು.
ಆರಗ ರಾಜ್ಯದಲ್ಲಿ ೫೦ ನಾಡುಗಳಿದ್ದವು ಎನ್ನುವ ಉಲ್ಲೇಖವಿದ್ದರೂ ಅಷ್ಟು ನಾಡುಗಳ ಹೆಸರುಗಳು ನಮಗೆ ದೊರಕುವುದಿಲ್ಲ. ಶಾಸನಾಧಾರಗಳಿಂದ ತಿಳಿಯಬಹುದಾದಷ್ಟು ನಾಡುಗಳನ್ನು ಈ ಮುಂದೆ ವಿವರಿಸಲಾಗಿದೆ.
ಮಧುವಂಕ ನಾಡು
ಆರಗ ಅಥವಾ ತೀರ್ಥಹಳ್ಳಿಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ತನ್ನ ಸುತ್ತಮುತ್ತಲಿನ ಅನೇಕ ಗ್ರಾಮಗಳ ಆಡಳಿತ ಕೇಂದ್ರವಾಗಿ ಮಧುವಂಕನಾಡು ಖ್ಯಾತವಾಗಿತ್ತು. ಆರಗ ರಾಜ್ಯದ ಇತಿಹಾಸದಲ್ಲಿ ಮಧುವಂಕನಾಡಿಗೆ ವಿಶೇಷ ಮಹತ್ವವಿದೆ. ಅತ್ತಿಗಾರು, ಅಲುಗವಳ್ಳಿ, ಬಾಳಗೋಡು, ಮಳಲಿ, ಜಂಬೆ, ಬಸವನ ಕಲ್ಲು, ನೆರಟೂರು, ಹೊರಣಿ, ಶಿವರಾಜಪುರ, ಯಡೆಹಳ್ಳಿ, ಸಾಲೂರು, ಕೊಡಸಗೊಳಿ, ಬಳ್ಳೂರು, ಸೂರಳಿ, ಮರಗಳಲೆ, ಜೆಗಟಿಗಾರೆ, ಮಹಿಷಿ, ಕೂಳೂರು, ಬಿಕ್ಕನೂರು, ಬಸವಾನಿ, ಮತ್ತೂರು ಮುಂತಾದ ಊರುಗಳು ಈ ನಾಡಿನಲ್ಲಿ ಸೇರಿಕೊಂಡಿದ್ದವು.
ಈ ನಾಡಿನ ವಿಶೆಷವೆಂದರೆ ಕೆಲವು ಗ್ರಾಮಗಳ ಸಮುಚ್ಚಯವನ್ನು ‘ಬಾಗೆ ಎಂದು ಕರೆಯುತ್ತಿದ್ದರು. ಈ ಭಾಗೆಗಳೆಂದರೆ ಭಾಗಗಳು ಎಂದೇ ಅರ್ಥ. ಮೇಲುಬಾಗೆಯಲ್ಲಿ ಬೊಂದಿ, ಕಲ್ಲಿನಾಥಪುರ, ತೊರಗಲೆಗಳಿದ್ದವು. ಸಾಲೂರು ಬಾಗೆಯಲ್ಲಿ ಸಿಂಗಪೊಟ್ಟಣ, ಸಾಲೂರು, ಕೋಳೂರುಗಳಿದ್ದವು. ಬೆಳ್ಳುರು ಬಾಗೆಯಲ್ಲಿ ಭಾರತೀಪುರ ಹಾಗೂ ಭಾವರಸನ ಕೊಪ್ಪ ಗ್ರಾಮಗಳಿದ್ದವು.
ಮಧುವಂಕ ನಾಡಿನಲ್ಲಿ ಕೆಲವು ಪಟ್ಟಡಿಗಳಿದ್ದವು. ಈ ಪಟ್ಟಡಿಗಳು ಕಂದಾಯ ವ್ಯವಸ್ಥೆಯ ಕೇಂದ್ರಭಾಗವಾಗಿದ್ದವು. ಕೊಡಸಗೊಳಿ ಪಟ್ಟಡಿಯಲ್ಲಿ ಬೊಬ್ಬಳ್ಳಿ, ವಡದಕೆರೆ ಗ್ರಾಮ, ಹಿಂಡಚವಳ್ಳಿ, ಕುಕ್ಕರಿ ಗ್ರಾಮ, ಮಾವಕೋಡು ಗ್ರಾಮ ಹಾಗೂ ಕೇದಗೆ ಬಯಲು ಗ್ರಾಮಗಳಿದ್ದವು. ಜಂಬೇ ಪಟ್ಟಡಿಯಲ್ಲಿ ಮರಗಳಲೆ, ನಿರಜವಳ್ಳಿ ಹಾಗೂ ಬಸವನಕಲ್ಲು ಗ್ರಾಮಗಳಿದ್ದವು. ವಂಬೀ ಪಟ್ಟಡಿಯಲ್ಲಿ ಬಸವನಕಲ್ಲು ಗ್ರಾಮವಿತ್ತು. ನೆರಟೂರು ಪಟ್ಟಿಡಿಯಲ್ಲಿ ಸೂರಳಿ ಗ್ರಾಮವಿತ್ತು.
ಈ ನಾಡು ಇಂದಿನ ತೀರ್ಥಹಳ್ಳಿ ತಾಲ್ಲೂಕಿನ ಬಹುಭಾಗವನ್ನು ಆವರಿಸಿತ್ತು. ಈ ನಾಡಿನಲ್ಲಿ ಬೊಂಮಾಪುರ ಅಗ್ರಹಾರ, ಚೌಡೇಶ್ವರಿಪುರ, ಅಭಿನವ ಗೋಪೀನಾಥಪುರ, ತೀರ್ಥರಾಜಪುರ, ಮುಕ್ತ ಹರಿಹರಪುರ, ಲಕ್ಷ್ಮಿಗೋವಿಂದಪುರ, ಕಲ್ಲಿನಾಥಪುರ ಮುಂತಾದ ಪ್ರಮುಖ ಅಗ್ರಹಾರಗಳಿದ್ದವು.
ಸಾತಳಿಗೆಯ ನಾಡು
ಮೂಲತಃ ತೀರ್ಥಹಳ್ಳಿಗೆ ಸಮೀಪದ ಶಾಂತವೇರಿ ಎಂಬ ಊರನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಶಾಂತಳಿಗೆ ೧೦೦೦ ಎಂಬ ಭೂಪ್ರದೇಶವನ್ನು ಆಳುತ್ತಿದ್ದರು. ೯ನೇ ಶತಮಾನದಿಂದಲೇ ಆರಂಭವಾಗುವ ಈ ನಾಡು ಮೊದಲಿಗೆ ವಿಸ್ತಾರವಾದ ಭೂಭಾಗವಾಗಿತ್ತು. ವಿಜಯನಗರದ ಅರಸರು ಆರಗವನ್ನು ರಾಜ್ಯವನ್ನಾಗಿ ಮಾಡಿಕೊಂಡು ಆಳ್ವಿಕೆಯನ್ನು ಆರಂಭಿಸಿದ ನಂತರ ಸಾತಳಿಗೆಯ ನಾಡು ಸಂಕಬೆಂತ ಗೊಂಡು ಸಾತಳಿಗೆ ೧೦೦೦ ಆಗಿದ್ದ ಭೂಪ್ರದೇಶವು ಸಾತಳಿಗೆ ನಾಡಾಗಿ ರೂಪುಗೊಂಡಿತು. ಈ ಸಾತಳಿಗೆಯ ನಾಡಿನಲ್ಲಿ ಅಭಿನವ ಗೊಂಡಿನಾಥಪುರದ ಆಲಗೇರಿ, ಕೊಳವಳಿಗೆ, ಹಿರಿಯ ಹೊಳಲೂರು ಮುಂತಾದ ಗ್ರಾಮಗಳು ಅಂತರ್ಗತವಾಗಿದ್ದವು.
ರಾವುನಾಡು
ಗಂಗರ ಕಾಲದಿಂದಲೂ ಅಸ್ತಿತ್ವದಲ್ಲಿರುವ ರಾಉನಾಡು ವಿಜಯನಗರ ಅರಸರ ಕಾಲದಲ್ಲಿ ಹೆಚ್ಚು ಅಭಿವೃದ್ಧಿಗೊಂಡಿತು. ಈ ನಾಡಿನಲ್ಲಿ ಯಾವ್ಯಾವ ಊರುಗಳು ಅಂತರ್ಗತವಾಗಿದ್ದವು ಎಂದು ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ದಾನಶಾಲೆ ಗ್ರಾಮದ ಶಾಸನದಂತೆ ಕ್ರಿ.ಶ.೧೧೦೩ರಷ್ಟು ಹಿಂದೆಯೇ ಈ ನಾಡು ಅಸ್ತಿತ್ವದಲ್ಲಿತ್ತು [ತೀರ್ಥಹಳ್ಳಿ ೧೭೩] ನಂತರ ವಿಜಯನಗರ ಕಾಲದಲ್ಲಿ ೧೪೦೪ರ ಕೌದವಳ್ಳಿ ಶಾಸನದಲ್ಲಿಯೂ [ತೀರ್ಥಹಳ್ಳಿ ೧೩೮] ಈ ನಾಡಿನ ಉಲ್ಲೇಖವಿದ್ದರೂ ಈ ನಾಡಿಗೆ ಸಲ್ಲುವ ಯಾವ ಗ್ರಾಮದ ಹೆಸರೂ ಸಿಗುವುದಿಲ್ಲ. ಅಂದಿಗೆರೆಯ ೧೪೦೪ರ ಶಾಸನವು [ತೀರ್ಥಹಳ್ಳಿ ೧] ರಾಉನಾಡಿನಲ್ಲಿ ನಾಲ್ಕುಮಂದು ಅರವತ್ತು ಹಳ್ಳಿಗಳಿರುವುದನ್ನು ತಿಳಿಸುತ್ತದೆ ೧೫ನೆಯ ಶತಮಾನದ ಹೆಗ್ಗಾರಿನ ಶಾಸನವು [ತೀರ್ಥಹಳ್ಳಿ ೨೩೮] ಈ ನಾಡು ಸ್ಥಳವಾಗಿ ಪರಿವರ್ತನೆಯಾಗಿದ್ದೆಂದು ತಿಳಿಸುತ್ತದೆ.
ಗಂಗಮಂಡಲಿ ನಾಡು
ಗಂಗ, ಹೊಯ್ಸಳರ ಕಾಲದಲ್ಲಿ ವಿಶಾಲವಾಗಿ ಮೆರೆದ ಗಂಗಮಂಡಲಿನಾಡು ವಿಜಯನಗರ ಕಾಲದಲ್ಲಿ ಗಾಜನೂರು ಸ್ಥಳವೆಂದು ಹೆಸರಿಸಲಾಯಿತು. ಆದರೂ ಗಂಗಮಂಡಲಿ ನಾಡು ಎಂಬ ಹೆಸರು ೧೬ ಹಾಗೂ ೧೭ನೆಯ ಶತಮಾನದವರೆಗೂ ಸಮಾನಾಂತರವಾಗಿ ಅಸ್ತಿತ್ವದಲ್ಲಿತ್ತು. ೧೫೨೩ರ ಮತ್ತೂರು ಅಗ್ರಹಾರದ ಶಾಸನವು [ಶಿವಮೊಗ್ಗ-೮೧] ಗಾಜನೂರು ಸ್ಥಳದಲ್ಲಿರುವ ಗಂಗಮಂಡಲಿ ನಾಡಿನಲ್ಲಿ ಊರು ಕಡವೂರು, ಡಣಾಯಕನಹಳ್ಳಿ, ಮತ್ತೂರುಗಳಿದ್ದವು ಎಂದು ತಿಳಿಸುತ್ತದೆ. ೧೬೨೧ರ ಯರಗನಹಾಳು ಅಗ್ರಹಾರದ ಶಾಸನವು [ಶಿವಮೊಗ್ಗ ೮೩] ಆರಗ ವೇಂಠೆಯ ಗಾಜನೂರು ಸೀಮೆಯ ಗಂಗೆ ಮಂಡಲಿನಾಡಿನ ತುಂಗಭದ್ರಾ ನದೀ ತೀರದ ಯರಗ್ಗಹಾಳಿ ಎಂಬ ಮಹಾಗ್ರಾಮ ಹಾಗೂ ಇದರ ಉಪಗ್ರಾಮವಾದ ಕಾಳಿಕೊಪ್ಪವನ್ನು ಹೆಸರಿಸುತ್ತಾರೆ.
ಮದವಳಿಗೆಯ ನಾಡು
ಈ ಮದವಳಿಗೆಯ ನಾಡು ಸಾಂತಳಿಗೆ ನಾಡಿನಲ್ಲಿತ್ತು. ಇದನ್ನು ಸ್ಪಷ್ಟಪಡಿಸುವ ಎರಡು ಶಾಸನಗಳು ಮೇಗರವಳ್ಳಿಯಲ್ಲಿದೆ. ಮೇಗರವಳ್ಳಿಯ ಕ್ರಿ.ಶ.೮-೮-೧೪೧೭ರ ಶಾಸನವು [ತೀರ್ಥಹಳ್ಳಿ ೨೧೨] ಸ್ಪಷ್ಟವಾಗಿ ‘ಆರಗದ ವೇಂಠೆಯದ ಸೀತಳಿಗೆಯ ನಾಡ ಒಳಗಣ ಮದವಳಿಗೆ ನಾಡ ಒಳಗಣ ಮೇಗರವಳ್ಳಿಯ ಗ್ರಾಮ ಎಂದು ತಿಳಿಸುತ್ತದೆ ಹಾಗೂ ಈ ಶಾಸನ ಮುಂದುವರೆದು ಲೊಕುವಳ್ಳಿಯನ್ನು ಹಾಗೂ ಮುಂಟೆಳೆಯನ್ನು ಪ್ರಸ್ತಾಪಿಸುತ್ತದೆ. ಮೇಗರವಳ್ಳಿಯ ಇನ್ನೊಂದು ಶಾಸನವು [ತೀರ್ಥಹಳ್ಳಿ ೨೧೪] ಈ ಮದವಳಿಗೆಯ ನಾಡಿನಲ್ಲಿ ಮಡವಳ್ಳಿ, ಅಣಪವಳ್ಳಿಗಳು ಈ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ಈ ಶಾಸನದ ಕಾಲ ೧೨-೪-೧೪೩೪. ಈ ನಾಡಿನ ಈ ಶಾಸನಗಳಲ್ಲಿ ಈ ನಾಡಿನ ಬೈಚಣ್ಣ ಹೆಗ್ಗಡೆ, ಕೋಟ್ಯಪ್ಪ ಹೆಗ್ಗಡೆ, ಅಳಿಯನ ಹೆಗ್ಗಡೆ, ನಾಗಪ್ಪ ಹೆಗ್ಗಡೆ, ಕಡ ಹೆಗ್ಗಡೆ, ನಾಗಮ್ಮ ಹೆಗ್ಗಡತಿ, ಪೆಲಪ್ಪ ಹೆಗ್ಗಡೆ, ಜಕ್ಕಣ್ಣ ಹೆಗ್ಗಡೆ ಮುಂತಾದವರ ಹೆಸರುಗಳಿವೆ.
ನಿಡುವಲ ನಾಡು
೨೭-೨-೧೩೮೧ರ ಹುಣಸವಳ್ಳಿಯ ಶಾಸನವು ನಿಡುವಲ ನಾಡಿನಲ್ಲಿರುವ ಹುಣಸವಳಿಯ ಅಗ್ರಹಾರದ ಬಗೆಗೆ ತಿಳಿಸುತ್ತದೆ (ತೀರ್ಥಹಳ್ಳಿ ೨೩೨). ೧೬.೮.೧೩೯೪ರ ಕುರುವಳ್ಳಿಯ ಶಾಸನವು (ತೀರ್ಥಹಳ್ಳಿ ೧೨೦) ಕುರುವಳ್ಳಿಯು ಈ ನಾಡಿನಲ್ಲಿದ್ದುದನ್ನು ತಿಳಿಸುತ್ತದೆ. ೧೪೧೫ರ ಗಾಡಿಗ್ಗೆರೆ ಶಾಸನವು (ತೀರ್ಥಹಳ್ಳಿ ೧೩೯) ಕಾಡಿಗೆರೆ ಹಾಗೂ ಕೋಡೂರುಗಳನ್ನು ಈ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ತೀರ್ಥಹಳ್ಳಿಯ ೧೪೨೨ರ ಶಾಸನವು (ತೀರ್ಥಹಳ್ಳಿ ೧೫೨) ನಿಡುವಲ ನಾಡಿನೊಳಗೆ ಬುಕ್ಕರಾಜಪುರ ಅಗ್ರಹಾರವಿರುವುದನ್ನು ತಿಳಿಸಿ ಈ ಅಗ್ರಹಾರದ ಆಡಳಿತಕ್ಕೆ ಹೆಂನಂಗಿಯು ಸೇರಿತ್ತು ಎಂದು ತಿಳಿಸುತ್ತದೆ. ೧೪೨೪ರ ಆರಗದ ಶಾಸನವು (ತೀರ್ಥಹಳ್ಳಿ ೨೧) ಈ ನಾಡಿನಲ್ಲಿದ್ದ ಕಲ್ಲಕೋಟೆ, ಕುರುವಳ್ಳಿಯ ಗ್ರಾಮವನ್ನು ತಿಳಿಸುತ್ತದೆ. ತೀರ್ಥಹಳ್ಳಿಯ ೧೪೬೩ರ ಶಾಸನವು [ತೀರ್ಥಹಳ್ಳಿ ೧೫೫] ನಿಡುವಲನಾಡು ಸಾಂತಳಿಗೆ ಮಾಗಣಿಗೆ ಸೇರಿತ್ತು ಎಂದು ತಿಳಿಸುತ್ತದೆ. ಈ ನಾಡಿನ ಸರಬಳಿಗೆ ಗ್ರಾಮವನ್ನು ಗಜಬೇಟೆ  ದೇವರಾಯಪುರವೆಂಬ ಅಗ್ರಹಾರವನ್ನಾಗಿ ಇಮ್ಮಡಿ ದೇವರಾಯನ ಪರವಾಗಿ ಮಲ್ಲಿಕಾರ್ಜುನನು ಮಾಡುತ್ತಾನೆ. ೧೫೮೩ರ ಕುರುವಳ್ಳಿಯ ಶಾಸನವು (ತೀರ್ಥಹಳ್ಳಿ ೧೧೯) ಹೆಗ್ಗಡತಿ ಕೊಪ್ಪ ಎಂಬ ಗ್ರಾಮವು ಹರಳಿಯ ಪಾಲಿಗೆ ಸೇರಿತ್ತು. ಈ ಹರಳಿಯ ಪಾಲು ನಿಡುವಲನಾಡಿಗೆ ಸೇರಿತ್ತೆಂದು ತಿಳಿಸುತ್ತದೆ. ಮೇಳಿಗೆಯ ೧೬೧೦ರ ಶಾಸನವು [ತೀರ್ಥಹಳ್ಳಿ ೨೧೫] ನಿಡುವಲ ನಾಡಿನಲ್ಲಿ ಕೋದೂರು ಪಾಲು ಇದ್ದುದನ್ನು ಇದರಲ್ಲಿ ಮೇಳಿಗೆಯೆಂಬ ಗ್ರಾಮವಿತ್ತೆಂದು ತಿಳಿಸುತ್ತದೆ. ಈ ನಿಡುವಲ ನಾಡಿಗೆ ಪೂರ್ವದಲ್ಲಿ ಸಿಡಿಯಬೆಕ್ಕನೂರು ಸೀಮೆ, ದಕ್ಷಿಣದಲ್ಲಿ ಕೋಲಾವರದ ಸೀಮೆ, ಪಶ್ಚಿಮಕ್ಕೆ ಬಡವಾನೆ ಸೀಮೆ ಹಾಗೂ ಉತ್ತರಕ್ಕೆ ಹಳಿವಾರ ಸೀಮೆಗಳು ಇದ್ದವು.
ಹೊಂಬುಚ್ಚನಾಡು
ಇಂದಿನ ಹೊಸನಗರ ತಾಲ್ಲೂಕಿನ ಹೊಂಬುಜವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಸುತ್ತಮುತ್ತಲ ಗ್ರಾಮಗಳನ್ನು ಹೊಂಬುಚ್ಚನಾಡು ಎಂದು ರೂಪಿಸಲಾಯಿತು. ಹಲವನ ಹಳ್ಳಿಯ ೧೩೬೭ರ ಶಾಸನವು [ತೀರ್ಥಹಳ್ಳಿ ೨೨೫] ಈ ಹಲವನಹಳ್ಳಿಯು ಈ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ನಿಟ್ಟೂರಿನ ೧೩೭೯ರ ಶಾಸನವು [ತೀರ್ಥಹಳ್ಳಿ ೧೭೮] ನಿಟ್ಟೂರು ಈ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ೧೪೦೪ರ ಹೊಸಕೊಪ್ಪದ ಶಾಸನವು [ತೀರ್ಥಹಳ್ಳಿ ೨೪೩] ಶಂಕರಹಳ್ಳಿಯು ಈ ನಾಡಿನಲ್ಲಿತ್ತು. ಕಾಳಮ್ಮನಗುಡಿ ಗ್ರಾಮದ ೧೪೨೪ರ ಶಾಸನವು [ತೀರ್ಥಹಳ್ಳಿ ೧೧೫] ಹಲವನ ಹಳ್ಳಿಯು ಈ ನಾಡಿನಲ್ಲಿದ್ದ ಸಂಗತಿಯನ್ನು ತಿಳಿಸುತ್ತದೆ.
ಹೊಂಬುಚ್ಚನಾಡಿನಲ್ಲಿ ಎರಡುಮಂದು ನಾಡು ಹಾಗೂ ನಾಲ್ಕುಮಂದು ನಾಡುಗಳು ಎಂದು ಎರಡು ವಿಭಾಗಗಳಿದ್ದವು.
ಬೆಳುವೆಯ ನಾಡು
ಆರಗ ರಾಜ್ಯದ ಬೆಳುವೆಯ ನಾಡಿನ ಕೇಂದ್ರಸ್ಥಳ ಬೆಳುವೆ ಇದನ್ನು ಹರಿಹರಪುರವಾಗಿ ಬದಲಾಯಿಸಲಾಯಿತು. ಈ ನಾಡಿನಲ್ಲಿ ಕಾದುವಳಿ ಎಂಬ ಗ್ರಾಮವಿರುವುದನ್ನು ಕಾದುವಳ್ಳಿಯ ಶಾಸನವು [ತೀರ್ಥಹಳ್ಳಿ ೧೩೭] ತಿಳಿಸುತ್ತದೆ. ಈ ಕೌದುವಳ್ಳಿಗೆ ವಿರೂಪಾಂಬಿಕಾಪುರ ಎಂಬ ಪ್ರತಿನಾಮಧೇಯವಿರುವುದು ೧೪೦೪ರ ಈ ಶಾಸನದಿಂದ ತಿಳಿಯಬಹುದಾಗಿದೆ.
ಕೂಡಲಿ ನಾಡು
ಶಿವಮೊಗ್ಗ ತಾಲ್ಲೂಕಿನ ಕೂಡ್ಲಿಯಲ್ಲಿರುವ ಅನೇಕ ಶಾಸನಗಳು ಕೊಡಲಿಯು ಕೂಡಲಿ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ಈ ಕೂಡಲಿ ನಾಡು ಆರಗದ ರಾಜ್ಯದಲ್ಲಿತ್ತು ಎಂದು ೧೪೦೯ರ ಶಾಸನವು (ಶಿವಮೊಗ್ಗ ೮೨) ತಿಳಿಸುತ್ತದೆ.
ಹನಗವಾಡಿಯ ನಾಡು
ಆರಗ ರಾಜ್ಯದಲ್ಲಿದ್ದ ಆನೆವೇರಿಯ ನಾಡಿನಲ್ಲಿ ಈ ಹನಗವಾಡಿಯ ನಾಡು ಇತ್ತು. ಈ ಹನಗವಾಡಿಯ ಭಾಗದ ನಾಡನ್ನು ಹಾಗೂ ಹೊಳೆಯ ಹೊನ್ನೂರು ನಾಡನ್ನು ರಾಯಣ್ಣ ಒಡೆಯನು ಸುಸ್ಥಿತಿಯಲ್ಲಿ ಆಳುತ್ತಿದ್ದನು [ಶಿವಮೊಗ್ಗ ೩೩].
ಹೊಳೆಯ ಹೊನ್ನೂರು ನಾಡು
ಭದ್ರಾನದಿಯ ದಂಡೆಯಲ್ಲಿರುವ ಹೊಳೆಹೊನ್ನೂರನ್ನು ಕೇಂದ್ರವನ್ನಾಗಿ ಮಾಡಿಕೊಂಡು ಹೊಯ್ಸಳರ ಕಾಲದಲ್ಲಿ ರೂಪುಗೊಂಡ ಈ ನಾಡು ಕ್ರಮೇಣ ವಿಜಯನಗರದ ಅರಸರ ಕಾಲದಲ್ಲಿ ಪ್ರವರ್ಧಮಾನವಾಗಿ ಬೆಳೆಯಿತು. ಈ ಹೊಳೆಯ ಹೊನ್ನೂರು ನಾಡಿನಲ್ಲಿ ಆನೆವೇರಿನಾಡು, ಹನಗವಾಡಿಯ ನಾಡು, ಎಡತೊರೆನಾಡು, ಗುಡ್ಡಮಲೆನಾಡು, ಬೆಂಕಿಪುರದ ನಾಡುಗಳು ಸಮಾವೇಶಗೊಂಡಿದ್ದವು. ಇಲ್ಲಿನ ಕೋಟೆಯನ್ನು ಮೊದಲು ಹೊಯ್ಸಳರ ವಿನಯಾದಿತ್ಯ ಕಟ್ಟಿಸಿದನು. ವಿಜಯನಗರ, ಕೆಳದಿ ಅರಸರ ಕಾಲದಲ್ಲಿ ಈ ನಾಡು ಅಭಿವೃದ್ಧಿ ಹೊಂದಿತು.
ಆನೆವೇರಿಯ ನಾಡು
ಈ ಆನೆವೇರಿಯ ನಾಡು ಗಂಗರ ಕಾಲದಿಂದಲೂ ಪ್ರಸಿದ್ಧವಾಗಿದ್ದ ನಾಡು. ಗಂಗಮಂಡಲಿನಾಡಿನಲ್ಲಿ ಈ ನಾಡು ಸೇರಿತ್ತು. ಕ್ರಮೇಣ ವಿಜಯನಗರದ ಅರಸರ ಕಾಲದಲ್ಲಿ ಈ ಅನೆವೇರಿಯ ನಾಡನ್ನು ಗಾಜನೂರು ಸ್ಥಳವನ್ನಾಗಿ ಮಾರ್ಪಡಿಸಲಾಯಿತು.
ಸೀಮೆಗಳು
ವಿಜಯನಗರದ ಆಡಳಿತ ಕಾಲದಲ್ಲಿ ನಾಡುಗಳಲ್ಲಿನ ಅಧಿಕಾರದಲ್ಲಿ ವಿಪರೀತ ಜವಾಬ್ದಾರಿಯಿದ್ದುದರಿಂದ ಸೀಮೆಗಳನ್ನು ರೂಪಿಸಲಾಯಿತು. ಈ ಸೀಮೆಯಲ್ಲಿ ಹಲವಾರು ಗ್ರಾಮಗಳು ಅಂತರ್ಗತವಾಗಿದ್ದವು. ಅಂತೆಯೇ ಸ್ಥಳಗಳು ಕೂಡ. ಕೆಲವೊಂದು ಶಾಸನಗಳಲ್ಲಿ ಸ್ಪಷ್ಟವಾಗಿರುವಂತೆ ಒಂದು ರಾಜ್ಯದಲ್ಲಿ ಒಂದು ನಾಡಿರುತ್ತದೆ. ಆ ನಾಡಿನಲ್ಲಿ ಸ್ಥಳವಿರುತ್ತದೆ. ಸ್ಥಳದಲ್ಲಿ ಸೀಮೆಗಳಿರುತ್ತವೆ. ಕೆಲವು ನಾಡುಗಳು ಕ್ರಮೇಣವಾಗಿ ಸೀಮೆಗಳಾಗಿವೆ. ಕೆಲವೊಮ್ಮೆ ನಾಡು ಹಾಗೂ ಸೀಮೆಯನ್ನು ಪರ್ಯಾಯವಾಗಿ ಉಪಯೋಗಿಸಲಾಗಿದೆ.
ಈ ಹಿಂದೆಯೇ ನಾಡುಗಳ ಕೇಂದ್ರವಾಗಿದ್ದ ಹೊಂಬುಜ, ಬೆಳುವೆಗಳು ಕ್ರಮೇಣ ಹೊಂಬುಜ ಸೀಮೆ ಹಾಗೂ ಬೆಳುವೆಯ ಸೀಮೆಗಳಾಗಿ ರೂಪಾಂತರಗೊಂಡಿದೆ. ನಾಶವೆಂದು ನಾಡು, ನಾಸುವಂದು ನಾಡ ಸೀಮೆಯಾಗಿದೆ. ಇನ್ನುಳಿದಂತೆ ಮೊಸರೂರು ಸೀಮೆ, ಮುತ್ತೂರು ಸೀಮೆ, ಮಾಳೂರು ಸೀಮೆ, ಸಿಡಿಯ ಚಿಕ್ಕನೂರು ಸೀಮೆ, ಕೋಲಾವರದ ಸೀಮೆ, ಬಸವಾನೆ ಸೀಮೆ, ಹಳಿವಾರ ಸೀಮೆ, ನೀರೀರಕಲ ಸೀಮೆ, ಹರಿಹರಪುರದ ಸೀಮೆಗಳು ಆರಗ ರಾಜ್ಯದಲ್ಲಿ ಅಂತರ್ಗತವಾಗಿದ್ದವು. ಇದರ ಜೊತೆಗೆ ಮಂಡಗದ್ದೆ ಸೀಮೆ, ಹಣಗೇರಿಸೀಮೆ ಹಾಗೂ ಹಲಸರ ಸೀಮೆಗಳು ಈ ರಾಜ್ಯದಲ್ಲಿ ಸೇರಿಹೋಗಿದ್ದವು.
ಗಾಜನೂರು ಸೀಮೆ
ಆರಗ ರಾಜ್ಯದ ಪ್ರಮುಖ ಆಯಕಟ್ಟಿನ ಪ್ರದೇಶವೆಂದರೆ ಗಾಜನೂರು. ಆನೆವೇರಿಯ ನಾಡು ಎಂದು ಪ್ರಸಿದ್ಧವಾಗಿ ಗಂಗಮಂಡಲಿ ನಾಡಿನಲ್ಲಿದ್ದ ಗಾಜನೂರು ವಿಜಯನಗರದ ಆಡಳಿತದಲ್ಲಿ ಗಾಜನೂರು ಸೀಮೆಯಾಗಿ ಪರಿವರ್ತಿತ ವಾಯಿತು. ಮತ್ತೂರು ಅಗ್ರಹಾರದ ಕ್ರಿ.ಶ.೧೪೪೫ರ [ಶಿವಮೊಗ್ಗ ೮೧] ಶಾಸನದಲ್ಲಿ ಗಾಜನೂರು ಸ್ಥಳ ಎನ್ನುವ ಉಲ್ಲೇಖವಿರುವುದನ್ನು ಬಿಟ್ಟರೆ ಎಲ್ಲ ಕಡೆಯೂ ಗಾಜನೂರು ಸೀಮೆ ಎನ್ನುವ ಆಡಳಿತ ವಿಭಾಗದ ಉಲ್ಲೇಖವೇ ಇದೆ. ಇದಾದ ನಂತರ ೧೪೮೫ರ ಕುಸ್ಕೂರು ಅಗ್ರಹಾರದ ಶಾಸನವು [ಶಿವಮೊಗ್ಗ ೨೪] ಈ ಸೀಮೆಯ ಕಡುಕಲು ಗ್ರಾಮವನ್ನು ಉಲ್ಲೇಖಿಸುತ್ತದೆ. ಶಿವಮೊಗ್ಗದ ೧೬೪೧ರ ಶಾಸನವು [ಶಿವಮೊಗ್ಗ ೯೦] ಗಾಜನೂರು ಸೀಮೆಯಲ್ಲಿದ್ದ ನಂದಿಗೇರಿ, ಕೊಲತಡಿ, ಸಕ್ಕರೆಬಯಲು, ತಟ್ಟಿಕೆರೆ, ಹೆಬ್ಬಯಲು ಎಂಬ ಐದು ಗ್ರಾಮಗಳನ್ನು ಸೇರಿಸಿ ತ್ರಯಂಬಕಪುರವನ್ನಾಗಿ ಮಾಡಿದ ವಿಷಯವನ್ನು ತಿಳಿಸುತ್ತದೆ. ಕವಲೇದುರ್ಗದ ೧೬೪೨ರ ಶಾಸನದಲ್ಲಿ [ತೀರ್ಥಹಳ್ಳಿ ೫೨] ಈ ಸೀಮೆಯಲ್ಲಿ ಪುರದಹಾಳ, ಹೂಲಿಕಟ್ಟ ಗ್ರಾಮಗಳಲ್ಲಿದ್ದುನ್ನು ದಾಖಲಿಸುತ್ತದೆ. ೧೬೨೧ರ ಯರಗನಹಾಳು ಅಗ್ರಹಾರದಲ್ಲಿನ ಶಾಸನವು [ಶಿವಮೊಗ್ಗ ೮೩] ಗಾಜನೂರು ಸೀಮೆಯಲ್ಲಿ ಗಂಗಮಂಡಲಿ ನಾಡಿತ್ತು ಹಾಗೂ ಈ ನಾಡಿನಲ್ಲಿಯ ಯರಗನಹಾಳು ಹಾಗೂ ಕಾಳಿಕೊಪ್ಪ ಗ್ರಾಮಗಳಿದ್ದುದನ್ನು ತಿಳಿಸುತ್ತದೆ.
ಇದಲ್ಲದೆ ಗಾಜನೂರು ಸೀಮೆಯಲ್ಲಿ ಕೊರ್ಲಹಳ್ಳಿ [ಶಿವಮೊಗ್ಗ ೯೧] ಪುರದಹಾಳ, ಹೂಲಿಕಟ್ಟೆ ಗ್ರಾಮ  [ತೀರ್ಥಹಳ್ಳಿ ೫೨], ಎಡೆಹಳ್ಳಿ, ಕುಯರಿ, ಚೋರನಹಾಳ [ತೀಥ್ಹಳ್ಳಿ ೮೮] ಕಡುಕಲು [ಶಿವಮೊಗ್ಗ ೧೨], ಮೀರನಗಟ್ಟಿ, ಸೆಟ್ಟಿಹಳ್ಳಿ, ಕುಂಮರಿ, ಬಳ್ಳಾಪುರ [ತೀರ್ಥಹಳ್ಳಿ ೧೦೬], ಚೆನ್ನಗೊಂಡನಕೊಪ್ಪ, ಸಾವಗೊಂಡನಹಳ್ಳಿ [ಶಿವಮೊಗ್ಗ ೧೦೦], ತ್ರಯಂಬಕಪುರ [ಶಿವಮೊಗ್ಗ ೯೬] ಗ್ರಾಮಗಳ ಈ ಗಾಜನೂರು ಸೀಮೆಯಲ್ಲಿ ಅಂತರ್ಗತವಾಗಿದ್ದವು. ಕ್ರಿ.ಶ.೧೭೧೪ರ ಕಾಶೀಪುರದ ಶಾಸನದಲ್ಲಿ ಗಾಜನೂರು ಸೀಮೆ ಸ್ಥಳ ಎಂದು ಉಲ್ಲೇಖಿತವಾಗಿದೆ.
ಪೇಟೆಗಳು
ಆರಗ ರಾಜ್ಯದಲ್ಲಿನ ಆರ್ಥಿಕ ಚಟುವಟಿಕೆಗಳ ಮೂಲ ಕೇಂದ್ರವಾಗಿದ್ದುದು ಪೇಟೆಗಳು. ಸಮುದ್ರದಿಂದ ಬರುತ್ತಿದ್ದ ಪದಾರ್ಥಗಳಿಗೆ ಆರಗವು ಮುಖ್ಯ ನೆಲೆಯಾಗಿತ್ತು. ಆಂತರಿಕ ವ್ಯಾಪಾರ ಹಾಗೂ ವಿದೇಶಿ ವ್ಯಾಪಾರಗಳಿಗೆ ಇದು ಕೇಂದ್ರವಾಗಿತ್ತು. ಯಥೇಚ್ಛವಾಗಿ ಬೆಳೆಯುತ್ತಿದ್ದ ಮಲೆನಾಡಿನ ಪದಾರ್ಥಗಳಿಗೆ ವಿದೇಶದ ಮಾರುಕಟ್ಟೆಗಳಲ್ಲಿಯೂ ವಿಶೇಷವಾದ ಬೆಲೆಯಿತ್ತು. ಆರಗ ರಾಜ್ಯದಲ್ಲಿ ಇಂತಹ ಎಂಟು ಪೇಟೆಗಳನ್ನು ಶಾಸನಗಳು ಹೆಸರಿಸುತ್ತದೆ. ಇನ್ನೂ ಇದ್ದಿರಬಹುದಾದರೂ ಉಲ್ಲೇಖಗಳಿಲ್ಲ.
ಆರಗದ ವೇಂಟೆಯಲ್ಲಿ ೮ ಪೇಟೆಗಳು ಇದ್ದವು ಕವಲೇದುರ್ಗದ ೧೬೭೪ರ ಶಾಸನವು ಹೀಗೆ ದಾಖಲಿಸುತ್ತದೆ. “ಆರಗದ ವೆಂಟೆಯಕೆ ಸಲುವ ಆರಗ ಕೊಡಲೂರು, ಯೆಡೆಹಳ್ಳಿ, ಅವಿನಹಳ್ಳಿ, ಕಾರುಊರು, ಬಿದರೂರು, ಮೊಸರೂರು ಮಾಳೇನಹಳ್ಳಿ ಸಹಾ ಯಂಟು ಪೇಟೆಗಳಲ್ಲಿ ಅರಮನೆಯ ಸುಂಕಕೆ...’’ ಈ ಎಂಟು ಪೇಟೆಗಳಲ್ಲಿ ನಾನಾ ರೀತಿಯ ತೆರಿಗೆಗಳನ್ನು ಅರಮನೆಯವರಿಗೆ ಕಟ್ಟಬೇಕಾಗಿತ್ತು.
“ಈ ಪೇಟೆಗಳಲ್ಲಿ ಅಡಕೆ, ಮೆಣಸು, ಝಲಿಪಟಿ, ಖೊಬರಿ, ಕವಾಡ ಮುಂತಾದ ಗಡಿಸಿನ ಸರಕು ಹೊರತಾಗಿ ಅಕ್ಕಿ, ಭತ್ತ, ರಾಗಿ, ಯೆಂಣೆ, ತುಪ್ಪ ಕಾಯಿ, ಬೆಲ್ಲ, ವಿದುಳ ಮುಂತಾಗಿ’’ ವಸ್ತುಗಳು ವಿಕ್ರಯವಾಗುತ್ತಿತ್ತು. ಸುಂಕ ವ್ಯವಸ್ಥೆ ಚೆನ್ನಾಗಿತ್ತು. ಈ ಎಲ್ಲ ಗ್ರಾಮಗಳಲ್ಲಿಯೂ ಸುಂಕ ಕೇಂದ್ರಗಳಿದ್ದವು ನಿಯಮಿತವಾಗಿ ವ್ಯಾಪಾರಿಗಳಿಂದ ಹಣ ಸಂಗ್ರಹಿಸಲಾಗುತ್ತಿತ್ತು.
ಪಟ್ಟಡಿಗಳು
ಆರಗ ರಾಜ್ಯದಲ್ಲಿ ಕಂದಾಯ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲಾಗಿತ್ತು. ಈ ರೀತಿಯ ಕಂದಾಯ ಕೇಂದ್ರಗಳನ್ನು ಪಟ್ಟಡಿಗಳು ಎಂದು ಕರೆಯಲಾಗುತ್ತಿತ್ತು. ಪ್ರತಿಯೊಂದು ನಾಡಿನಲ್ಲಿಯೂ ಹಲವು ರೀತಿಯ ಪಟ್ಟಡಗಳನ್ನು ಸ್ಥಾಪಿಸಿ ಅಲ್ಲಿಂದ ಕಂದಾಯ ವ್ಯವಸ್ಥೆಯನ್ನು ಹದಗೊಳಿಸಲಾಗುತ್ತಿತ್ತು. ಉದಾಹರಣೆಗೆ ಹೇಳುವುದಾದರೆ ಆರಗ ರಾಜ್ಯದಲ್ಲಿ
ಕೊಡಸತೊಳಿ ಪಟ್ಟಡಿ : ಬೊಬ್ಬಳ್ಳಿ, ವಡೆದಕೆರೆ ಗ್ರಾಮ, ಹಿಂಚನಹಳ್ಳಿ, ಕುಕ್ಕರಿ ಗ್ರಾಮ, ಮಾವಕೋಡು ಗ್ರಾಮ, ಕೇದಗೆಬಯಲು ಗ್ರಾಮ.
ಜಂಬೆ ಪಟ್ಟಡಿ : ಮರಗಳಿಲೆ, ನಿರಚಿವಳ್ಳಿ, ಬಸವನಕಲ್ಲು
ವಂಬೀ ಪೆಟ್ಟಡಿ : ಬಸವನಕಲ್ಲು ಗ್ರಾಮ
ನೆರಟೂರು ಪಟ್ಟಡಿ : ಸೂರಳಿ ಗ್ರಾಮ
ಹೀಗೆ ಕಂದಾಯ ವ್ಯವಸ್ಥೆಯ ಕೇಂದ್ರವಾದ ಪಟ್ಟಡಿಗಳಲ್ಲಿ ಹಲವಾರು ಗ್ರಾಮಗಳು ಬರುತ್ತಿದ್ದವು. ಈ ಗ್ರಾಮಗಳ ಜನರು ಈ ಪಟ್ಟಡಿಗಳಲ್ಲಿ ಬಂದು ತಮ್ಮ ಕಂದಾಯವನ್ನು ಕಟ್ಟಬೇಕಿತ್ತು.
ಬಾಗೆಗಳು
ಆರಗ ರಾಜ್ಯದ ವಿಶೇಷತೆಯೆಂದರೆ ಕೆಲವು ಗ್ರಾಮಗಳನ್ನು ಒಳಗೊಂಡ ಬಾಗೆಗಳು ಎಂಬ ಭಾಗ. ಕೇವಲ ಇವು ಭಾಗಗಳೇ ಹೊರತು ಬೇರಲ್ಲ. ಉದಾಹರಣೆಗೆ ಮಧುವಂತನಾಡಿನ ಮೇಲುಬಾಗೆಯಲ್ಲಿ ಬೊಂದಿ, ಕಲ್ಲಿನಾಥಪುರ, ತೊರಗಲೆ ಗ್ರಾಮಗಳು, ಸಾಲೂರು ಬಾಗೆಯಲ್ಲಿ ಸಿಂಗಪೊಟ್ಟಣ, ಕೋಳೂರು, ಬಳ್ಳೂರು ಬಾಗೆಯಲ್ಲಿ ಭಾರತೀಪುರ, ಬಾವರಸನಕೊಪ್ಪ ಗ್ರಾಮಗಳು ಅಸ್ತಿತ್ವದಲ್ಲಿದ್ದವು.
ಈ ಎಲ್ಲ ನಾಡುಗಳು, ಸೀಮೆಗಳು, ಸ್ಥಳಗಳನ್ನು ಗಮನಿಸಿದಾಗ ಆರಗ ರಾಜ್ಯದ ಭೌಗೋಳಿಕ ವ್ಯಾಪ್ತಿಯು ಸ್ಥೂಲವಾಗಿ ಇಂದಿನ ಶಿವಮೊಗ್ಗ ಜಿಲ್ಲೆಯ ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿ ತಾಲ್ಲೂಕುಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹ ರಾಜಪುರ ತಾಲ್ಲೂಕುಗಳ ಕೆಲಭಾಗವು ಆರಗ ರಾಜ್ಯದಲ್ಲಿ ಅಂತರ್ಗತವಾಗಿತ್ತು ಎಂದೆನಿಸುತ್ತದೆ.
[ಈ ಲೇಖನದಾದ್ಯಂತ ಚೌಕ ಕಂಸದಲ್ಲಿ ನೀಡಿರುವ ಶಾಸನ ಸಂಖ್ಯೆಗಳು ಎಪಿಗ್ರಾಫಿಯ ಕರ್ನಾಟಿಕದ ಹದಿಮೂರನೆಯ (ಪರಿಷ್ಕೃತ) ಸಂಪುಟದವು. ಹೆಚ್ಚಿನ ಮಾಹಿತಿಗಾಗಿ ಎಪಿಗ್ರಾಫಿಯ ಕರ್ನಾಟಿಕದ ಪರಿಷ್ಕೃತ ಸಂಪುಟಗಳಾದ ೧೧, ೧೨, ೧೩, ೧೫ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಲೆಕರ್ನಾಟಕದ ಅರಸು ಮನೆತನಗಳು ಎಂಬ ಕೃತಿಗಳನ್ನು ನೋಡಬಹುದು.]
# ೪೬೧/೪, ೭ನೆಯ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-೫೬೦೧೦೪.