Sunday, December 30, 2012

'ಹೊಸದುರ್ಗ ತಾಲೂಕಿನ ಅಜ್ಜಿಗುಡ್ದದಲ್ಲಿ ಪ್ರಾಗಿತಿಹಾಸ ಕಾಲದ ತಾಮ್ರದ ಕೊಡಲಿ ಪತ್ತೆ'

ಡಾ. ಎಸ್‌. ತಿಪ್ಪೆ ಸ್ವಾಮಿ
¥ÁæaãÀ ªÀiÁ£ÀªÀ£À ¸ÁA¸ÀÌøwPÀ «PÁ¸À ºÁUÀÆ PÀ£ÁðlPÀzÀ ¥ÁæVwºÁ¸ÀzÀ ªÉÄÃ¯É ºÉƸÀ ¨É¼ÀPÀ£ÀÄß ZÉ®ÄèªÀ C¥ÀgÀÆ¥ÀªÁzÀ vÁªÀÄæzÀ PÉÆqÀ°AiÉÆAzÀÄ ºÉƸÀzÀÄUÀð vÁ®ÆèQ£À UÀgÀUÀ ¥Àj¸ÀgÀzÀ ºÀ£ÀĪÀÄ£ÀºÀnÖ UÁæªÀÄPÉÌ ¸À«ÄÃ¥À«gÀĪÀ CfÓUÀÄqÀØ PÁªÀ°£À°è ¥ÀvÉÛAiÀiÁVzÉ. F PÉÆqÀ°AiÀÄ£ÀÄß ¥Àæ¸ÀÄÛvÀ ¯ÉÃR£ÀzÀ ¯ÉÃRPÀgÀÄ PÉëÃvÀæPÁAiÀÄðzÀ ªÀÄÆ®PÀ ¨É¼ÀQUÉ vÀA¢zÁÝgÉ.
CfÓUÀÄqÀØ PÁªÀ®Ä JAzÀÄ PÀgÉAiÀÄĪÀ F ¸ÀܼÀªÀÅ Hj£À UÉÆêÀiÁ¼ÀªÁVzÀÄÝ, E°è ©½ ¨ÉtZÀÄPÀ°è£À MAn UÀÄqÀتÀÇA¢zÉ. UÀȺÀ¤ªÀiÁðtPÉÌAzÀÄ ºÀ£ÀĪÀÄ£À ºÀnÖAiÀÄ gÁªÀiÁ£ÁAiÀÄÌ JA§ÄªÀgÀÄ F ¨ÉtZÀÄPÀ®Äè UÀÄqÀØ¢AzÀ §AqÉAiÀÄ£ÀÄß ¹Ã¼ÀÄwzÁÝUÀ DPÀ¹äPÀªÁV F PÉÆqÀ° ¹QÌzÉ. PÉÆqÀ° zÉÆgÉwgÀĪÀ ¥ÀPÀÌzÀ°èAiÉÄà §ÈºÀvï ²¯Á ¸ÀªÀiÁ¢üAiÀÄ PÀÄgÀĺÀÄUÀ¼ÀÄ EªÉ. F ¥Àj¸ÀgÀªÀÅ ºÀ¼ÀîPÉƼÀîUÀ½AzÀ ºÁUÀÆ CgÀtå ¥ÀæzÉñÀ¢AzÀ PÀÆrzÀÄÝ C®è°è ¥ÁæVwºÁ¸À PÁ®zÀ ªÀ¸Àw £É¯ÉUÀ½UÉ C£ÀÄPÀÆ°¸ÀĪÀ ªÁvÁªÀgÀt PÀAqÀħgÀÄvÀÛzÉ.
vÁªÀÄæ-²¯ÁAiÀÄÄUÀzÀ PÁ®ªÀiÁ£ÀªÀÅ ¨ÉÃgÉ ¨ÉÃgÉ zÉñÀUÀ½UÉ «©ü£ÀߪÁVzÀÄÝ ¨sÁgÀvÀzÀ°è £ÀªÀ²¯ÁAiÀÄÄUÀzÀ PÉÆ£É ªÀÄvÀÄÛ §ÈºÀvï ²¯ÁAiÀÄÄUÀzÀ PÁ®UÀ¼À°è PÀAqÀħgÀÄvÀÛzÉ. ¥Àæ¸ÀÄÛvÀ £É¯ÉAiÀÄÄ ¸ÀºÀ £ÀªÀ ²¯ÁAiÀÄÄUÀPÉÌ ¸ÉÃjzÉÝ£ÀߧºÀÄzÀÄ. EzÀÄ D AiÀÄÄUÀzÀ ¨ÉlÖzÀ ªÉÄð£À ªÀ¸Àw ¤ªÉñÀ£ÀzÀ ªÀUÀðPÉÌ ¸ÉÃgÀÄvÀÛzÉ J£ÀߧºÀÄzÀÄ.
UÀªÀÄ£ÁºÀð CA±ÀªÉAzÀgÉ, F ¨ÉlÖzÀ ªÉÄïÁãUÀzÀ°è, CAzÀgÉ GvÀÛgÀ ¢QÌ£À ¥Á±Àéð¨sÁUÀzÀ°è ªÀÄÄAZÁagÀĪÀ ºÀÄlÄÖ§AqÉAiÀÄ ªÉÄÃ¯É D¼ÀªÁV GfÓ ªÀÄÆr¸À¯ÁzÀ ««zsÀ C¼ÀvÉAiÀÄ ¸ÀĪÀiÁgÀÄ 16 PÀĽUÀ¼À£ÀÄß PÁt§ºÀÄzÀÄ. avÀæzÀÄUÀð f¯ÉèAiÀÄ°è FªÀgÉUÉ eÁ£ÀPÀ®Äè, vÁ¼Àå, §æºÀäVj, ¸ÉÆAqÉÃPÉgÉ ªÀÄÄAvÁzÀ ¸ÀܼÀUÀ¼À°è EAvÀºÀ PÀĽUÀ¼À£ÀÄß UÀÄgÀÄw¸À¯ÁVzÉ. EªÀÅUÀ¼ÀÄ ²¯ÁAiÀÄÄUÀzÀ ªÀiÁ£ÀªÀ£ÀÄ vÀ£Àß DAiÀÄÄzsÀUÀ¼À£ÀÄß §AqÉUÀ¼À ªÉÄÃ¯É GfÓ, ¹zÀÞ¥Àr¹PÉƼÀÄîwzÀÄÝzÀjAzÀ GAmÁzÀÄzÀÄ JAzÀÄ ¥ÀÅgÁvÀvÀÛ÷édÕgÀÄ C©ü¥ÁæAiÀÄ ¥ÀnÖzÁÝgÉ. F ¸Á°UÉ CfÓUÀÄqÀتÀÅ ¸ÉÃgÀĪÀÅzÀjAzÀ F ¥Àj¸ÀgÀzÀ°è ²¯ÁAiÀÄÄUÀzÀ C¹ÛvÀé ºÉZÀÄÑ RavÀªÁUÀÄvÀÛzÉ.
F vÁªÀÄæzÀ PÉÆqÀ°AiÀÄÄ 16.5 ¸ÉA.«ÄÃ. GzÀݪÁVzÀÄÝ »rAiÀÄ ¨sÁUÀªÀÅ 2 ¸ÉA.«ÄÃ. CUÀ®ªÁVzÉ. DzÀgÉ ¨Á¬ÄAiÀÄ CUÀ® 5.8 ¸ÉA.«ÄÃlgï£À¶ÖzÉ. Er PÉÆqÀ°AiÀÄÄ 1 ¸ÉA.«ÄÃ. zÀ¥ÀàªÁVzÀÄÝ 586 UÁæA vÀÆPÀ«zÉ.
¸ÁªÀiÁ£ÀåªÁV vÁªÀÄæzÀ PÉÆqÀ°AiÀÄ DPÁgÀ, UÁvÀæ ªÀÄvÀÄÛ «£Áå¸ÀªÀ£ÀÄß ¸ÀÆPÀëöäªÁV UÀªÀĤ¹zÀgÉ, EzÀÄ §ºÀÄvÉÃPÀ £ÀªÀ²¯ÁAiÀÄÄUÀzÀ CAwªÀÄ ºÁUÀÆ §ÈºÀvï ²¯ÁAiÀÄÄUÀ ¸ÀA¸ÀÌøwAiÀÄ DgÀA¨sÀzÀ PÁ®zÀ°è£ÀzÀÄ (Qæ.¥ÀÆ.¸ÀÄ 1500jAzÀ 1000) JAzÀÄ J£ÀߧºÀÄzÁVzÉ. EAvÀºÀ C¥ÀgÀÆ¥ÀzÀ vÁªÀÄæzÀ PÉÆqÀ°AiÉÆAzÀÄ ªÉÄîĸÀÜgÀzÀ°è (Surface level) ¥ÀvÉÛAiÀiÁUÀÄwÛgÀĪÀÅzÀÄ zÀQët ¨sÁgÀvÀzÀ°è EzÉà ªÉÆzÀ®Ä J£ÀߧºÀÄzÀÄ.
F jÃwAiÀÄ vÁªÀÄæzÀ PÉÆqÀ°UÀ¼ÀÄ, PÀ£ÁðlPÀzÀ ««zsÀ PÀqÉ £ÀqÉzÀ GvÀÍ£À£ÀUÀ¼À°è ¥ÀvÉÛAiÀiÁVªÉ. ºÁªÉÃj f¯ÉèAiÀÄ »gÉÃPÉgÀÆgÀÄ vÁ®ÆèQ£À ºÀ¼ÀÆîj£À°è JgÀqÀÄ C®ÄUÀļÀî vÁªÀÄæzÀ PÉÆqÀ°AiÀÄÄ, gÁAiÀÄZÀÆgÀÄ f¯ÉèAiÀÄ ªÀiÁ¤é vÁ®ÆèQ£À PÀ®Æèj£À°è vÁªÀÄæzÀ PÉÆqÀ° ZÀÆgÀÄUÀ¼ÀÄ, ¨ÁUÀ®PÉÆÃmÉ f¯ÉèAiÀÄ dªÀÄPÀAr vÁ®ÆèQ£À vÉÃgÀzÁ¼ÀzÀ°è ºÁUÀÄ §¼Áîj f¯ÉèAiÀÄ ²gÀUÀÄ¥Àà vÁ®ÆèQ£À vÉPÀÌ®PÉÆÃmÉUÀ¼À°è EzÉà jÃwAiÀÄ PÉÆqÀ°UÀ¼ÀÄ zÉÆgÀQªÉ. DzÀgÉ ªÉÄîÌAqÀ ¤ªÉñÀ£ÀUÀ¼À°è PÀAqÀħA¢gÀĪÀ PÉÆqÀ°UÀ½UÀÆ FUÀ f¯ÉèAiÀÄ°è ¥ÀvÉÛAiÀiÁVgÀĪÀ F PÉÆqÀ°UÀÆ DPÁgÀ ªÀÄvÀÄÛ «£Áå¸ÀUÀ¼À°è vÀÄA¨Á ªÀåvÁå¸ÀUÀ¼ÀÀ£ÀÄß UÀªÀĤ¸À§ºÀÄzÁVzÉ.
CªÀÅUÀ¼ÉAzÀgÉ, F PÉÆqÀ°AiÀÄ£ÀÄß CaѤAzÀ vÀAiÀiÁj¸À¯ÁVgÀĪÀÅzÀÄ. F CA±ÀªÀ£ÀÄß PÉÆqÀ°AiÀÄ ¥Á±ÀéðUÀ¼À CAZÀÄUÀ¼À£ÀÄß UÀªÀĤ¹zÁUÀ ¸ÀàµÀÖªÁUÀÄvÀÛzÉ. PÉÆqÀ°AiÀÄ £Á®ÄÌ ªÉÄïÉäöÊUÀ¼ÀÄ CvÀåAvÀ £ÀÄtÄ¥ÁVªÉ ºÁUÀÆ ¤Ã¼ÀªÁVªÉ. PÉÆqÀ°AiÀÄ ¨Á¬ÄAiÀÄÄ ¸ÉÃjzÀAvÉ Erà PÉÆqÀ°AiÀÄ£ÀÄß £ÀAiÀĪÁV¸À¯ÁVzÉ. PÉÆqÀ°AiÀÄ ªÉÄðgÀĪÀ UÀÄgÀÄvÀÄUÀ¼À£ÀÄß UÀªÀĤ¹zÀgÉ §ºÀÄvÉÃPÀ EzÀÄ CA¢£À ¢£À¤vÀåzÀ §¼ÀPÉUÁV G¥ÀAiÉÆÃUÀªÁzÀAwzÉ. ¨ÉÃgÉAiÀÄ PÉÆqÀ°UÀ¼ÀÄ EAvÀºÀ £ÀAiÀĪÁzÀ PÉ®¸ÀUÁjPÉAiÀÄ£ÀÄß ºÉÆA¢®è. £ÀªÀ ²¯ÁAiÀÄÄUÀzÀ £ÀAiÀÄUÉƽ¹zÀ PÀ°è£À PÉÆqÀ°AiÀÄ ªÀiÁzÀjAiÀÄ°èAiÉÄà F vÁªÀÄæzÀ PÉÆqÀ° EgÀĪÀÅzÀÄ UÀªÀÄ£ÁºÀðªÁVzÉ.
avÀæzÀÄUÀð f¯ÉèAiÀÄ°è F »AzÉ Qæ.±À.1909jAzÀ  1947gÀªÀgÉUÉ Dgï. £ÀgÀ¹AºÁZÁgï, JA.JZï. PÀȵÀÚ ªÀÄÄAvÁzÀªÀgÀÄ §æºÀäVj ªÀÄvÀÄÛ ZÀAzÀæªÀ½îUÀ¼À°è £ÀqɹzÀ GvÀÍ£À£ÀUÀ¼À°è PÉêÀ® vÁªÀÄæzÀ PÉ® ªÀ¸ÀÄÛUÀ¼ÀÄ ªÀiÁvÀæ ¥ÀvÉÛAiÀiÁVgÀĪÀÅzÀ£ÀÄß E°è ¸Àäj¸À§ºÀÄzÀÄ. DzÀgÉ vÁªÀÄæªÀ£ÀÄß PÀgÀV¹ ±ÀÄzÀÞ ªÀiÁqÀĪÀ CxÀªÁ ¸ÀA¸ÀÌj¸ÀĪÀ vÀAvÀæUÁjPÉAiÀÄ §UÉÎ RavÀ ¥ÀÄgÁªÉUÀ¼ÀÄ E°èAiÀĪÀgÉUÉ f¯ÉèAiÀÄ°è zÉÆgÀQ®è. DzÀgÉ  vÁªÀÄæzÀ C¢gÀÄ ¤PÉëÃ¥ÀUÀ¼ÀÄ EAUÀ¼ÀzÁ¼ÀÄ ¥Àj¸ÀgÀzÀ°èªÉ. E°è£À §ÈºÀvï ²¯ÁUÉÆÃjUÀ¼À°è vÁªÀÄæ-²¯ÁAiÀÄÄUÀ ¸ÀA¸ÀÌøwUÉ ¸ÀA§A¢ü¹zÀAvÉ PÀÄgÀĺÀÄUÀ¼ÀÄ ¸ÀºÀ PÀAqÀħA¢ªÉ. F »£É߯ÉAiÀÄ°è CfÓUÀÄqÀØzÀ°è zÉÆgÀQgÀĪÀ F PÉÆqÀ°¬ÄAzÀ f¯ÉèAiÀÄ°è vÁªÀÄæ-²¯ÁAiÀÄÄUÀ ¸ÀA¸ÀÌøwAiÀÄ C¹ÛvÀézÀ §UÉÎ ªÀÄvÀÛµÀÄÖ ¸ÀA±ÉÆÃzsÀ£É £ÀqɸÀ®Ä ¥ÉæÃgÀPÀªÁVzÉ.
MmÁÖgÉ PÀ£ÁðlPÀzÀ°è ¥ÁæUÉÊwºÁ¹PÀ vÁªÀÄæAiÀÄÄUÀzÀ ªÀiÁ£ÀªÀ£À ¸ÁA¸ÀÌøwPÀ «PÁ¸ÀzÀ MAzÀÄ ¥ÀæªÀÄÄR WÀlÖªÀ£ÀÄß CjAiÀÄ®Ä F ¸ÀA±ÉÆÃzsÀ£ÉUÀ¼ÀÄ ¸ÀºÁAiÀÄPÀªÁUÀÄvÀÛªÉ. CA¢£À DAiÀÄÄzsÉÆÃ¥ÀPÀgÀtUÀ¼À£ÀÄß GvÀà£Àß ªÀiÁqÀÄwÛzÀÝ PÀæªÀĪÀ£ÀÄß CjAiÀÄ®Ä ¸ÀºÀ, F PÉÆqÀ°AiÀÄÄ ¥ÀæªÀÄÄR DPÀgÀªÁUÀĪÀÅzÀgÀ°è ¸ÀA±ÀAiÀÄ«®è.

[F PÉÆqÀ°AiÀÄ EgÀÄ«PÉAiÀÄ §UÉÎ £À£ÀUÉ ªÀiÁ»w ¤Ãr ¸ÀºÀPÀj¹zÀ UÀgÀUÀ UÁæªÀÄzÀªÀgÁzÀÀ ¸À¨ïE£ïì¥ÉPÀÖgï ªÀÄAdÄ£Áxï, gÀªÉÄñï, gÉÃtÄPÀ¥Àà, PÉëÃvÀæPÁAiÀÄðzÀ°è ¸ÀºÀPÀj¹zÀ ¸ÁßvÀPÉÆÃvÀÛgÀ EwºÁ¸À «zÁåyðUÀ¼ÁzÀ UÀÄgÀĪÀÄÆwð, zÉêÀgÁeï ªÀÄvÀÄÛ ºÉaÑ£À CzsÀåAiÀÄ£ÀPÉÌ £À£ÀUÉ PÉÆqÀ°AiÀÄ£ÀÄß PÉÆlÄÖ ¸ÀºÀPÀj¹zÀ gÁªÀiÁ£ÁAiÀÄÌ ºÁUÀÆ vÁªÀÄ沯ÁAiÀÄÄUÀ ¸ÀA¸ÀÌøwAiÀÄ PÉÆqÀ°AiÀÄ §UÉÎ £À£ÀUÉ «±ÉõÀ ªÀiÁ»w ¤ÃrzÀ SÁåvÀ ¥ÀÅgÁvÀvÀé ±Á¸ÀÛçdÕgÁzÀ qÁ. C. ¸ÀÄAzÀgÀ, qÁ. JA.J¸ï. PÀȵÀÚªÀÄÆwð, qÁ. J¸ï.ªÉÊ. ¸ÉÆêÀıÉÃRgï ªÀÄvÀÄÛ qÁ. f. ªÀÄ£ÉÆÃeï EªÀjUÉ®è £À£Àß PÀÈvÀdÕvÉUÀ¼ÀÄ.]



Saturday, December 29, 2012

ಉಡುಪಿಯ ಅಪ್ರಕಟಿತ ಕೊಜುಕೊಳಿ ಶಾಸನ





ಪ್ರೊ. ಟಿ. ಮುರುಗೇಶಿ,
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ,
 ಎಂ.ಎಸ್.ಆರ್.ಎಸ್. ಕಾಲೇಜು ಶಿರ್ವ - ೫೭೪೧೧೬ಉಡುಪಿ.       .  
  ಮತ್ತು  
 ಶ್ರೀಧರ್ ಭಟ್ಕೆ. ಹಿರಿಯ ಶಿಕ್ಷಕರು,
 ಕಮಲಾ ಬಾಯಿ ಪ್ರೌಢಶಾಲೆಕಡಿಯಾಳಿಉಡುಪಿ.
                   ಉಡುಪಿ ತೆಂಕನಿಡಿಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಳಾರ್ಕಳ ಬೆಟ್ಟುವಿನ ಕೊಜಕುಳಿ ಎಂಬ ಸ್ಥಳದಲ್ಲಿ ಹೊಸ ಶಾಸನವೊಂದು ಪತ್ತೆಯಾಗಿದೆ. ಕೊಜಕುಳಿಯ ಪ್ರಗತಿಪರ ರೈತ ಮಹಿಳೆ ಶ್ರೀಮತಿ ಹೇಮಲತಾ ಬಿ ಶೆಟ್ಟಿಯವರ ಮನೆಯ ಹಿಂಭಾಗದ ಗದ್ದೆಯಲ್ಲಿ ಈ ಶಾಸನ ಕಂಡು ಬಂದಿದೆ.
          ಇಂಚು ಅಗಲ ಮತ್ತು  ಇಂಚು ದಪ್ಪನೆಯ ಆಯತಾಕಾರದ ಪಾಂಡು ಶಿಲೆಯಲ್ಲಿ ರಚಿತವಾಗಿರುವ ಈ ಶಾಸನದ ಮೇಲ್ಭಾಗವನ್ನು ಕುದುರೆ ಲಾಳದಂತೆ ವಿನ್ಯಾಸಗೊಳಿಸಲಾಗಿದೆ. ಮೇಲೆ ಮಧ್ಯಭಾಗದಲ್ಲಿ ಚಿಕ್ಕ ಪಾಣಿ ಪೀಠದ ಮೇಲೆ ದೊಡ್ಡ ಲಿಂಗವಿದೆ. ಪೀಠ ಮತ್ತು ಲಿಂಗ ಪ್ರಮಾಣ ಬದ್ಧವಾಗಿಲ್ಲ. ಎಡ-ಬಲದಲ್ಲಿ ಸೂರ್ಯ-ಚಂದ್ರರ ಉಬ್ಬು ಶಿಲ್ಪಗಳಿವೆ.
          ಮೂರು ಸಾಲುಗಳಲ್ಲಿ ಈ ಶಾಸನವನ್ನು ಬರೆಯಲಾಗಿದೆ. ಕನ್ನಡ ಲಿಪಿ ಮತ್ತು ಭಾಷೆಯ ಈ ಶಾಸನದಲ್ಲಿ ಎರಡು ತುಳು ಮೂಲದ ಪದಗಳಿವೆ. ಈ ಶಾಸನ ಅಧ್ಯಯನದ ಉದ್ದೇಶವೇ ಈ ಪ್ರಬಂಧದ ಆಶಯವಾಗಿದೆ.


 ಶಾಸನದ ಪಾಠ:


೧.     ೦ ಶ್ರೀ ಮ ತು ಪಿ ಂ ಗ ಲ್ಸ ಂ (ವ) ರ (ದ) ಕು ಂ ದ ಯ

೨.     ೦ ಪಿ ರು ಂ ಗೊ ಕೊ ಯ ಕು ಳಿ ಯ ಬ ಯ ಲ

೩.     ೦ ಬೊ ರ ಗೆ ಎ ರ ದ ಧ ರ್ಮ - - -




ಶಾಸನದ ಮಹತ್ವ:

ಪ್ರತಿಯೊಂದು ಸಾಲನ್ನು ಶೂನ್ಯ ಬಿಂದುವಿನೊಂದಿಗೆ ಪ್ರಾರಂಭಿಸಲಾಗಿದೆ. ಶಾಸನೋಕ್ತ ವಿಷಯದ ಪ್ರಕಾರ ಪಿಂಗಳ ಸಂವತ್ಸರದಲ್ಲಿ ಕೊಯಕುಳಿ ಬಯಲನ್ನು ಬೋರ ಎಂಬ ವ್ಯಕ್ತಿಗೆ ದಾನವಾಗಿ ನೀಡಿರುವುದನ್ನು ಪ್ರಸ್ಥಾಪಿಸಲಾಗಿದೆ. ಪ್ರಸ್ತುತ ಶಾಸನ ದೊರೆತ ಈಗಿನ ಕೊಜಕುಳಿಯನ್ನು ಕೊಯಕುಳಿ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಕೊಜಕುಳಿಯ ಸ್ಥಳನಾಮದ ಅಧ್ಯಯನಕ್ಕೆ ಸದರಿ ಶಾಸನ ಹೆಚ್ಚಿನ ಸಹಾಯ ಒದಗಿಸುತ್ತದೆ. ಶಾಸನದ ಎರಡನೇ ಸಾಲಿನಲ್ಲಿರುವ ಪಿರುಂಗೊ ಕೊಯಕುಳಿ ಎಂಬ ಪದಗಳು ತುಳು ಮೂಲದ ಪದಗಳಾಗಿವೆ. ಈಗಲೂ ಮಡಕೆ ತಯಾರಿಸುವ ಮಣ್ಣನ್ನು ತುಳುವಿನಲ್ಲಿ ಕೊಜೆತ್ತ ಮಣ್ಣ್/ಕೊಜೆ ಮಣ್ಣು ಎಂದು ಕರೆಯಲಾಗುತ್ತದೆ. ಆದರೆ ಕೊಯಕುಳಿಯ ಪೂರ್ವೋಕ್ತ ಪಿರುಂಗೊ ಪದದ ಅರ್ಥ ಅಸ್ಪಷ್ಟವಾಗಿದೆ. ಕುಂದಯನ ಮೂಲವೂ ಇನ್ನು ಸ್ಪಷ್ಟವಾಗಿಲ್ಲ. ಮೂರನೇ ಸಾಲಿನ ನಂತರ ಶಾಸನದ ಅಕ್ಷರಗಳನ್ನು ಕೆತ್ತಿ ತೆಗೆದಂತೆ ಕಂಡು ಬರುತ್ತದೆ. ಶಾಸನ ಇರುವ ಭಾಗದ ಮೇಲ್ಮೈಗೂ ಕೆಳಭಾಗದ ಮೇಲ್ಮೈಗೂ ಇರುವ ಅಂತರ ಸ್ಪಷ್ಟವಾಗಿ ಕಂಡು ಬರುತ್ತದೆ. ಕೆತ್ತಿದ ಗುರುತುಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಣಬಹುದು.

ಶಾಸನದ ಕಾಲ:

                 ಶಾಸನದಲ್ಲಿ ಪಿಂಗಳ ಸಂವತ್ಸರ ಉಲ್ಲೇಖದ ಹೊರತಾಗಿ ಕಾಲಮಾನದ ಬೇರಾವುದೇ ಉಲ್ಲೇಖವಿಲ್ಲ. ಶಾಸನದಲ್ಲಿ ಬಳಕೆಯಾಗಿರುವ ಕು ಹಾಗೂ ಳಿ ಅಕ್ಷರಗಳು ವಿಜಯನಗರೋತ್ತರ ಲಿಪಿ ಲಕ್ಷಣವನ್ನು ಅಭಿವ್ಯಕ್ತಗೊಳಿಸುತ್ತವೆ. ಆದರೆ ಪಿ ಮತ್ತು  ಅಕ್ಷರಗಳು ಆರಂಭಿಕ ವಿಜಯನಗರದ ಲಿಪಿ ಲಕ್ಷಣಗಳನ್ನು ಹೊಂದಿವೆ. ತುಳುನಾಡಿನ ಲಿಪಿ ಲಕ್ಷಣದ ಈ ವಿಶಿಷ್ಠ ತೊಡಕು ಲಿಪಿ ಲಕ್ಷಣದ ಆಧಾರದ ಮೇಲೆ ಕಾಲಮಾನವನ್ನು ನಿರ್ಧರಿಸುವಲ್ಲಿ ಸವಾಲಾಗಿದೆ. ಶಾಸನಾರಂಭದ ಶ್ರೀ ಅಕ್ಷರ ಸ್ಪಷ್ಟವಾಗಿ ವಿಜಯನಗರೋತ್ತರ ಶೈಲಿಯಲ್ಲಿದೆಆದ್ದರಿಂದ ಶಾಸನವನ್ನು ವಿಜಯನಗರೋತ್ತರ ಕಾಲದ ಶಾಸನವೆಂದು ಪರಿಗಣಿಸಬಹುದಾಗಿದೆ. ಪಿಂಗಳ ಕ್ರಿ.ಶ. ೧೬೧೮ ಮತ್ತು ೧೬೭೮ ಕ್ಕೆ ಸರಿಹೊಂದುತ್ತದೆಯಾದ್ದರಿಂದಸದರಿ ಶಾಸನದ ಕಾಲವನ್ನು ಲಿಪಿ ಲಕ್ಷಣದ ಆಧಾರದಲ್ಲಿ ಕ್ರಿ.ಶ. ೧೬೭೮ ಕ್ಕೆ ಅನ್ವಯಿಸಬಹುದಾಗಿದೆ.


Friday, December 28, 2012

ಕಲಘಟಗಿ ಪ್ರದೇಶದ ಪುರಾತತ್ತ್ವ ಹಾಗೂ ಇತಿಹಾಸ



                                                                               ಶೃಂಗೇರಿ ಕರ್ನಾಟಕ ಇತಿಹಾಸ ಸಮ್ಮೇಳನ

ಡಾ. ಎಸ್.ಕೆ. ಜೋಶಿ
೬೦, ಸಿಲ್ವರ್ ಆರ್ಚರ್ಡ್, ಪುರಾತತ್ತ್ವವಿದ,
ಧಾರವಾಡ-೫೮೦೦೦೧.

ರಡೂವರೆ ಸಾವಿರ ದೀರ್ಘ ಇತಿಹಾಸ ಕರ್ನಾಟಕದ, ಒಂದು ಮಲೆನಾಡಿನ ಪ್ರದೇಶವಾದ ಕಲಘಟಗಿ ಪ್ರದೇಶವು, ಒಂದು ಸಾವಿರ ವರುಷಗಳ ಪ್ರಶಾಂತ ಹಾಗೂ ನಿವಾಂತ ಸಾಂಸ್ಕೃತಿಕ ಬದುಕನ್ನು ಬೆಳೆದು, ಇಡಿಯಾದ ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಭಾಗಿಯಾಗಿದೆ.
ಕಲಘಟಗಿ ಪ್ರದೇಶದಲ್ಲಿ ಕ್ಷಾತ್ರ ತೇಜದಿ ಮೆರೆದ ವೀರಗಲ್ಲುಗಳಿವೆ, ಮಹಾಸತಿ ಕೈಗಳಿವೆ, ಮೃದ್‌ಕೋಟೆ, ದೇವಸ್ಥಾನ, ಬಸದಿಗಳಿವೆ, ಕಿವಿವೆತ್ತ ಕಿವುಡರಿಗೆ ಇತಿಹಾಸದ ಕೂಗನ್ನು ಹೇಳುವ ಶಿಲಾಶಾಸನಗಳಿವೆ, ಸಾರ್ವಜನಿಕ ಉಪಯೋಗದ ಪ್ರಾಚೀನ ಕೆರೆ ಬಾವಿ, ಪುಷ್ಕರಣಿಗಳಿವೆ. ಈ ರೀತಿಯ ಪ್ರಾದೇಸಿಕ ಕೊಡುಗೆಗಳಾದ ಈ ಶಿಲ್ಪದ ಸಂಪುಷ್ಪ ತಲ್ಪಗಳು ಹೇಗೆ ಅರಳಿವೆ ಎಂಬುದನ್ನು ನೋಡಲು ಪ್ರಯತ್ನಿಸಲಾಗಿದೆ.
ಈ ರೀತಿ ಮುಂದುವರೆಯುತ್ತ, ಕನ್ನಡ ಸಾಹಿತ್ಯಸಿರಿ ಹಾಗೂ ಕನ್ನಡ ಶಿಲ್ಪ ಸಂಪುಟಗಳೆರಡನ್ನೂ ಜೋಡಿಸಿ ನೋಡಿ ದಾಗ ಹಾಗೂ ಪ್ರಾಚೀನ ತಲಘಟಗಿ (ಕಲ್ಲುತುಟಿಕೆ)ಗಳ ಪ್ರದೇಶಗಳು ಸ್ಮರಣೀಯ ಕೊಡುಗೆ ನೀಡಿವೆ. ಕರ್ನಾಟಕದ ಸಂಸ್ಕೃತಿಯಾಗುವಲ್ಲಿ ಅನೇಕ ವಿವೇಕಗಳು ಈ ನಾಡಿನಲ್ಲಿ ಕೈ ಜೋಡಿಸಿವೆ. ಕನ್ನಡದ ಕೈಗಳು ಶಿಲ್ಪಗಳನ್ನು ಕೊರೆದರೆ, ಅದೇ ಕೈಗಳ ಬೆರಳುಗಳು ಲೆಕ್ಕಣಿಕೆ ಹಿಡಿದು ಸಾಹಿತ್ಯ ಬರೆದಿವೆ.
ಕಲಘಟಗಿ ತಾಲೂಕಿನಲ್ಲಿ ಐತಿಹಾಸಿಕವಾಗಿ ಹರಡಿದ ತಾಣಗಳು: ಕಲಘಟಗಿ, ತಂಬೂರು, ಕಂದಲಿ, ಕಾಮಧೇನು, ಮಿಶ್ರಕೋಟಿ, ಸಂಗಮೇಶ್ವರ, ನೀರಸಾಗರ, ಗಂಜೀಗಟ್ಟಿ.
ಇವುಗಳೆಲ್ಲ ಅಲ್ಪಸಂಖ್ಯೆಯಲ್ಲಿದ್ದರೂ, ಭಾವದ ಬೆಡಗನ್ನು ಕಲ್ಲಿನಲ್ಲಿ ಮೂಡಿಸಿವೆ. ಸತ್ತವರ ಕೃತಿಗಳಲ್ಲ ಅವು, ಎಚ್ಚತ್ತವರ ವಿಸ್ಮ ತಿಗಳು ಮೇಲಿನ ತಾಣಗಳು ಒಂದಿಲ್ಲೊಂದು ಐತಿಹಾಸಿಕ ಅಂಶಗಳಲ್ಲಿ ಕೋಟೆ, ಕೆರೆ, ದೇವಸ್ಥಾನ, ಶಿಲಾಲೇಖ, ಸ್ಥಳಮಹಾತ್ಮೆ ಇತ್ಯಾದಿಗಳಲ್ಲಿ ದಾಖಲೆಗೊಂಡಿವೆ. (ಕರ್ನಾಟಕ ರಾಜ್ಯ ಗ್ಯಾಝೆಟಿಯರ್, ಧಾರವಾಡ ಜಿಲ್ಲೆ, ಪರಿಷ್ಕೃತ ಆವೃತ್ತಿ, ಸಂ. ಸೂರ್ಯನಾಥ ಕಾಮತ, ೧೯೯೫).
ಇವುಗಳಲ್ಲದೆ ಕೆಳಗಿನವು ಕಂದಾಯ ಗ್ರಾಮಗಳ ಪಟ್ಟಿಕೆಯಲ್ಲಿ ದಾಖಲಿಸಲಾಗಿದೆ. ಕಲಘಟಗಿ ತಾಲೂಕು ಒಟ್ಟು ೮೨ ಗ್ರಾಮಗಳನ್ನೊಳಗೊಂಡಿದೆ. ಮಲಕನಕೊಪ್ಪ, ಹುಣಸಿಕಟ್ಟಿ, ಮಾಚಾಪುರ, ಮುಕ್ಕಲ, ಮುತ್ತಗಿ, ಹಲವದಾಳ, ಲಿಂಗನಕೊಪ್ಪ, ಸಿಂಗನಹಳ್ಳಿ, ಸಿದ್ಧನಭಾವಿ, ಶಿವನಾಪುರ, ಸಂಗದೇವರಕೊಪ್ಪ, ಸೂರಶೆಟ್ಟಿಕೊಪ್ಪ, ಸಂಗಟಿಕೊಪ್ಪ, ಸೂಳೆಕಟ್ಟೆ, ಸೋಮನಕೊಪ್ಪ, ಸೋಲಾರಗೊಪ್ಪ, ಹಟಕಿನಾಳ, ಹನುಮಾಪುರ, ಹಟಕಿನಾಳ, ಹಲತುಂಬಿ, ಹಾರೋಗೇರಿ, ಹಿಂಡಸಗೇರಿ, ಹುಲಗಿನಕೊಪ್ಪ, ರಾಮನಾಳ, ಹರಲಾಪುರ ಹಾಗೂ ಬೀರವಳ್ಳಿ, ಬುದ್ರುಗ ಸೀಗಿಹಳ್ಳಿ, ಬೆಂಡಿಗೇರಿ ಬೇಗೂರು, ಧುಮ್ಮವಾಡ, ನಾಗನೂರ, ತಾವರಗೇರಿ, ತಬಕದ ಹೊನ್ನಳಿ, ಜಮ್ಮಿಹಾಳ, ಜಿನ್ನೂರ, ದಿಂಬವಳ್ಳಿ, ಜುಂಜನಬೈಲು, ಚಳಮಟ್ಟಿ, ಬಸವನಕೊಪ್ಪ, ಗುಡ್ಡದ ಹುಲಿಕಟ್ಟಿ, ಗಂಟ್ಯಾಪುರ, ಗಂಜಿಗಟ್ಟಿ, ಗಂಗಿನಕಟ್ಟಿ, ಗಳಗಿ, ಖಾಲಸಾಹುಣಸಿಕಟ್ಟಿ, ಕಾಡನಕೊಪ್ಪ, ಅಸ್ತಕಟ್ಟಿ, ಕಂದ್ಲಿ, ಅರಳಿಹೊಂಡ ಹಾಗೂ ಅರೆಬಸವನ ಕೊಪ್ಪ.
ಈ ಮೇಲಣ ಎಲ್ಲ ತಾಣಗಳು ಇತಿಹಾಸ ನೀಡಿಲ್ಲವಾದರೂ, ಇಡೀ ಮಾನವನ ಬೆಳವಣಿಗೆಯ ಇತಿಹಾಸದಲ್ಲಿದ್ದುಕೊಂಡು ಬದುಕಿಕೊಂಡು ಕಲಘಟಗಿ ನಾಡಿನ ಮೈಗಂಟಿಕೊಂಡಿವೆ. ಇವುಗಳಲ್ಲಿ ಎದ್ದುಕಾಣುವ ಇತಿಹಾಸ ಚರಿತೆಯ ಎಂಟೊಂಬತ್ತು ತಾಣಗಳನ್ನು ಈ ಕೆಳಗೆ ಸಮೀಕ್ಷಿಸುವಾ:
ಕಲಘಟಗಿ: ತಾಲ್ಲೂಕಾ ಕೇಂದ್ರ ಧಾರವಾಡ ಜಿಲ್ಲೆಯಲ್ಲಿ ಅಕ್ಕಿಯ ಕಣಜವಿದು. ಕಲಘಟಗಿ ಅಕ್ಕಿ ಎಂದೇ ಪ್ರಸಿದ್ಧ. ಮಲೆನಾಡಿನಲ್ಲಿ ಬರುವ ಇದು ಮಳೆಗಾಲದಲ್ಲಿ ಸುತ್ತೆಲ್ಲ ಹಸಿರು, ಕೆರೆಬಾವಿಗಳ ತವರು. ಶಾಸನೋಕ್ತ ‘ಕಲ್ಲುಕುಟಿಕೆ ಎಂಬ ಹೆಸರು ಇದಕ್ಕೆ. ಐದು ತ್ರುಟಿತ ಶಾಸನಗಳು ಲಭ್ಯ. ೬ನೆಯ ಕಲ್ಯಾಣ ವಿಕ್ರಮಾದಿತ್ಯನ (ಕ್ರಿ.ಶ.೧೦೮೦) ಆಳ್ವಿಕೆಯಲ್ಲಿಯ ಮಹಾಮಂಡಳೇಶ್ವರ ಗುವಲದೇವನು ಆಳುತ್ತಿದ್ದ ಉಣಕಲ್ಲು-೩೦ ಹಾಗೂ ಸಬ್ಬೆ-೩೦ ಮಂಡಲಗಳೂ ಸಬ್ಬೆಯ ಭಾಗವು ಕಲಘಟಗಿ ಆಗಿತ್ತು. ಬ್ರಾಹ್ಮಣರಿಗೆ ಹಾಗೂ ಜೈನರಿಗೆ ದಾನ ನೀಡಿದ ಶಾಸನಗಳು, ಕೆಲವು ಚೆಲ್ಲುವರಿದ ಮೂರ್ತಿಶಿಲ್ಪಗಳು, ಎರಡು ಜೈನಬಸ್ತಿಗಲ್ಲಿ ೧೧-೧೨ ಶತಮಾನದ ಜೈನ ತೀರ್ಥಂಕರ ಸುಂದರ ಮೂರ್ತಿಗಳು, ಇವುಗಳ ಜೊತೆಗೆ ಹನುಮಂತ, ಗ್ರಾಮದೇವತೆ, ಕಾಳಮ್ಮ ದ್ಯಾಮವ್ವನ ಬಸವಣ್ಣನ ಇತ್ತೀಚಿನ ಗುಡಿಗಳಿವೆ. ದ್ಯಾಮವ್ವ ಜಾತ್ರೆ ಪ್ರಸಿದ್ಧ, ರುಸ್ತುಮ್ ಸಾಹೇಬನ ದರ್ಗಾ, ನೈಋತ್ಯಕ್ಕೆ ಹೊರವಲಯದಲ್ಲಿ ‘ಸಾತ್ ಶಹೀದ್ ಎಂಬ ಏಳು ಸೂಫಿಗಳ ಹುತಾತ್ಮರ ಸಮಾಧಿಗಳಿವೆ. ಬಿಜಾಪುರದ ಹಾಸಿಮ್ ಪೀರ್‌ನ ಅನುಯಾಯಿಗಳಿವರು. ಬಿಜಾಪುರದ ಆದಿಲ್‌ಶಹನಿಂದ ಸನದು ಪಡೆದುಕೊಂಡ ಜಮೀನಲ್ಲಿ ಕಾಡು ಕಡಿದು ನೆಲೆ ನಿಲ್ಲುವ ಪ್ರಯತ್ನದಲ್ಲಿ ವಿರೋಧವಾಗಿ ಹುತಾತ್ಮರಾದರು (ಕ್ರಿ.ಶ. ೧೬೫೫). ಕಲಘಟಿಯ ಬಣ್ಣದ ತೊಟ್ಟಿಲುಗಳು, ಗಡಿಗೆ ಮಡಿಕೆಗಳು ಪ್ರಸಿದ್ಧ.
ತಂಬೂರು: ಕಲಘಟಗಿಯಿಂದ ದಕ್ಷಿಣಕ್ಕೆ ೧೧ ಕಿ.ಮೀ. ದೂರ. ಶಾಸನೋಕ್ತವಾಗಿ ‘ತಮ್ಮಿಯೂರ, ‘ತಾಂಬ್ರಪುರ, ‘ತಮ್ಮ ಊರು ಕರೆದುಕೊಂಡು ರಾಷ್ಟ್ರಕೂಟರ ಕಾಲದಷ್ಟು ಪುರಾತನ. ಹಲಸಿ-೧೨೦೦೦ಗೆ ಸೇರಿದ ತಮ್ಮಿಯೂರು-೧೨ರ ಆಡಳಿತ ಕೇಂದ್ರ. ರಾಷ್ಟ್ರಕೂಟರ ೪ನೆಯ ಗೋವಿಂದನ (ಕ್ರಿ.ಶ. ೯೩೨) ಶಾಸನವು ಊರುಳವಿಗಾಗಿ ಹೋರಾಟದ ಅಣ್ಣಿಗನ ಬಗ್ಗೆಯೂ ಹಾಗೂ ಇಲ್ಲಿ ೧೦೦೦ ಮಹಾಜನರನ್ನೊಳಗೊಂಡ ಅಗ್ರಹಾರದ ಬಗ್ಗೆಯೂ ಹೇಳುತ್ತದೆ. ಕ್ರಿ.ಶ.೧೧೨೦ರ ಮತ್ತೊಂದು ಶಾಸನವು ಕದಂಬ ಗುವಲದೇವನಾಳುತ್ತಿರುವಾಗ ಸೇನಿಗಗಾವುಂಡ ಫಣಿರಾಜನು ದೇವಾಲಯವೊಂದನ್ನು ಕಟ್ಟಿಸಿದ ಬಗ್ಗೆಯೂ, ಜಯದೇವನೆಂಬ ಪ್ರಮುಖನಿಂದ ವಿಷ್ಣುದೇವಾಲಯ ಕಟ್ಟಿಸಿ ಭೂದಾನ ಮಾಡಿದ ವಿಷಯ ತಿಳಿಸುತ್ತದೆ. ಕ್ರಿ.ಶ.೧೧೨೫ರಲ್ಲಿ ಬರ್ಮಚಯ್ಯ ನಾಯ್ಕ ಹಾಗೂ ರಾಜಮಲ್ಲನಾಯ್ಕರು ಜಿನದೇವಾಲಯ ಕಟ್ಟಿಸಿದ ಬಗ್ಗೆ, ಭೂದಾನದ ಬಗ್ಗೆ ಹೇಳುತ್ತದೆ ಇನ್ನೊಂದು ಶಾಸನ. ಊರಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಬಸವಣ್ಣ (ಈಶ್ವರ) ದೇವಾಲಯವಿದೆ, ಇದನ್ನು ಭಾರತೀಯ ಪುರಾತತ್ವ ಇಲಾಖೆ ರಕ್ಷಿಸುತ್ತಿದೆ. ಶ್ರೀ ಕಲ್ಮೇಶ್ವರ ದೇವಾಲಯವೂ ಜೀರ್ಣೋದ್ಧಾರಗೊಂಡಿದೆ. ಊರ ಹೊರಗೆ ಗುಡ್ಡದ ಮೇಲೆ ‘ಉತ್ತರ ಕುಮಾರನ ಗುಡಿ ನವರಂಗ, ಅಂತರಾಳ, ಗರ್ಭಗೃಹಗಳಿಂದೊಡಗೂಡಿದ್ದು, ಕದಂಬನಾಗರ ಶೈಲಿಯ ಶಿಖರ ಹೊಂದಿದೆ. ಹಲವಾರು ವೀರಗಲ್ಲುಗಳು ಮಾಸ್ತಿಕಲ್ಲುಗಳು ಇರುವುದರಿಂದ ೧೨ನೇ ಶತಮಾನದಲ್ಲಿ ದೊಡ್ಡ ಕಾಳಗವೊಂದು ಜರುಗಿರಲು ಸಾಕು. ಊರಿನ ಸುತ್ತ ಕೋಟೆಯಿದ್ದ ಅವಶೇಷಗಳು ಮಾತ್ರ ಉಳಿದಿವೆ. ಮಸೀದಿ ಹಾಗೂ ದರ್ಗಾಗಳೂ ಇಲ್ಲಿವೆ.  ಐತಿಹಾಸಿಕವಾಗಿ ಇದು ಈ ಭಾಗದಲ್ಲಿಯ ಅತ್ಯಂತ ಚಟುವಟಿಕೆಯ ತಾಣವಾಗಿತ್ತೆಂದು ತಿಳಿಯುತ್ತದೆ.
ಕಂದಲಿ: ಕಲಘಟಗಿಯಿಂದ ನೈಋತ್ಯಕ್ಕೆ ೫ ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ. ಕಲ್ಯಾಣ ಚಾಲುಕ್ಯರ ಎರಡು ಶಾಸನಗಳಿವೆ. ಅವುಗಳಲ್ಲಿ ಗೋವೆ ಕದಂಬ ಅರಸ ಇಮ್ಮಡಿ ಚೆಟ್ಟಿದೇವನ ಕ್ರಿ.ಶ.೧೦೫೦ ಶಾಸನವು ಬಾದುಬ್ಬೆ (ಬನಶಂಕರಿ) ವಿಗ್ರಹ ಸ್ಥಾಪನೆ ಮಾಡಿದ ವಿವರ ತಿಳಿಸುತ್ತದೆ. ಎರಡನೆಯ ಶಾಸನವು ಕ್ರಿ.ಶ.೧೧೫೨ರದಿದ್ದು, ಅಜ್ಜಿಗಾವೆಯ ತೈಲಜ ಸಾಮಂತನು ಕಿರುವತ್ತಿಯನ್ನು ಮುತ್ತಿದಾಗ ಅಹವಮಲ್ಲಯ್ಯ ನಾಯಕನು ಹೋರಾಡುತ್ತ ಮಡಿದ ವಿಷಯವನ್ನು ಸೂಚಿಸುತ್ತದೆ. ಈ ತಾಣವು ತ್ಯಾಗ ಬಲಿದಾನದ ನೆನಪನ್ನು ನೀಡುತ್ತದೆ.
ಕಾಮಧೇನು: ಇದೂ ಕಲಘಟಗಿಯಿಂದ ಈಶಾನ್ಯಕ್ಕೆ ೧೦ ಕಿ.ಮೀ. ದೂರದಲ್ಲಿದೆ. ಪ್ರಾಚೀನ ಶಾಸನಗಳಲ್ಲಿ ‘ಸಾಸಲು ಎಂದೇ ಕರೆಯಲ್ಪಟ್ಟಿದ್ದು ಕಾಮಧೇನು ಎಂಬ ಹೆಸರು ಹೇಗೆ ಬಂತು? ಇದರ ಬಗ್ಗೆ ದಾಖಲೆಗಳೇನೂ ಇಲ್ಲ. ಈ ಊರ ದಕ್ಷಿಣಕ್ಕಿರುವ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ೩ ಶಿಲಾಶಾಸನಗಳು ಲಭ್ಯವಾಗಿವೆ. ೨ನೇ ಸೋಮೇಶ್ವರ (ಕ್ರಿ.ಶ.೧೧೨೯) ಶಾಸನವು ಹಲಸನಾಡಿನ ಶಾಸನವೆಂದು ದಾಖಲಿಸಿ, ಸಾಸಲು ಗ್ರಾಮದ ಸೌಂದರ್ಯೀಕರಣ ಬಗ್ಗೆ ಹಾಗೂ ಅದರ ಪ್ರಾಕೃತಿಕ ಸೌಂದರ್ಯ ವರ್ಣಿಸುತ್ತದೆ. ಮಲ್ಲಶೆಟ್ಟಿ ಎಂಬುವನು ಈ ದೇವಸ್ಥಾನಕ್ಕೆ ಭೂಮಿ ಹಾಗೂ ಹಣ ದಾನ ಮಾಡಿದ್ದನ್ನು ಹೇಳುತ್ತದೆ. ಕ್ರಿ.ಶ.೧೧೭೧ರ ಶಾಸನವು ಕುಮಾರ ಮಲ್ಲಯ್ಯನು ಕಲಿದೇವರಿಗೆ ದಾನ ಕೊಟ್ಟದ್ದು ಹೇಳುತ್ತದೆ. ೧೩ನೇ ಶತಮಾನದ ಶಾಸನವು ಮಾಂಟಲಿಕ ಮಾದಿಗನನ್ನು ಉಲ್ಲೇಖಿಸುತ್ತದೆ. ಈ ದೇವಸ್ಥಾನ ವಾಸ್ತುಶಿಲ್ಪದ ಎಲ್ಲ ಅಂಗಗಳನ್ನು ಮುಖಮಂಟಪ, ಸಭಾಮಂಟಪ, ಅಂತರಾಳ, ಗರ್ಭಗೃಹ ಒಳಗೊಂಡು, ಬಾಗಿಲವಾಡ ಜಾಲಂಧ್ರಗಳು, ಅಲಂಕರಿಕ ಕಂಬಗಳು, ಕಾರ್ತಿಕೇಯ, ಸಪ್ತಮಾತ್ರಿಕೆಯರ ಶಿಲ್ಪಗಳು, ಗಣಪತಿ, ಮಹಿಷಮರ್ದಿನಿ, ಕೇಶವನ ಬಿಡಿ ಸುಂದರ ಮೂರ್ತಿಗಳಿವೆ. ಈ ದೇವಸ್ಥಾನವು ಅತ್ಯಂತ ಸುಂದರ ದೇವಸ್ಥಾನವಾಗಿದ್ದು ಕಲಘಟಗಿ ತಾಲೂಕಿಗೆ ಶಿಲ್ಪ ಸೌಂದರ್ಯವನ್ನು ಎಳೆದುತಂದಿದೆ.
ಮಿಶ್ರಕೋಟಿ: ಕಲಘಟಗಿಯಿಂದ ಈಶಾನ್ಯಕ್ಕೆ ೧೦ ಕಿ.ಮೀ. ದೂರ ಇದೆ. ಇಲ್ಲಿ ೩ ಶಾಸನಗಳು, ಒಂದು ರಾಮಲಿಂಗೇಶ್ವರ ದೇವಸ್ಥಾನ, ಒಂದು ಸುತ್ತುವರದಿ ಮಣ್ಣಿನ ಕೋಟೆ (ಒuಜ ಜಿoಡಿಣ) ಬುರುಜಗಳೊಂದಿಗೆ (ಃಚಿsioಟಿs) ದೊರೆಯುತ್ತವೆ. ಕೋಟೆಗೆ ನಿರ್ದಿಷ್ಟ ಹಂತಗಳಲ್ಲಿ ಈ ಬುರುಜುಗಳಿವೆ ಹನ್ನೆರಡು. ಪ್ರಾಚೀನ ಮೃದ್ ಕೋಟೆಗಳು ಬನವಾಸಿ ಕದಂಬರ ಕಾಲದಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಭಾಗಶಃ ಧಾರವಾಡ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಸ್ಥಳ ದುರ್ಗ, ವನದುರ್ಗ, ಗಿರಿದುರ್ಗ ಹಾಗೂ ಜಲದುರ್ಗಗಳು, ಒಂದು ಪ್ರಕಾರವಾದ ಸ್ಥಳದುರ್ಗ (ಉಡಿouಟಿಜ ಜಿoಡಿಣ) ಇದಾಗಿದೆ. ಇಲ್ಲಿ ಕ್ರಿ.ಶ.೧೧೨೬, ಕ್ರಿ.ಶ.೧೧೫೬ ಹಾಗೂ ಕ್ರಿ.ಶ.೧೧೫೮ರ ಶಾಸನಗಳು ದೊರೆಯುತ್ತವೆ. ವಿಶೇಷವಾಗಿ ಕ್ರಿ.ಶ.೧೧೫೮ರ ಶಾಸನವು ಗೋವಾ ಕದಂಬರ ‘ಪೆರ್ಮಾಡಿದೇವನ ಕೊಡುಗೆಯನ್ನು ವಿವರಿಸುತ್ತದೆ. ಗೋವೆಯರು ಕನಾಟಕದ ಒಂದು ಭಾಗವಾಗಿತ್ತೆಂದು ಈ ಶಾಸನವು ಸತ್ಯಸ್ಯ ಸತ್ಯ ಹೇಳುತ್ತದೆ.
ಸಂಗಮೇಶ್ವರ: ಇದು ಕಲಘಟಗಿಯಿಂದ ಪಶ್ಚಿಮಕ್ಕೆ ೧೦ ಕಿ.ಮೀ. ದೂರದಲ್ಲಿದೆ. ಇಲ್ಲಿ ಐದು ಶಾಸನಗಳು ದೊರೆತಿವೆ. ಊರ ಹೊರಗೆ ಇರುವ ಕಲ್ಮೇಶ್ವರ ಗುಡಿ (ಶಾಸನೋಕ್ತ ಹಮ್ಮೇಶ್ವರ)ಯ ತೊರೆಯ ಮೇಲೆ ಮೂರು ಇವೆ. ಗೋವೆಯ ಕದಂಬ ಒಂದನೆಯ ಜಯಕೇಶಿಯ (ಕ್ರಿ.ಶ.೧೦೬೮ರ ಶಾಸನ) ಚಟ್ಟಗೊಡಬನೆಂಬುವನು ಈ ದೇವಾಲಯಕ್ಕೆ ಭೂದಾಣ ಮಾಡಿದ ವಿವರವಿದೆ. ಕ್ರಿ.ಶ.೧೦೮೨ರ ಶಾಸನವೊಂದು ಅಲ್ಲಿಯ ಶಿವಾಲಯಕ್ಕೆ ದಾನ ಮಾಡಿದ ನಾಗಣ್ಣನನ್ನು ಸ್ಮರಿಸುತ್ತದೆ. ೧೦೮೯ರಲ್ಲಿ ವೀರಸ್ಪರ್ಗವನ್ನೇರಿದ ಯೋಧನ ವೀರಗಲ್ಲೊಂದಿದೆ. ಹಲಸಿಗೆ-೧೨೦೦೦ಕ್ಕೆ ಸೇರಿದ್ದ ಈ ಊರಿಗೆ ‘ಸಂಗಮೇಶ್ವರ ಹೆಸರು ಬರಲು ಕಾರಣ ದೊಡ್ಡಹಳ್ಳ ಮತ್ತು ಮಂಗ್ಯಾನಹಳ್ಳಿ ಹಂಪಾಹಳ್ಳ ಹಾಗೂ ಸಂಗಮೇಶ್ವರಗಳ ನಡುವೆ ಕೂಡಿದ್ದು ಅದು ಇಂದಿನ ಸಂಗಮೇಶ್ವರದಿಂದ ಎರಡು ಕಿ.ಮೀ. ದೂರದಲ್ಲಿ ಸಂಗಮವಾಗಿರುವುದರಿಂದ ಈ ಊರಿಗೆ ಆ ಹೆಸರು. ಈ ಕಲ್ಮೇಶ್ವರ ಗುಡಿಯು ದೇವಾಲಯ ಎಲ್ಲ ವಿನ್ಯಾಸದ ಅಂಗಗಳನ್ನು ಹೊಂದಿದ್ದು, ಮಹಿಷಮರ್ದಿನಿ, ಸರಸ್ವತಿ ಭೈರವ, ಸಪ್ತಮಾತ್ರಿಕೆಯರು, ಗಣಪತಿ, ಕಾರ್ತಿಕೇಯ, ಶಿವಪಾರ್ವತಿ, ಅನಂತಪದ್ಮನಾಭ, ಸುಂದರ ಶಿಲ್ಪಗಳಿವೆ. ಶೈವ ಹಾಗೂ ವೈಷ್ಣವ ಭಾವಗಳನ್ನು ಸಂಗಮಿಸುವ ಈ ದೇವಾಲಯವು ಸಂಗಮೇಶ್ವರ ಊರಿಗೆ ಭಾವೈಕ್ಯದ ಹೆಮ್ಮೆ ತಂದಿದೆ.
ಗಂಜೀಗಟ್ಟಿ: ಕಲಘಟಗಿಯಿಂದ ೧೨ ಕಿ.ಮೀ. ದೂರದಲ್ಲಿದ್ದು, ಮಿಶ್ರಕೋಟಿಯ ನೆರೆಯ ಗ್ರಾಮವಾಗಿದೆ. ಊರ ಹೊರಗೆ ಗುಡ್ಡದ ಮೇಲೆ ೧೨ನೇ ಶತಮಾನದ ಶ್ರೀ ನಾಗಲಿಂಗೇಶ್ವರ ಗುಡಿ ಇದೆ. ಪೂರ್ವಾಭಿಮುಖವಾದ ಈ ಗುಡಿಯು ನವರಂಗ, ಅಂತರಾಳ ಹಾಗೂ ಗರ್ಭಗುಡಿ ಹೊಂದಿದ್ದು, ಕದಂಬನಾಗರ ಶಿಖರ ಶೈಲಿಯನ್ನು ಹೊಂದಿದೆ. ನವರಂಗದ ಮುಂಭಾಗ ಹಾಳಾಗಿದೆ, ದೇವಕೋಷ್ಟಗಳಲ್ಲಿ ಗಣಪಡಿ, ಭೈರವ, ಸಪ್ತಮಾತೃಕೆಯರು, ವೀರಭದ್ರರ ಮೂರ್ತಿಗಳಿವೆ.
ಹುಣಸಿಕಟ್ಟೆ: ಕಲಘಟಗಿಯಿಂದ ಆಗ್ನೇಯಕ್ಕೆ ೧೦ ಕಿ.ಮೀ. ದೂರ. ಹಲಸಿಗೆ-೧೨೦೦೦ ಪ್ರಾಂತ್ಯಕ್ಕೆ ಸೇರಿದ, ಮಾವಳ್ಳಿ-೫೦೦ ನಾಡಿನ, ಹುಲಿಗೋಡ ೧೨ಕ್ಕೆ ಸೇರಿದ ಗ್ರಾಮವಾಗಿದೆ ಈ ಹುಣಸಿಕಟ್ಟಿ, ಇಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಕಲ್ಯಾಣ ಚಾಲುಕ್ಯರ ಮುಮ್ಮಡಿ ಸೋಮೇಶ್ವರನಿಗೆ ಸಂಬಂಧಿಸಿದೆ (ಕ್ರಿ.ಶ.೧೧೩೦-೩೧ ಎಂದು ಇಲ್ಲಿಯ ಶಾಸನವೊಂದು ತಿಳಿಸುತ್ತದೆ. ಗೋವೆಯ ಕದಂಬ ಪೆರ್ಮಾಡಿದೇವನ ಕಾಲದ ಕ್ರಿ.ಶ.೧೧೪೨ರ ಶಾಸನವು ಹುಳಿಗೋಡ ಮುದ್ದಗಾವುಂಡನು ಹೋಬೇಶ್ವರ ದೇವರಿಗೆ ಭೂದಾನ ಕೊಟ್ಟ ವಿಷಯ ತಿಳಿಸುತ್ತದೆ. ಅಂತರಾಳದಲ್ಲಿ ನಂದಿ ಹಾಗೂ ಕೇಶವನ ಶಿಲ್ಪಗಳಿವೆ. ಚತುರ್ಭುಜ ಈ ಕೇಶವನ ವಿಗ್ರಹ ೨.೫ ಅಡಿ ಎತ್ತರವಾಗಿದ್ದು ಬಹಳ ಸುಂದರವಾಗಿದೆ. ಇವುಗಳಲ್ಲದೆ ಹನುಮಂತ, ದ್ಯಾಮವ್ವ, ಈಶ್ವರ, ಬಸವಣ್ಣರ ಗುಡಿಗಳೂ, ಮಸೀದಿ ಹಾಗೂ ದರ್ಗಾಗಳೂ ಇವೆ. ಇದು ಕೂಡ ಶೈವ ವೈಷ್ಣವ, ಹಿಂದು-ಮುಸ್ಲಿಂ, ಭಾವೈಕ್ಯದ ತಾಣವಾಗಿದೆ.
ಈ ತರಹದ ಇನ್ನೂ ಹತ್ತು ಹಲವಾರು ಐತಿಹಾಸಿಕ ತಾಣಗಳು ಕಲಘಟಗಿ ತಾಲೂಕಿನಲ್ಲಿವೆ. ಆದರೆ ಅವು ಗೌಣವಾಗಿದೆ. ಅಂತಹ ಉಪಸಂಹಾರದಲ್ಲಿ ಹೇಳುವುದಾದರೆ, ಕಲಘಟಗಿಯು ತನ್ನ ಬದುಕಿನುದ್ದಕ್ಕೂ ತನ್ನದೇ ಆದ, ಏರು-ಪೇರುಗಳಿಲ್ಲದ ಪ್ರಶಾಂತ ಹಾಗೂ ನಿವಾಂತ ಐತಿಹಾಸಿಕ ಜೀವನವನ್ನು ಬಾಳಿದೆ. ಕದಂಬರ ನಾಡಾಗಿ, ಕದಂಬ ವಾಸ್ತುಶೈಲಿಯ ದೇವಾಲಯವನ್ನು ಶಿಲ್ಪಗಳನ್ನು ಹೊಂದಿ, ಅಲ್ಲಲ್ಲಿ ಕೆಲ ಮೃದ್‌ದುರ್ಗಗಳನ್ನು ಕಟ್ಟಿಸಿಕೊಂಡು, ಶಾಸನಗಳ ಹೇಳಿಕೆಗಳನ್ನು ಮಾಡಿಸಿ, ತನ್ನದೇ ಆದ ಪ್ರಾದೇಶಿಕ ಇತಿಹಾಸ ಕಟ್ಟಿಕೊಂಡಿದೆ. ಪಕ್ಕದ ನಾಡಾದ ಧಾರವಾಡದ ಸಾಹಿತ್ಯಿಕ ಸಿರಿಯನ್ನು ಹೊಂದಿದ್ದರೂ, ಶಿಲ್ಪಕಲೆಯ ದೃಷ್ಟಿಯಿಂದ ತನ್ನೊಡಲಿನಲ್ಲಿ ಸಾವಿರ ವರುಷದ ಶಿಲ್ಪದ ಸಂಪುಷ್ಟ ತಲ್ಪ ಹೊಂದಿದೆ ಎಂದು ಅಭಿಮಾನದಿಂದ ಹೇಳಬಹುದು.




Tuesday, December 25, 2012

ಚಳ್ಳಕೆರೆ ತಾಲ್ಲೂಕು ಭೋಗನಹಳ್ಳಿಯ ಪ್ರಾಚ್ಯಾವಶೇಷಗಳು



ಬಿ. ಪರಮೇಶ್

ಇತಿಹಾಸ ಉಪನ್ಯಾಸಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಚಳ್ಳಕೆರೆ-೫೭೭೫೨೨.



ಭೋಗನಹಳ್ಳಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿರುವ ಒಂದು ಗ್ರಾಮ ಇದು ಚಳ್ಳಕೆರೆಗೆ ೨೮ ಕಿ.ಮೀ. ದೂರದಲ್ಲಿದೆ. ಚಳ್ಳಕೆರೆಯಿಂದ ಈಶಾನ್ಯ ದಿಕ್ಕಿಗೆ ಇರುವ ಗ್ರಾಮವಾಗಿದೆ. ಈ ಗ್ರಾಮಕ್ಕೆ ಭೋಗನಹಳ್ಳಿ, ಭೋಗನಪಲ್ಲಿ ಎಂದು ಕರೆಯುತ್ತಾರೆ. ಈ ಗ್ರಾಮವು ಪ್ರಾಚೀನ ಗ್ರಾಮವಾಗಿದ್ದು ವೇದಾವತಿ ನದಿ ಎಡದಂಡೆಯ ಮೇಲಿದ್ದು ಪ್ರಾಕ್‌ಚಾರಿತ್ರಿಕ ಮಹತ್ವ ಪಡೆದುಕೊಂಡಿದೆ. ವಿಶೇಷವಾಗಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಈ ಗ್ರಾಮವು ಭೌಗೋಳಿಕವಾಗಿ ಸಂಪತ್‌ಭರಿತವಾಗಿದೆ. ಈ ಗ್ರಾಮಕ್ಕಿರುವ ಹೊಸಕೆರೆ ಮತ್ತು ಹಳೆ ಕೆರೆಗಳಲ್ಲದೆ, ಪಕ್ಕದಲ್ಲಿರುವ ವೇದಾವತಿ ನದಿಯ ಪರಿಸರವು ಸಹಜವಾಗಿಯೇ ಪ್ರಾಚೀನ ಮಾನವನು ನೆಲೆಸಲು ಅವಕಾಶ ಕಲ್ಪಿಸಿದಂತಿದೆ ಎಂಬುದು ಗಮನಾರ್ಹವಾಗಿದೆ.
ಭೋಗನಹಳ್ಳಿಯು ಜಿನಗಿಹಳ್ಳ ಮತ್ತು ವೇದಾವತಿ ನದಿಗಳು ಈ ಗ್ರಾಮವನ್ನು ಸುತ್ತುವರಿದು ಮುಂದೆ ಸಂಧಿಸುತ್ತವೆ. ಜಿನಗಿಹಳ್ಳ ಮತ್ತು ವೇದಾವತಿ ನದಿಯ ಎಡ ಹಾಗೂ ಬಲದಂಡೆಗಳ ಮೇಲೆ ಪ್ರಾಚೀನ ಮಾನವನ ನೆಲೆಗಳು ಪತ್ತೆಯಾಗಿರುವುದನ್ನು ವಿದ್ವಾಂಸರು ಈಗಾಗಲೇ ದಾಖಲಿಸಿದ್ದಾರೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭೋಗನಹಳ್ಳಿಯ ಪರಿಸರ ಹಾಗೂ ಗ್ರಾಮದಲ್ಲಿರುವ ಪ್ರಾಚ್ಯಾವಶೇಷಗಳು ಮತ್ತು ಸ್ಮಾರಕಗಳಿಂದ ಪ್ರಾಚೀನ ಕಾಲದಿಂದಲೂ ತನ್ನದೇ ಆದಂತಹ ಪಾತ್ರವನ್ನು ವಹಿಸುವ ಮೂಲಕ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಈ ಗ್ರಾಮವು ಇತಿಹಾಸ ಪ್ರಸಿದ್ಧ ಬ್ರಹ್ಮಗಿರಿಯಿಂದ ೬೦ ಕಿ.ಮೀ. ಚಂದ್ರವಳ್ಳಿಯಿಂದ ೬೫ ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ಪೂರ್ವಕ್ಕೆ ನಾಯಕನಹಟ್ಟಿ ಕಡೆಯಿಂದ ಜಿನಗಿಹಳ್ಳ ಹರಿದು ಬಿ.ಟಿ.ಪಿ. ಡ್ಯಾಮ್‌ಗೆ ಸೇರುತ್ತದೆ ಹಾಗೂ ವೇದಾವತಿ ನದಿ ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತದೆ. ಜಿನಗಿಹಳ್ಳ ಮತ್ತು ವೇದಾವತಿ ನದಿಗಳು ಸಂಧಿಸುವ ಜಾಗದ ಪಶ್ಚಿಮ ಮತ್ತು ಉತ್ತರದ ಮಧ್ಯ ಇರುವ ಗ್ರಾಮವೇ ಭೋಗನಹಳ್ಳಿ. ಗೌರಸಮುದ್ರ ಮಾರಮ್ಮನ ಜಾತ್ರೆಯಾದ ತಿಂಗಳ ನಂತರ, ಜಾತ್ರೆಯಾದ ಮರುದಿನ ಮಾರಮ್ಮನ ನೆರೆಯನ್ನು ಮಾಡುತ್ತಾರೆ. ಈ ಗ್ರಾಮದಲ್ಲಿ ಈಶ್ವರ ದೇವಾಲಯ, ಹನುಮಂತ ದೇವಾಲಯ, ತಿಮ್ಮಪ್ಪನ ಗುಡಿ, ಬುರುಜು ಮಾರಮ್ಮ, ಹೊರಮಠ, ಕೋಟೆ ಗೋಡೆ, ಪುಷ್ಕರಣಿ, ಸಭಾಮಂಟಪ, ಮುಂತಾದಂತಹ ಸ್ಮಾರಕಗಳಿವೆ. ಗ್ರಾಮದೊಳಗಿರುವ ವೀರಗಲ್ಲುಗಳು ಇಂದಿಗೂ ಅಳಿದುಳಿದುಕೊಂಡಿರುವ ಕೋಟೆ ಕೊತ್ತಲಗಳ ಅವಶೇಷಗಳು ಈ ಗ್ರಾಮಕ್ಕಿರುವ ಐತಿಹಾಸಿಕ ಹಿನ್ನೆಲೆಯನ್ನು ಸಾರುತ್ತವೆ. ಅಂದಿನ ಬದುಕಿನ ವಿವಿಧ ಮಜಲುಗಳನ್ನು ಸಾರುವ ಇಂತಹ ಸಾಂಸ್ಕೃತಿಕ ಹಾಗೂ ಪ್ರಾಕ್‌ಚಾರಿತ್ರಿಕ ಅವಶೇಷಗಳು ಕಾಲದ ದವಡೆಗೆ ಸಿಕ್ಕಿ ಹೇಳಹೆಸರಿಲ್ಲದೆ ಕಣ್ಮರೆಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಭೋಗನಹಳ್ಳಿಯ ಅನೇಕ ಸ್ಮಾರಕಗಳು ಈಗಾಗಲೇ ವಿನಾಶದ ಅಂಚನ್ನು ತಲುಪಿವೆ. ಹಿಂದಿನ ಘಟನೆಗಳನ್ನು ಬದುಕಿನ ವೈವಿಧ್ಯತೆಗಳನ್ನು ಅಕ್ಷರಸ್ಥ ಹಾಗೂ ಅನಕ್ಷರಸ್ಥ ಸಮಾಜಕ್ಕಲ್ಲದೆ, ಭವಿಷ್ಯಕ್ಕೆ ಪಾಠ ಹೇಳುವ ಇಂತಹ ಅಪರೂಪದ ಸ್ಮಾರಕಗಳನ್ನು ಕುರಿತು ಇತಿಹಾಸದಲ್ಲಿ ದಾಖಲಿಸುವುದು ಈ ಲೇಖನದ ಆಶಯವಾಗಿದೆ.
೧. ಈಶ್ವರ ದೇವಾಲಯ ಅಥವಾ ವಿರೂಪಾಕ್ಷ ದೇವಾಲಯ:
ಈ ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವಿದೆ ಗರ್ಭಗುಡಿ, ಸಭಾಮಂಟಪಗಳನ್ನು ಒಳಗೊಂಡಿರುವ ಈ ದೇವಾಲಯವನ್ನು ಇತ್ತೀಚೆಗೆ ಜೀರ್ಣೋದ್ಧಾರಗೊಳಿಸಿದ್ದಾರೆ. ಗರ್ಭಗುಡಿಯು ಪೂರ್ವ ಪಶ್ಚಿಮ ೬.೫ ಅಡಿ ಉತ್ತರ ದಕ್ಷಿಣ ೬.೫ ಅಡಿ ವಿಸ್ತೀರ್ಣ ಹೊಂದಿದೆ. ಗರ್ಭಗುಡಿಯಲ್ಲಿ ಸುಂದರವಾದ ಕಪ್ಪು ಶಿಲೆಯ ೨ ಅಡಿಯ ಎತ್ತರದ ಶಿವಲಿಂಗವಿದೆ. ಆದರೆ ಸಭಾಮಂಟಪದಲ್ಲಿರುವ ನಾಲ್ಕು ಸುಂದರವಾದ ಕಂಬಗಳು ವಿಜಯನಗರೋತ್ತರ ರಚನೆಯನ್ನು ಹೋಲುತ್ತವೆ. ಕಂಬಗಳ ಮೇಲೆ ಅನೇಕ ಉಬ್ಬುಶಿಲ್ಪಗಳಿವೆ. ನವಿಲು, ಹನುಮಂತ, ಭಕ್ತರು, ಬೇಡರ ಕಣ್ಣಪ್ಪ, ವಿನಾಯಕ, ನಾರದ, ಭುವನೇಶ್ವರಿ, ನಂದಿ, ಶಿವಲಿಂಗ, ಪದ್ಮ, ನಾಗಬಂಧ, ಗರುಡ ಮುಂತಾದ ಉಬ್ಬುಶಿಲ್ಪಗಳಿವೆ. ದೇವಾಲಯದ ಹೊರಭಾಗದ ಭಿತ್ತಿಯಲ್ಲಿ ಮೀನು, ಹಾವು, ಮೊಸಳೆ, ಆಮೆ ಮುಂತಾದ ಉಬ್ಬುಶಿಲ್ಪಗಳಿವೆ. ಸಭಾಮಂಟಪದಲ್ಲಿ ನಂದಿ ಶಿಲ್ಪವಿದೆ. ಇದರ ಅಲಂಕಾರ ಸೊಗಸಾಗಿದ್ದು ಕೊರಳಲ್ಲಿ ಗೆಜ್ಜೆ, ಗಂಟೆಸರ, ಕೊರಳಪಟ್ಟಿಯ, ಅಲಂಕಾರಗಳಿವೆ. ಈ ದೇವಾಲಯದ ಗರ್ಭಗೃಹದ ಬಾಗಿಲ ಚೌಕಟ್ಟುಗಳು ಕಲ್ಲಿನಿಂದ ನಿರ್ಮಿತವಾಗಿದೆ. ಎಡ ಮತ್ತು ಬಲ ಭಾಗದಲ್ಲಿ ದ್ವಾರಪಾಲಕರ ಚಿತ್ರವಿದೆ. ಮೇಲೆ ಹಣೆ ಪಟ್ಟಿಕೆಯಲ್ಲಿ ಗಣಪತಿ ಶಿಲ್ಪವಿದೆ. ಗಾಳಿ ಮತ್ತು ಬೆಳಕಿನ ವ್ಯವಸ್ಥೆಯಿಲ್ಲ. ಈ ದೇವಾಲಯದ ಸುತ್ತಲು ತೆರೆದ ಕಲ್ಲುಗೋಡೆಯಿಂದ ಸುತ್ತುವರಿದ ಪ್ರದಕ್ಷಿಣಾ ಪಥವಿದೆ.
೨. ಬುರುಜು ಮಾರಮ್ಮ
ಈ ದೇವಾಲಯವು ಕೋಟೆ ಗೋಡೆಯ ವಾಯವ್ಯ ಭಾಗದಲ್ಲಿದೆ. ಕೋಟೆ ಗೋಡೆಯ ಬುರುಜಿನ ಮೇಲೆ ನಿರ್ಮಾಣ ಮಾಡಿದ್ದಾರೆ. ಈಗ ಜೀರ್ಣೋದ್ಧಾರಗೊಳಿಸಿದ್ದಾರೆ ಇದರ ದ್ವಾರ-ಬಾಗಿಲು ಅಗ್ನಿ ದಿಕ್ಕಿಗೆ ಮುಖ ಮಾಡಿರುವುದು ವಿಶೇಷವಾಗಿದೆ. ಇದು ಊರಿನ ಗ್ರಾಮದೇವತೆಯು ಇದು ಪ್ರತಿ ಮಂಗಳವಾರ ಪೂಜೆ ನಡೆಯುತ್ತದೆ.
೩. ಹನುಮಂತ ದೇವಾಲಯ
ಈ ದೇವಾಲಯವು ಕೋಟೆಯ ಪ್ರವೇಶದ್ವಾರವಿರುವ ಉತ್ತರ ಭಾಗದಲ್ಲಿದ್ದು ಈಗ ಬಿದ್ದು ಹಾಳಾಗಿದೆ. ಪ್ರಸ್ತುತ ದೀಪಸ್ಥಂಬ ಮಾತ್ರ ಇದ್ದು ಅವಶೇಷಗಳು ಉಳಿದಿವೆ. ಹನುಮಂತನ ಉಬ್ಬು ಶಿಲ್ಪವಿದ್ದು ಈ ಶಿಲ್ಪದಲ್ಲಿ ಹನುಮಂತನ ಬಾಲವು ತಲೆಯ ಭಾಗದವರೆಗೂ ಇರುವುದು ವಿಶೇಷ. ಪ್ರತಿ ಶನಿವಾರ ಪೂಜೆ ನಡೆಯುತ್ತದೆ. ಈಗ ಈ ದೇವಾಲಯವನ್ನು ಊರಿನ ಹೊರಗಡೆ ಕಟ್ಟಿಸಿದ್ದಾರೆ.
೪. ತಿಮ್ಮಪ್ಪನ ಗುಡಿ
ಇದು ಕೋಟೆಯ ಉತ್ತರ ದಿಕ್ಕಿನಲ್ಲಿದ್ದು ಹನುಮಂತ ದೇವಾಲಯದ ಪಶ್ಚಿಮದಲ್ಲಿದೆ. ಈ ದೇವಾಲಯವು ಈಗ ಸಂಪೂರ್ಣವಾಗಿ ಹಾಳಾಗಿದ್ದು ಅವಶೇಷಗಳು ಮಾತ್ರ ಉಳಿದಿವೆ.
೫. ಕೋಟೆ
ಇದನ್ನು ಈಶ್ವರ ದೇವಾಲಯದ ಸುತ್ತಲು ನಿರ್ಮಾಣ ಮಾಡಿದ್ದು ಊರಿನ ರಕ್ಷಣೆಗೆ ನಿರ್ಮಿಸಿದ್ದಾರೆ. ನಾಲ್ಕು ಮೂಲೆಗಳಲ್ಲಿ ನಾಲ್ಕು ಬುರುಜುಗಳಿವೆ ಕೆಂಪು ಮತ್ತು ಕಪ್ಪು ಕಲ್ಲುಗಳನ್ನು ಜೋಡಿಸಿ ಕೋಟೆಯನ್ನು ನಿರ್ಮಿಸಲಾಗಿದೆ. ಈ ಕೋಟೆ ೧೫ ಅಡಿ ಎತ್ತರವಿದೆ. ಪ್ರಸ್ತುತ ಹಾಳಾಗಿದ್ದು ಅಲ್ಪಸ್ವಲ್ಪ ಕೋಟೆ ಸಾಲು ಮಾತ್ರ ಇದೆ. ಕೋಟೆಯ ಸುತ್ತಲು ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಕಂದಕವನ್ನು ನಿರ್ಮಿಸಿದ್ದಾರೆ. ಶತ್ರುಗಳ ಹಾವಳಿಯನ್ನು ತಪ್ಪಿಸಲು ಕಂದಕದಲ್ಲಿ ನೀರು ಮತ್ತು ಪಾಪಸ್‌ಕಳ್ಳಿಯನ್ನು ಹಾಕುತ್ತಿದ್ದರು, ಈ ಕೋಟೆಯ ಬುರುಜುಗಳ ಮೇಲೆ ಕಾವಲುಗಾರರು ಇರುತ್ತಿದ್ದರೆಂದು ಊರಿನ ಹಿರಿಯರ ಅಭಿಪ್ರಾಯ.
೬. ವೀರಗಲ್ಲು
ಇದು ೨ ಪಟ್ಟಿಕೆಗಳಿಂದ ಕೂಡಿದ ವೀರಗಲ್ಲು ೭ / ಅಡಿ ಎತ್ತರ ೨ / ಅಗಲ ಇದ್ದು ೯ ಇಂಚು ದಪ್ಪವಿರುವ ಉಬ್ಬುಶಿಲ್ಪಗಳಿರುವ ವೀರಗಲ್ಲು ಇದಾಗಿದ್ದು, ವೀರನು ಬೇಟೆಯಾಡಿ ಮರಣ ಹೊಂದಿದ ನೆನಪಿಗೋಸ್ಕರ ನೆಡಲಾಗಿದೆ. ಇದು ಬೂದಿಹಳ್ಳಿ ಪೂಜಾರಿ ಪಾಲಜ್ಜನ ಜಮೀನಿನಲ್ಲಿದ್ದು ಹಾಗೂ ಬಿ.ಟಿ.ಪಿ ಡ್ಯಾಮ್‌ನ ಹಿನ್ನೀರು ಈ ಜಮೀನಿನವರೆಗೂ ನಿಲ್ಲುತ್ತವೆ. ಮೇಲಿನ ಭಾಗದಲ್ಲಿ ವೀರನು ಕುಳಿತ ಶಿಲ್ಪ ಪಕ್ಕದಲ್ಲಿ ಸ್ತ್ರೀಯರು ನಿಂತಿರುವ ಉಬ್ಬುಶಿಲ್ಪಗಳಿವೆ. ಕೆಳಭಾಗದಲ್ಲಿ ವೀರ ಹುಲಿಯನ್ನು ಬೇಟೆಯಾಡುತ್ತಿರುವ ಚೂಪಾದ ಆಯುಧದಿಂದ ಹುಲಿಗೆ ತಿವಿಯುತ್ತಿರುವ ಶಿಲ್ಪವಿದೆ. ವೀರನ ಹಿಂದೆ ಸ್ತ್ರೀ ಶಿಲ್ಪವಿದೆ.
೭. ಇತರೆ ಸ್ಮಾರಕಗಳು
ಹಳೇ ಮಠ: ಇದು ಈಶ್ವರ ದೇವಾಲಯದ ಮಾದರಿಯಲ್ಲಿದ್ದು ಇದು ಊರಿನ ಪಶ್ಚಿಮ ದಿಕ್ಕಿಗೆ ಇದೆ. ಯತಿಗಳು ವಾಸ ಮಾಡುತ್ತಿರುವ ಮಠವಾಗಿದೆ. ಪಕ್ಕದಲ್ಲಿ ಈ ಮಂಟಪಕ್ಕೆ ಹೊಂದಿಕೊಂಡಿರುವ ಮಜ್ಜನ ಬಾವಿ ಇದೆ. ಈ ಮಠವು ಚಿಕ್ಕದಾದ ಗರ್ಭಗೃಹ ಹೊಂದಿದ್ದು, ಶಿವಲಿಂಗವಿದೆ. ಈಗ ಪೀಠ ಮಾತ್ರವಿದೆ. ನಾಲ್ಕು ಕಂಬಗಳಿರುವ ಒಂದೇ ಸಾಲಿನ ಸಭಾಮಂಟಪವಿದೆ. ಈ ಸಭಾಮಂಟಪದಲ್ಲಿ ಚಿಕ್ಕದಾದ ನಂದಿ ಇದ್ದು, ಪಶ್ಚಿಮ ದಿಕ್ಕಿಗೆ ಮುಖ ಮಾಡಿರುವ ಶಿಲ್ಪವಿದೆ. ಕೊರಳಲ್ಲಿ ಹಾರ, ಹಣೆಪಟ್ಟಿ ಇದೆ, ಕಾಲಿನಲ್ಲಿ ಕಡಗವಿದೆ, ಬೆನ್ನಿನ ಮೇಲೆ ಯಾವುದೇ ಅಲಂಕಾರ ಇಲ್ಲ. ಈ ದೇವಾಲಯದ ವಿಶೇಷ ಎಂದರೆ ನೆಲಮಟ್ಟದಿಂದ ಕೆಳಗಡೆ ಇದೆ.
೮. ಮಜ್ಜನ ಬಾವಿ
ಇದು ಊರಿನ ಪಶ್ಚಿಮ ಭಾಗದಲ್ಲಿದೆ. ಇದರ ಪಕ್ಕದಲ್ಲಿ ಹೊರಮಠ ಮಂಟಪವಿದೆ. ಇಲ್ಲಿ ಋಷಿಗಳು, ಯತಿಗಳು ಸ್ನಾನ ಮಾಡಿ ಮಂಟಪದಲ್ಲಿ ವಾಸ ಮಾಡುತ್ತಿದ್ದರೆಂದು ಊರಿನ ಹಿರಿಯರ ಅಭಿಪ್ರಾಯವಾಗಿದೆ.
೯. ಪೊಲೀಸ್ ಠಾಣೆ
ಇದು ಈಶ್ವರ ದೇವಾಲಯದ ಉತ್ತರ ಭಾಗದ ಕೋಟೆ ಗೊಡೆಗೆ ಹೊಂದಿಕೊಂಡಿದೆ. ಉತ್ತರದ ಕಡೆ ಬಾಗಿಲು ಇದೆ ಇದು ಕಲ್ಲಿನ ಕಂಬಗಳ ಮಂಟಪವಾಗಿದೆ. ಈಗ ಬಿದ್ದು ಹಾಳಾಗಿದ್ದು ೩ ಕಂಬಗಳು ಮೇಲೆ ಹಾಸು ಬಂಡೆಯಿರುವ ಸ್ಮಾರಕ ಈಗಲೂ ಇದೆ. ಇದು ಗಡಿ ಗ್ರಾಮವಾಗಿದ್ದರಿಂದ ಪೊಲೀಸ್ ಠಾಣೆ ಇತ್ತೆಂದು ದಾಖಲೆಗಳು ಹೇಳುತ್ತವೆ. ತಳುಕು ಹೋಬಳಿ ಬಿಟ್ಟರೆ ಇದು ಎರಡನೇ ಉಪಠಾಣೆಯಾಗಿದೆ. ಈಗ ಇದನ್ನು ಜಾಜೂರಿಗೆ ವರ್ಗಾಯಿಸಲಾಗಿದೆ.
೧೦. ಸೇದುವ ಬಾವಿ
ಇದು ಈಶ್ವರ ದೇವಾಲಯ ಹಾಗೂ ಪೊಲೀಸ್ ಠಾಣೆಯ ಉತ್ತರ ಭಾಗದಲ್ಲಿದೆ ಈ ಬಾವಿ ತುಂಬಾ ಆಳವಾಗಿದ್ದು, ಈ ಬಾವಿಗೆ ನಿಲ್ಲಿಸಿರುವ ಬಂಡೆಗಲ್ಲುಗಳ ಒಂದು ಬಂಡೆಯಲ್ಲಿ ಶಾಸನವಿದೆ. ಅದರಲ್ಲಿ ಶ್ರೀರಸ್ತು ಮಾತ್ರ. ಕಾಣುತ್ತದೆ ಕೆಳಕಡೆ ಅಕ್ಷರಗಳು ಸರಿಯಾಗಿ ಕಾಣುತ್ತಿಲ್ಲ.

[ನಾನು ಕ್ಷೇತ್ರಕಾರ್ಯಕ್ಕೆ ಹೋದಾಗ ನನಗೆ ಸಲಹೆ ಸೂಚನೆ ನೀಡಿದ ಡಾ|| ಎಸ್. ತಿಪ್ಪೇಸ್ವಾಮಿ, ಪಿ. ಪಾಲಣ್ಣ ಇಂಗ್ಲಿಷ್ ಉಪನ್ಯಾಸಕರು ಕ್ಷೇತ್ರಕಾರ್ಯಕ್ಕೆ ಸಹಕರಿಸಿದ ಪೂಜಾರಿ ಅಜ್ಜಪ್ಪ, ಮಲ್ಲಜ್ಜ, ವೀರಭದ್ರ ಗೌಡ, ವಿ. ಶೋಭ, ಮೇಘನ. ಪಿ. ಅವರನ್ನು ನಾನು ಈ ಸಂದರ್ಭದಲ್ಲಿ ನೆನೆಯುತ್ತೇನೆ.]

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಕರ್ನಾಟಕ ಕನ್ನಡ ವಿಷಯ ವಿಶ್ವಕೋಶ.
೨.         ಚಿತ್ರದುರ್ಗ ಜಿಲ್ಲಾ ದರ್ಶಿನಿ, ಟಿ. ಗಿರಿಜ.
೩.         ಕರ್ನಾಟಕದ ಪರಂಪರೆ, ಭಾಗ-೧, ಮೈಸೂರು ರಾಜ್ಯ ಸರ್ಕಾರ, ೧೯೭೦.
೪.         ಎಪಿಗ್ರಾಫಿಯ ಕರ್ನಾಟಕ, ಸಂಪುಟ-೧೧, ಚಿತ್ರದುರ್ಗ ಜಿಲ್ಲೆ (ರೈಸ್ ಆವೃತ್ತಿ).
೫.         ಕರ್ನಾಟಕದ ವೀರಗಲ್ಲುಗಳು, ಡಾ. ಆರ್. ಶೇಷಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೧೯೮೨, ೨೦೦೪.
೬.         ಇತಿಹಾಸ ದರ್ಶನ, ಸಂಪುಟ-೨೧, ೨೦೦೬, ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು.
೭.         ಕ್ಷೇತ್ರಾಧಾರಿತ ವರದಿ.
೮.         ಮೌಖಿಕ ಸಂದರ್ಶನದ ವರದಿ.




Monday, December 24, 2012

ಈಸೂರಲ್ಲಿ ಶಾತವಾಹನರ ಕಾಲದ ಇಟ್ಟಿಗೆಗಳು ಮತ್ತು ಪ್ರಾಚ್ಯಾವಶೇಷಗಳು


ಜಯದೇವಪ್ಪ ಜೈನಕೇರಿ
೮೭‘ಶಾಂತಲಾ ಕುವೆಂಪು ರಸ್ತೆಶಿವಮೊಗ್ಗ-೫೭೭೨೦೧.

ಸೂರಿನ ಗಜಪೃಷ್ಠಾಕಾರದ ದೇವಾಲಯ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ೧೦ ಕಿ.ಮೀ. ದಕ್ಷಿಣಕ್ಕೆ ಕುಮದ್ವತಿ ನದಿಯ ಬಲದಂಡೆಯ ಮೇಲಿರುವ ಗ್ರಾಮ ಐತಿಹಾಸಿಕ ಪ್ರಸಿದ್ಧ ‘ಈಸೂರು ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡ ನಾಡಿಗೆ ಹೆಮ್ಮೆ ಮತ್ತು ಪ್ರಸಿದ್ಧಿ ಪಡೆದ ಗ್ರಾಮ. ದೇಶದ ಸ್ವಾತಂತ್ರ್ಯಕ್ಕಾಗಿ ೫ ಜನ ದೇಶಭಕ್ತರು ನೇಣಿಗೇರಿದರು. ಮೂವರು ಸ್ತ್ರೀಯರೂ ಸೆರೆಮನೆವಾಸ ಅನುಭವಿಸಿದ ಇತಿಹಾಸ ಪ್ರಸಿದ್ಧ ಊರು ಈಸೂರು. ಐತಿಹಾಸಿಕವಾಗಿಯೂ ಈಸೂರು ಪ್ರಸಿದ್ಧವಾಗಿದ್ದು, ಈ ಮಾತಿಗೆ ಸಾಕ್ಷಿಯಾಗಿ ಗ್ರಾಮದಲ್ಲಿ ಶಾಸನ ಶಿಲ್ಪಗಳು, ವೀರಗಲ್ಲುಗಳು, ಮಹಾಸತಿ ಶಿಲ್ಪಗಳು ಮತ್ತು ಪ್ರಾಚೀನ ಸ್ಮಾರಕಗಳ ಪಳೆಯುಳಿಕೆಗಳು ಕಂಡುಬರುತ್ತಿವೆ. ಗ್ರಾಮದಲ್ಲಿರುವ ವೀರಭದ್ರ ದೇವಾಲಯ ಕಲ್ಯಾಣ ಚಾಳುಕ್ಯರ ಕಾಲದ ಅತ್ಯಂತ ಕಲಾತ್ಮಕ ೪ ಸ್ಥಂಭಗಳಿಂದ ಕೂಡಿದೆ. ಬಾಗಿಲುವಾಡ ಮತ್ತು ಭುವನೇಶ್ವರಿಯಲ್ಲಿ ನವಗ್ರಹ ಶಿಲ್ಪ ಕೆತ್ತನೆ ಸುಂದರವಾಗಿದೆ. ಈಗ ರೂಪಾಂತರಗೊಂಡಿರುವ ಈ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗದ ಪೀಠದ ಮೇಲೆ ವೀರಭದ್ರ ಮತ್ತು ಕಾಳೀ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ. ಗ್ರಾಮಸ್ಥರು ಕೆಲವು ಸ್ಮಾರಕಗಳನ್ನು ಸಂರಕ್ಷಿಸಿ ಪೂಜಿಸುತ್ತಿದ್ದಾರೆ. ಇನ್ನೂ ಹತ್ತಾರು ಶಾಸನಗಳು ಗ್ರಾಮದಲ್ಲಿದ್ದ ಕೋಟೆಯ ಸುತ್ತ ಅನಾಥವಾಗಿ ಬಿದ್ದಿವೆ. ಹೊಲಗಳಲ್ಲಿ ನದಿ ದಂಡೆಯಲ್ಲಿ ಸಹ ಶಾಸನಗಳಿವೆ. ಪ್ರಾಚೀನ ಮಡಕೆಗಳು ನದಿದಂಡೆಯ ಹೊಲಗಳಲ್ಲಿ ದೊರಕಿವೆ. ಹಲವಾರು ಶಾಸನಗಳು ಈಗಾಗಲೇ ಬಿ.ಎಲ್. ರೈಸ್ ಅವರಿಂದ ಮತ್ತು ಇತರ ವಿದ್ವಾಂಸರಿಂದ ಬೆಳಕಿಗೆ ಬಂದಿವೆ. ೧೨ನೇ ಶತಮಾನದ ಶರಣೆ ಆಯ್ದಕ್ಕಿ ಲಕ್ಕಮ್ಮನ ಸಮಾಧಿ ಎಂದು ಸ್ಥಳೀಯ ಜಯಪ್ಪನವರು ಹೇಳುವ ಸ್ಮಾರಕ ಈಗ ಹಾಳಾಗಿದ್ದು, ಶಿವಲಿಂಗ, ಬಸವಣ್ಣ ಮೂರ್ತಿಗಳು ಬಯಲಿನಲ್ಲಿ ಅನಾಥವಾಗಿ ಬಿದ್ದಿವೆ.
‘ಈಸವೂರು (ಈಸೂರು) ಎಂಬ ಉಲ್ಲೇಖವಿರುವ ನಾಣ್ಯವನ್ನು ಶ್ರೀ ನಿತ್ಯಾನಂದ ಪೈ ಗುರುತಿಸಿದ್ದಾರೆ. ಗ್ರಾಮದಲ್ಲಿರುವ ರಾಮೇಶ್ವರ ದೇವಾಲಯದ ಅಧಿಷ್ಠಾನ ಗಜಪೃಷ್ಠಾಕೃತಿಯಲ್ಲಿದ್ದು ಹೊಯ್ಸಳ ವಾಸ್ತುಶೈಲಿಯಲ್ಲಿದೆ. ಮೇಲಿನ ದೇವಾಲಯ ಪೂರ್ಣ ನಾಶವಾಗಿದೆ. ಸುಮಾರು ೮-೯ನೇ ಶತಮಾನದ ಶಿವಲಿಂಗದ ಪೀಠವಿದೆ. ಗಣಪತಿ, ಶಿವ, ವಿಷ್ಣು, ಅನಂತಶಯನ ವಿಗ್ರಹಗಳು ಭಗ್ನಗೊಂಡಿವೆ. ಇನ್ನೂ ಹಲವಾರು ದೇವಾಲಯದ ಭಾಗಗಳು ಅಲ್ಲಲ್ಲಿ ಅನಾಥವಾಗಿವೆ. ಇತ್ತೀಚೆಗೆ ಗ್ರಾಮಸ್ಥರು ಈ ಅಧಿಷ್ಠಾನದ ಮೇಲೆ ದೇವಾಲಯ ನಿರ್ಮಿಸಲು ಗುಂಡಿ ತೆಗೆಯುವಾಗ ದೊಡ್ಡ ಅಳತೆಯ ೨೨ x ೧೧ x/ ದಪ್ಪದ ಸುಟ್ಟ ಇಟ್ಟಿಗೆ ಅಧಿಷ್ಠಾನ ದೊರಕಿರುವುದು ಬೆಳಕಿಗೆ ಬಂದಿದೆ. ಈ ಇಟ್ಟಿಗೆಗಳು ಶಾತವಾಹನ ಕಾಲಕ್ಕೆ ಅಂದರೆ ಕ್ರಿ.ಶ.೨ನೇ ಶತಮಾನಕ್ಕೆ ಸೇರಿವೆ. ಇದೇ ಮಾದರಿಯ ಇಟ್ಟಿಗೆ ಕಟ್ಟಡಗಳು ಬಳ್ಳಿಗಾವಿ, ತಾಳಗುಂದ, ಹರಿಷಿ, ಬನವಾಸಿ ಮುಂತಾದ ಕಡೆ ದೊರೆತಿವೆ.
ಇತ್ತೀಚೆಗೆ ಸ್ಥಳೀಯರು ಈ ದೇವಾಲಯಕ್ಕೆ ಜೀರ್ಣೋದ್ಧಾರ ಮಾಡಬೇಕೆಂದು ಒಂದು ನಕಾಶೆಯನ್ನು ತಯಾರಿಸಿ ಅದರ ಪ್ರಕಾರ ಕಾರ್ಯವನ್ನು ಆರಂಭಿಸಿದರು. ದೊಡ್ಡ ದೊಡ್ಡ ಕಾಂಕ್ರೀಟು ಕಂಬಗಳನ್ನು ಇಡಲು ಗುಂಡಿಗಳನ್ನು ತೋಡಿದಾಗ ಈ ಶಿಲಾ ದೇವಾಲಯದ ಸುಮಾರು ಒಂದು ಮೀಟರ್ ಕೆಳಗೆ ಇಟ್ಟಿಗೆ ಕಟ್ಟಡವೊಂದು ಗೋಚರಿಸಿತು. ಕಂಭಗಳಿಗೋಸ್ಕರ ತೆಗೆದ ಗುಂಡಿಗಳಲೆಲ್ಲ ಇಟ್ಟಿಗೆ ಗೋಡೆ ಕಾಣಿಸಿತು. ಈ ರೀತಿ ಕಾಣಿಸಿಕೊಂಡ ಇಟ್ಟಿಗೆ ಗೋಡೆ ಬಗ್ಗೆ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಸಣ್ಣ ವರದಿ ಪ್ರಕಟವಾಯಿತು. ಇದನ್ನು ಗಮನಿಸಿ ದಿನಾಂಕ ೧೪-೦೮-೨೦೧೧ರಂದು ಡಾ. ಅ. ಸುಂದರ, ಪ್ರಾಧ್ಯಾಪಕರು (ನಿವೃತ್ತ) ಮತ್ತು ಪುರಾತತ್ತ್ವಜ್ಞ, ಶ್ರೀ ಜಯದೇವಪ್ಪ ಜೈನಕೇರಿ, ಶಿವಮೊಗ್ಗ ಸೇರಿ ಈ ಸ್ಥಳ ಪರಿಶೀಲಿಸಿದರು. ಈ ಪರಿಶೀಲನೆಯಲ್ಲಿ ಆ ಇಟ್ಟಿಗೆ ಕಟ್ಟಡವು ಒಂದು ದೊಡ್ಡ ಗಜಪೃಷ್ಠಾಕಾರದ ದೇವಾಲಯವಾಗಿ ಕಾಣಿಸುತ್ತದೆ ಇದರಿಂದ ಸುಮಾರು ಒಂದು ಮೀಟರ್ ಮೇಲೆ ಇದ್ದ ರಾಮೇಶ್ವರ ದೇವಾಲಯ ಗಜಪೃಷ್ಠಾಕಾರದಲ್ಲಿದೆ. ಈ ದೇವಾಲಯ ಹೊಯ್ಸಳ ಕಾಲದ್ದಾಗಿದ್ದು ತುಂಬಾ ದುಸ್ಥಿತಿಯಲ್ಲಿದೆ. ಕೇವಲ ಇದರ ಅಧಿಷ್ಠಾನದ ಕೆಲವು ಭಾಗಗಳು ಅಲ್ಲಲ್ಲಿ ಇದೆ.
ಈ ಇಟ್ಟಿಗೆ ಕಟ್ಟಡವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಟ್ಟಿಗೆಗಳ ಅಳತೆ ಮತ್ತು ಮಾಡಿದ ತಂತ್ರವನ್ನು ನೋಡಿದಾಗ ಈ ಕಟ್ಟಡವು ಶಾತವಾಹನರ ಕಾಲದ್ದು ಎಂದು ಖಚಿತವಾಯಿತು. ಈ ದೇವಾಲಯ ಕಾಲಕ್ರಮೇಣ ದುಸ್ಥಿತಿಗೆ ಬಂದಿದೆ. ಅದೇ ವಿನ್ಯಾಸದಲ್ಲಿ ಹೊಯ್ಸಳರ ಕಾಲದಲ್ಲಿ ಶಿಲಾ ದೇವಾಲಯವನ್ನು ನಿರ್ಮಿಸಲಾಗಿದೆ. ಅಂದರೆ ಈಗಿರುವ ರಾಮೇಶ್ವರ ದೇವಾಲಯ ಸುಮಾರು ಮೂಲದಲ್ಲಿ ೨೦೦೦ ವರ್ಷ ಪ್ರಾಚೀನ ದೇವಾಲಯ, ಜೀರ್ಣೋದ್ಧಾರ ಹೊಂದುತ್ತಾ ಇವತ್ತಿಗೂ ಉಳಿದುಕೊಂಡಿರುವುದು ಇತಿಹಾಸದ ಮಹತ್ವದ ಸಂಗತಿ. ಈ ಸ್ಥಳವು ಹೊಯ್ಸಳ ದೊರೆ ವಿಷ್ಣುವರ್ಧನ ಪಟ್ಟದ ರಾಣಿ ಶಾಂತಲೆಯ ಹುಟ್ಟೂರು ಆಗಿದ್ದಂತೆ ತೋರುತ್ತದೆ. ಇಲ್ಲಿಯ ಸನಿಹದ ಬಳ್ಳಿಗಾವೆಯಲ್ಲಿ ಆಕೆಯ ವಿದ್ಯಾಭ್ಯಾಸ ಆಗಿದೆ. ಆಕೆಯು ತನ್ನ ಹುಟ್ಟೂರಿನ ಹೆಸರನ್ನೊಳಗೊಂಡ ‘ಈಸಪುರ ನಾಣ್ಯವನ್ನು ಹೊರಡಿಸಿದ್ದಾಳೆ. ಅಲ್ಲದೇ ಬಾದಾಮಿ ಚಾಲುಕ್ಯರ ಕಾಲದ ಶಾಸನವೊಂದರ ಶಾಪಾಶಯ ಭಾಗದಲ್ಲಿ ಸಾಗರ ತಾಲೂಕಿನ ಗೌಜ, ಶಿಕಾರಿಪುರ ತಾಲೂಕಿನ ಬಂದಳಿಕೆ ಮತ್ತು ಈಸವೂರು ಮತ್ತು ಪ್ರಾಯಶಃ ಬಾದಾಮಿಯನ್ನು ಹೆಸರಿಸಿದೆ. ಈ ವಿವರಗಳು ಈಸೂರಿಗೆ ಇರುವ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಕೊಡುತ್ತವೆ. ಅಲ್ಲದೆ ಐತಿಹಾಸಿಕವಾಗಿ ಮಹತ್ವ ಪಡೆದಿತ್ತೆಂದು ತೋರುತ್ತದೆ.
ಅಷ್ಟೇ ಪ್ರಾಚೀನ ದೇವಾಲಯ ನಿರ್ಮಾಣದಲ್ಲಿ ಇದು ಒಂದು ವಿನ್ಯಾಸದ ಪ್ರಕಾರ ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಈ ವಿನ್ಯಾಸದಲ್ಲಿ ಬೌದ್ಧಗುಹಾಲಯಗಳು ರಚನೆಯಾಗುತ್ತಾ ಬಂದಿವೆ. ಅದರಂತೆ ಕೊನೆಯ ಪಕ್ಷ ಎರಡನೆಯ ಶತಮಾನದಲ್ಲಿ ಈ ಭಾಗದಲ್ಲಿ ಅಲ್ಲಲ್ಲಿ ಈ ವಿನ್ಯಾಸದ ದೇವಾಲಯಗಳು ಉತ್ಖನನದಲ್ಲಿ ಕಂಡುಬಂದಿವೆ. ಉದಾಹರಣೆಗೆ ಮಥುರಾ, ನಾಗಾರ್ಜುನಕೊಂಡ, ಬನವಾಸಿ, ಇತ್ತೀಚೆಗೆ ರಾಜಘಟ್ಟ. ಎಂಟನೆಯ ಶತಮಾನದ ನಂತರ ಶಿಲಾ ದೇವಾಲಯಗಳಾಗಲೀ ಇಟ್ಟಿಗೆ ದೇವಾಲಯಗಳಾಗಲೀ ಈ ವಿನ್ಯಾಸದಲ್ಲಿ ಇರುವುದು ನಮಗೆ ತಿಳಿದ ಮಟ್ಟಿಗೆ ಕಂಡುಬಂದಿಲ್ಲ. ಆದರೆ ಇದಕ್ಕೆ ಕರಾವಳಿ ಪ್ರದೇಶ ಅಪವಾದವಾಗಿದೆ. ಗೋಕರ್ಣದಲ್ಲಿ ಪರಶುರಾಮೇಶ್ವರ ದೇವಾಲಯ, ಹಿರೇಗುತ್ತಿಯಲ್ಲಿ ಸುಮಾರು ೧೦-೧೧ನೆಯ ಶತಮಾನದ ಈ ವಿನ್ಯಾಸದ ದೇವಾಲಯಗಳಿವೆ. ಇಲ್ಲಿಂದ ಕೇರಳದ ತಿರುವನಂತಪುರದವರೆಗೆ ಬಹಳಷ್ಟು ಶಿಲಾ ದೇವಾಲಯಗಳು ಈ ವಿನ್ಯಾಸದಲ್ಲಿರುವುದು ಕುತೂಹಲಕಾರಿಯಾಗಿದೆ.
ಕರ್ನಾಟಕದಲ್ಲಿ ಬೃಹತ್ ಶಿಲಾಯುಗದ ಕಾಲದಿಂದಲೂ ಗಜಪೃಷ್ಠಾಕಾರದ ಕಟ್ಟಡಗಳು ನಿರ್ಮಾಣವಾಗುತ್ತಿರುವುದನ್ನು ಎಚ್.ಎಸ್. ಗೋಪಾಲರಾಯರು ಗುರುತಿಸಿದ್ದಾರೆ.  ದೇವಾಲಯಗಳ ಅಧಿಷ್ಠಾನದ ವಿನ್ಯಾಸವನ್ನು ಆಧರಿಸಿ ನಾಲ್ಕು ವಿಧಗಳು ಕಂಡುಬರುತ್ತವೆ. ಅವುಗಳನ್ನು ೧. ಚಚ್ಚೌಕ, ೨. ಆಯತ, ೩. ವೃತ್ತ ಮತ್ತು ೪. ಗಜಪೃಷ್ಠಗಳೆಂದು ಗುರುತಿಸಲಾಗಿದೆ. ಐಹೊಳೆಯಲ್ಲಿ ಕ್ರಿ.ಶ.೧೮೬೬ರಲ್ಲಿ ಬೆಳಕಿಗೆ ಬಂದ ದುರ್ಗಾ ದೇವಾಲಯದ ಹಿನ್ನೆಲೆಯಲ್ಲಿ ಕೆ.ಆರ್. ಶ್ರೀನಿವಾಸನ್ ಅವರು ಗಜಪೃಷ್ಠಾಕಾರದ ದೇವಾಲಯಗಳ ಮೂಲವನ್ನು ಚರ್ಚಿಸಿದ್ದಾರೆ. ಪಾಶ್ಚಾತ್ಯ ವಿದ್ವಾಂಸರು ಇದರ ಮೂಲವನ್ನು ಬೌದ್ಧರ ಚೈತ್ಯಗಳಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಬನವಾಸಿ ಸಮೀಪ ನಡೆದ ಉತ್ಖನನದಲ್ಲಿ ಗಜಪೃಷ್ಠಾಕಾರದ ಕಟ್ಟಡದ ಅವಶೇಷಗಳನ್ನು ಕೇಂದ್ರ ಪುರಾತತ್ವ ಇಲಾಖೆ ಪತ್ತೆ ಮಾಡಿದೆ. ಚಿತ್ರದುರ್ಗ ಸಮೀಪ ಚಂದ್ರವಳ್ಳಿಯ ಉತ್ಖನನದಲ್ಲಿಯೂ ಗಜಪೃಷ್ಠಾಕಾರದ ಅವಶೇಷಗಳು ಪತ್ತೆಯಾಗಿವೆ. ಇವುಗಳು ಸಹ ಬೌದ್ಧ ಅಥವಾ ಶಿವ ದೇವಾಲಯಗಳಾಗಿರಬಹುದೆಂದು ಊಹಿಸಲಾಗಿದೆ. ಬೆಳಗಾವಿ ಸಮೀಪದ ವಡಗಾವ್ ಮಾಧವಪುರದಲ್ಲಿ ಸಹ ಇಂತಹುದೇ ನಿವೇಶನ ಪತ್ತೆಯಾಗಿದೆ. ಬೃಹತ್ ಶಿಲಾಯುಗದ ಕೆಲವು ಸಮಾಧಿಗಳು ಚೈತ್ಯವನ್ನು ಹೋಲುತ್ತವೆ. ಬನವಾಸಿ ಸಮೀಪ ಗುಡ್ನಾಪುರದಲ್ಲಿ ಮತ್ತು ರಾಜಘಟ್ಟದಲ್ಲಿ ನಡೆದ ಉತ್ಖನನದಲ್ಲಿ ಶಾತವಾಹನರ ಕಾಲದ ಚೈತ್ಯಾಲಯವೊಂದು ಬೆಳಕಿಗೆ ಬಂದಿವೆ. ಸುಟ್ಟ ಇಟ್ಟಿಗೆಗಳಿಂದ ಕ್ರಿ.ಶ. ಸು.೪ರಿಂದ ೬ನೇ ಶತಮಾನದಲ್ಲಿ ಶಾತವಾಹನರ, ಕದಂಬರ ಮತ್ತು ದಕ್ಷಿಣದಲ್ಲಿ ಗಂಗರ ಆಳ್ವಿಕೆಯಿದ್ದ ಸಂದರ್ಭದಲ್ಲಿ ಬನವಾಸಿ ಮತ್ತು ರಾಜಘಟ್ಟಗಳಲ್ಲಿ ಗಜಪೃಷ್ಠಾಕಾರದ ಚೈತ್ಯಾಲಯಗಳು ನಿರ್ಮಾಣವಾಗಿವೆ.
ಐಹೊಳೆಯ ದುರ್ಗಾ ದೇವಾಲಯ ಅತ್ಯಂತ ಪ್ರಾಚೀನ ಸಂರಕ್ಷಿತ ದೇವಾಲಯವಾಗಿ ಇಂದಿಗೂ ಮಾದರಿಯಾಗಿದೆ. ಸಮೀಪದ ಮಹಾಕೂಟದಲ್ಲಿಯೂ ಕ್ರಿ.ಶ.೫ನೇ ಶತಮಾನಕ್ಕೆ ಸೇರಿದ ಗಜಪೃಷ್ಠಾಕಾರದ ಗರ್ಭಗೃಹವಿರುವ ಶಿವ ದೇವಾಲಯವಿದೆ. ಪಶ್ಚಿಮ ಕರಾವಳಿ ಭಾಗದಲ್ಲಿ ಸುಮಾರು ೭ ರಿಂದ ೧೧ನೇ ಶತಮಾನದವರೆಗೆ ನಿರ್ಮಾಣವಾಗಿರುವ ಸುಮಾರು ೨೦ ಗಜಪೃಷ್ಠಾಕಾರದ ದೇವಾಲಯಗಳನ್ನು ಪಿ. ಗುರುರಾಜ ಭಟ್ಟರು ಗುರುತಿಸಿದ್ದಾರೆ ಉಡುಪಿ ಶ್ರೀಕೃಷ್ಣ ಮಠದ ಸಮೀಪ ಇರುವ ಅನಂತೇಶ್ವರ ದೇವಾಲಯ ಗಜಪೃಷ್ಠಾಕಾರದ ದೇವಾಲಯದ ಉತ್ತಮ ಮಾದರಿಯಾಗಿದೆ. ಬಹುತೇಕ ಎಲ್ಲ ಗಜಪೃಷ್ಠಾಕಾರದ ಗರ್ಭಗೃಹಗಳಿರುವ ದೇವಾಲಯಗಳೂ ಶಿವ-ಶಕ್ತಿಯರ ದೇವಾಲಯಗಳೇ ಆಗಿರುವುದು ವಿಶೇಷ. ೧೧ನೇ ಶತಮಾನದ ನಂತರ ಹೊಯ್ಸಳ ವಾಸ್ತು ವಿನ್ಯಾಸಕಾರರು ಪ್ರಯೋಗಗಳ ಮೂಲಕ ಗಜಪೃಷ್ಠಾಕಾರದ ಗರ್ಭಗೃಹ ವಿನ್ಯಾಸವು ನಕ್ಷತ್ರಕಾರಕ್ಕೆ ತಿರುಗಿರುವ ಸಾಧ್ಯತೆಗಳನ್ನು ಡಾ. ಎಚ್.ಎಸ್. ಗೋಪಾಲರಾವ್ ಗುರುತಿಸಿದ್ದಾರೆ.

ಆಧಾರಸೂಚಿ
೧.        ಗುಣಮಧುರ, (ಡಾ. ದೇವರಕೊಂಡಾರೆಡ್ಡಿ ಅಭಿನಂದನ ಗ್ರಂಥ), ಸಂ. ಡಾ. ಪಿ.ವಿ. ಕೃಷ್ಣಮೂರ್ತಿ ಮತ್ತು ಇತರರು, ಬೆಂಗಳೂರು, ೨೦೧೦.

೮೭, ‘ಶಾಂತಲಾ ಕುವೆಂಪು ರಸ್ತೆ, ಶಿವಮೊಗ್ಗ-೫೭೭೨೦೧.


Friday, December 21, 2012

ಬದನಗುಪ್ಪೆ ಪರಿಸರದ ಪ್ರಾಚ್ಯಾವಶೇಷಗಳ ಶೋಧನೆ



ಡಾ. ಬಿ. ಬಸವರಾಜು ತಗರಪು
೩೧೩ತಗರಪುರತಿಲಕವಾಡಿ ಅಂಚೆ
ಕೊಳ್ಳೇಗಾಲ ತಾಲ್ಲೂಕುಚಾಮರಾಜನಗರ ಜಿಲ್ಲೆ-೫೭೧೪೪೦.
ದನಗುಪ್ಪೆಯು ಚಾಮರಾಜನಗರದ ಪಶ್ಚಿಮ ದಿಕ್ಕಿಗೆ ಸುಮಾರು ೧೦ ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದಲ್ಲಿ ಇಲ್ಲಿಯ ತನಕ ಎಲ್ಲಿಯೂ ಪ್ರಕಟಗೊಳ್ಳದ ಪ್ರಾಚ್ಯಾವಶೇಷಗಳು ಕಂಡುಬರುತ್ತವೆ. ಅವುಗಳು ಈ ಕೆಳಕಂಡಂತೆ ಕಂಡುಬರುತ್ತವೆ.
೧)       ಬೃಹತ್ ಶಿಲಾಸಮಾಧಿಯ ಮಾದರಿಯ ಗುಡಿ.
೨)       ಬೃಹತ್ ಶಿಲಾಸಮಾಧಿಯ ಗುಡಿ ಒಳಗೆ ರಾವಳೇಶ್ವರ ಶಿಲ್ಪ.
೩)       ಬೃಹತ್ ಶಿಲಾಸಮಾಧಿಗೆ ಬಳಸಿರುವ ಚಪ್ಪಡಿಗಳು.
೪)       ಕಾಳೇಶ್ವರ ದೇವಾಲಯದಲ್ಲಿ ರಾವಳೇಶ್ವರ ಶಿಲ್ಪ.
೫)       ಊರಿನ ಹೊರ ಭಾಗದಲ್ಲಿ ಸಂಪೂರ್ಣವಾಗಿ ದುಃಸ್ಥಿತಿ ಹೊಂದಿರುವ ಶಿವ ದೇವಾಲಯ.
೬)       ಕೆಲವು ವೀರಗಲ್ಲುಗಳು.
೧. ಬೃಹತ್ ಶಿಲಾ ಸಮಾಧಿ
ಭಾರತದಲ್ಲಿ ಆದಿ ಹಳೆಯ ಶಿಲಾಯುಗ ಸಂಸ್ಕೃತಿಯ ಅವಶೇಷಗಳು ೧೮೬೩ರ ಸಂದರ್ಭದಲ್ಲಿಯೇ ಬೆಳಕಿಗೆ ಬಂದಿದೆ. ಆದಿ ಹಳೆಯ ಶಿಲಾಯುಗ ಸಂಸ್ಕೃತಿಯ ನೆಲೆಗಳು ರಾಜ್ಯದ ಕಂಡುಬಂದಿದ್ದರೂ ಈ ನೆಲೆಯಲ್ಲಿ ಯಾರೂ ಗುರುತಿಸಿರಲಿಲ್ಲ.
ಬದನಗುಪ್ಪೆ ಗ್ರಾಮದಲ್ಲಿ ದೊರೆತಿರುವ ಬೃಹತ್ ಶಿಲಾಸಮಾಧಿಯ ಕುರುಹುಗಳಿಂದ ಈ ಸ್ಥಳದ ಸಂಸ್ಕೃತಿಯನ್ನು ಕ್ರಿ.ಪೂರ್ವದ ಕಾಲಕ್ಕೆ ಕೊಂಡೊಯ್ಯಬಹುದಾಗಿದೆ. ಈ ಭಾಗದಲ್ಲಿ ಶಿಲಾಯುಗ ಸಂಸ್ಕೃತಿ ಇರಲು ಕಾರಣವೇನೆಂದರೆ ಈ ಗ್ರಾಮವು ವ್ಯವಸಾಯಕ್ಕೆ ಯೋಗ್ಯ ಪ್ರದೇಶವಾಗಿದ್ದು, ಅಲ್ಲದೆ ಶಿಲಾಗೋರಿ ನಿರ್ಮಿಸಲು ಯೋಗ್ಯ ಭೂಮಿಯೆಂದು ಈ ಸ್ಥಳದಲ್ಲಿ ಬೃಹತ್ ಶಿಲಾ ಸಮಾಧಿಯನ್ನು ಬಳಸಿರಬೇಕೆಂದು ಸೂಕ್ಷ್ಮವಾಗಿ ಹೇಳಬಹುದಾಗಿದೆ. ಈ ಸಮಾಧಿಗೆ ಬಳಸಿರುವ ಚಪ್ಪಡಿಗಳು ಆಯಾತಕಾರವಾಗಿವೆ. ಚಪ್ಪಡಿಗಳು ಸುಮಾರು ೧೦ ಅಡಿ ಉದ್ದ ೫ ಅಡಿ ಎತ್ತರವನ್ನು ಹೊಂದಿರುತ್ತದೆ. ಹೀಗೆ ನೋಡಿದರೆ ಒಂದು ಕಡೆ ಚಪ್ಪಡಿಯನ್ನು ಮುಚ್ಚಿಲ್ಲ. ಉಳಿದ ಎಲ್ಲಾ ಕಡೆ ಚಪ್ಪಡಿಗಳಿದ್ದು, ಮೇಲೆ ಬಲವಾದ ಚಪ್ಪಡಿಯನ್ನು ಮುಚ್ಚಲಾಗಿದೆ.
೨. ಬೃಹತ್ ಶಿಲಾ ಸಮಾಧಿಯ ಗುಡಿಯ ಒಳಗೆ ರಾವಳೇಶ್ವರ ಶಿಲ್ಪ
ಸಮಾಧಿ ಒಳಗೆ ಒಂದು ರಾವಳೇಶ್ವರನ ಶಿಲ್ಪವನ್ನು ಇಡಲಾಗಿದ್ದು, ಈಗ ಇದನ್ನು ದೇವರ ಗುಡಿಯೆಂದು ಕರೆಯುವ ವಾಡಿಕೆ ಇದೆ. ಪ್ರಾಯಶಃ ಈ ಭಾಗದಲ್ಲಿ ರಾವಳೇಶ್ವರ ಶಿಲ್ಪಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಈ ಶಿಲ್ಪಗಳು ಕಂಡುಬರುವ ಎಲ್ಲಾ ಊರಿನಲ್ಲಿ ಶಿಲ್ಪವನ್ನು ರಾಜ ಎಂದು ಗುರುತಿಸಿ ಪ್ರತ್ಯೇಕ ದೇವತಾ ಎಂದು ಕರೆಯುತ್ತಾರೆ.
ರಾವಳೇಶ್ವರ ಶಿಲ್ಪವು ಎರಡೂವರೆ ಅಡಿ ಎತ್ತರ, ಒಂದೂವರೆ ಅಡಿ ಅಗಲ ಇದೆ. ರಾವಳೇಶ್ವರನಿಗೆ ಒಂದು ತಲೆ ಇದ್ದು ನಾಲ್ಕು ಕೈಗಳು ಇರುವುದರಿಂದ ಸಾಮಾನ್ಯವಾಗಿ ದೇವರು ಎಂಬುದಾಗಿ ಕರೆಯುವ ವಾಡಿಕೆ ಇದೆ. ಇದರಲ್ಲೂ ಉಬ್ಬುಶಿಲ್ಪ ರಚನೆ ಇದೆ. ರಾವಳೇಶ್ವರನ ಬಲಗೈಯಲ್ಲಿ ಚಕ್ರ, ಮೇಲಿನ ಎಡಗೈಯಲ್ಲಿ ಬಿಲ್ಲು, ಕೆಳಗಿನ ಎಡ ಕೈಯಲ್ಲಿ ಶಾಂತಮುದ್ರೆಯಿಂದ ಕೂಡಿದ ಗದೆ ಇದೆ. ಮತ್ತೊಂದು ಕೈಯಲ್ಲಿ ವೀರ (ರಾಜ) ಗಾಂಭೀರ‍್ಯದಿಂದ ಇಳಿಬಿಟ್ಟ ಖಡ್ಗ, ಕೈಸೊಂಟದ ಮೇಲ್ಭಾಗದಲ್ಲಿದೆ. ವೇಷಭೂಷಣಗಳನ್ನು ರಾಜನಂತೆಯೇ ಇದೆ. ಕಾಲುಗಳಲ್ಲಿ ಪಾದುಕೆ ಧರಿಸಿರುವುದು ಕಂಡುಬರುತ್ತದೆ. ಪೀಠದಲ್ಲಿ ಹೋರಾಟದ ಟಗರುಗಳು ಇವೆ. ಈ ರೀತಿಯ ಶಿಲ್ಪಗಳನ್ನು ಸೂಕ್ಷ್ಮವಾಗಿ ಅಭ್ಯಾಸಿಸಿದರೆ ಶಿಲ್ಪ ಬೇರೆ ಬೇರೆ ಸಂದರ್ಭಕ್ಕೆ ಕಥೆಯನ್ನು ಹೇಳಬಹುದು. ಕೆಲವು ವಿದ್ವಾಂಸರು ಈ ರೀತಿಯ ಶಿಲ್ಪಗಳನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿರುತ್ತಾರೆ.
ಖ್ಯಾತ ಸಂಶೋಧಕರಾದ ಡಾ. ಸೂರ್ಯನಾಥ ಕಾಮತ್‌ರವರು ಈ ಪ್ರಬಂಧವನ್ನು ಮಂಡಿಸುವ ಸಂದರ್ಭದಲ್ಲಿ ಇದು ಸಮಾಧಿಯಲ್ಲ ಎಂದು ತಿಳಿಸಿರುತ್ತಾರೆ. ಆದರೆ ಇಂತಹ ಸಮಾಧಿಯನ್ನು ತೆಗೆದು ನೋಡಿದಾಗ ಭೂಮಿಯಲ್ಲಿ ತಲೆ ಬುರುಡೆ, ಕೈಕಾಲು, ಮೂಳೆಗಳು ಕಂಡುಬಂದಿರುವುದುಂಟು. ಉದಾಹರಣೆಗೆ ಕೊಳ್ಳೇಗಾಲ ತಾಲ್ಲೂಕು ತಗರಪುರ ಗ್ರಾಮದಲ್ಲಿ ಲಿಂಗಾಯಿತ ಬೀದಿಯ ಬಸವಣ್ಣ ಗುಡಿಯ ಪಕ್ಕದಲ್ಲಿ ಭೂಮಿಯನ್ನು ಅಗೆಯುವಾಗ ಮಾನವನಿಗೆ ಸೇರಿದ ತಲೆ ಬುರುಡೆಗಳು ದೊರೆತವು. ಈಗಲೂ ಸಹ ಅಲ್ಲಿ ಈ ರೀತಿಯ ಸಮಾಧಿಯಿದ್ದು, ಸಮಾಧಿಯ ಒಳಗೆ ಸುಮಾರು ವೀರಗಲ್ಲುಗಳನ್ನು ನಿಲ್ಲಿಸಿರುವುದನ್ನು ಕಾಣಬಹುದಾಗಿದೆ. ಈ ಎಲ್ಲಾ ಹಿನ್ನೆಲೆಯಿಂದ ಬದನಗುಪ್ಪೆಯ ಈ ಅವಶೇಷವನ್ನು ಸಮಾಧಿ ಎಂದು ಗುರುತಿಸಲಾಗಿದೆ.
೩. ಬೃಹತ್ ಶಿಲಾಸಮಾಧಿಗೆ ಬಳಸಿರುವ ಚಪ್ಪಡಿಗಳು
ಬದನಗುಪ್ಪೆ ಕೊಳದ ದಂಡೆಯಲ್ಲಿ ಬೃಹತ್ ಶಿಲಾಸಮಾಧಿಗೆ ಬಳಸಿರುವ ಚಪ್ಪಡಿಗಳು ಕಂಡುಬಂದಿವೆ. ಈಗಾಗಲೇ ಹಲವಾರು ಸಂಶೋಧಕರು ಬೃಹತ್ ಶಿಲಾಸಂಸ್ಕೃತಿಯ ಬಗ್ಗೆ ಸಂಶೋಧನೆ ನಡೆಸಿ ಬೃಹತ್ ಶಿಲಾಸಂಸ್ಕೃತಿಗೆ ಪೂರಕವಾದ ಸಮಾಧಿಗಳನ್ನು ಗುರುತಿಸಿದ್ದಾರೆ. ಅವರ ಒಂದು ಸಂಶೋಧನೆಯ ಆಧಾರದ ಮೇಲೆ ನೋಡುವುದಾದರೆ ಇಲ್ಲಿಯು ಸಹ ಅದೇ ಮಾದರಿಯ ಚಪ್ಪಡಿಗಳು ದೊರೆತಿರುವುದರಿಂದ, ಅಲ್ಲದೆ ಈಗಾಗಲೇ ಮೇಲೆ ಚರ್ಚಿಸಿರುವ ಆಧಾರದ ಮೇಲೆ ದೊರಕಿರುವ ಚಪ್ಪಡಿಗಳನ್ನು ಬೃಹತ್ ಶಿಲಾಸಮಾಧಿಗೆ ಬಳಸಿರುವ ಚಪ್ಪಡಿಗಳು ಎಂದು ಗುರುತಿಸಲಾಗಿದೆ. ಈ ಎಲ್ಲಾ ಆಧಾರಗಳಿಂದ ಬದನಗುಪ್ಪೆ ಗ್ರಾಮದ ಪರಿಸರದಲ್ಲಿ ಪ್ರಾಚೀನ ಕಾಲದಲ್ಲಿ ಬೃಹತ್ ಶಿಲಾಸಮಾಧಿಗಳು ನಿರ್ಮಿತಗೊಂಡಿದ್ದವು ಎಂಬುದು ಗೋಚರವಾಗುತ್ತದೆ.
೪. ಕಾಳೇಶ್ವರ ದೇವಾಲಯದಲ್ಲಿ ರಾವಳೇಶ್ವರ ಶಿಲ್ಪ
ಬದನಗುಪ್ಪೆಯ ಕೊಳದ ಪಕ್ಕದಲ್ಲಿ ಅಂದರೆ ಬೃಹತ್ ಶಿಲಾಸಮಾಧಿಯ ಪಕ್ಕದಲ್ಲಿ ಪೂರ್ವಾಭಿಮುಖವಾಗಿ ಕಾಳೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಇದು ಪ್ರಾಚೀನ ದೇವಾಲಯವಾಗಿದ್ದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಪುನರ್ ನಿರ್ಮಾಣಗೊಂಡಿದೆ. ಈ ದೇವಾಲಯವನ್ನು ಈಗ ಕಾಳೇಶ್ವರ ದೇವಾಲಯ ಎಂದು ಕರೆಯಲಾಗುತ್ತದೆ.
ರಾವಳೇಶ್ವರನನ್ನು ರಾವಳೇಶ್ವರ, ರಾವಣೇಶ್ವರ, ಕಾಳರಾಯ, ಕಂದಗಾರಪ್ಪ, ಬೆಂದಗಾಳರಾಯ, ಕಾಮರಾಯ, ರಾವಳಪ್ಪ, ಹೊನ್ನಸಿದ್ಧೇಶ್ವರ, ಮಹಾಲಿಂಗೇಶ್ವರ, ಬ್ರಹ್ಮೇಶ್ವರ, ವೀರಪ್ಪ, ವೈದ್ಯನಾಥೇಶ್ವರ, ಕಥಗಾರಯ್ಯ, ಕಾಳಮಂಟರಾಯ, ಕರ್ಪಸ್ವಾಮಿ ಇನ್ನೂ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಈ ದೇವಾಲಯದ ಒಳಗೆ ಇರುವ ಶಿಲ್ಪ ಅಲ್ಲದೆ ಬೃಹತ್ ಶಿಲಾಸಮಾಧಿ ಒಳಗೆ ಇರುವ ಶಿಲ್ಪವೂ ಒಂದೇ ರೀತಿ ಇರುವುದರಿಂದ ಈ ಶಿಲ್ಪದ ಬಗ್ಗೆ ವಿವರಣೆಯನ್ನು ನೀಡಲಾಗಿಲ್ಲ.
ಈ ದೇವಾಲಯವು ೧೫ x ೧೫ ಅಡಿ ಚದರ ಸುತ್ತಳತೆಯಿಂದ ನಿರ್ಮಿತವಾಗಿದ್ದು, ಶುದ್ಧ ದ್ರಾವಿಡ ಶೈಲಿಯನ್ನು ಹೊಂದಿದ್ದು, ದೇವಾಲಯದ ವಿಮಾನದ ಸುತ್ತಲೂ ವಿವಿಧ ರೀತಿಯ ಶೈವ ಪರಂಪರೆಯ ಗಾರೆ ಶಿಲ್ಪಗಳನ್ನು ಕಡೆಯಲಾಗಿದೆ. ಪ್ರಾಯಶಃ ಇದು ಸಹ ಅಂದು ಸಮಾಧಿಯಾಗಿರಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ದೇವಾಲಯವನ್ನು ಮಾಡಿರಬಹುದೆಂದು ಹೇಳಬಹುದು. ಏಕೆಂದರೆ ಈ ಊರಿನ ಹೊರಭಾಗದ ಕೊಳದ ದಂಡೆಯಲ್ಲಿ ಬೃಹತ್ ಶಿಲಾ ಗೋರಿಗೆ ಸಂಬಂಧಿಸಿದಂತೆ ಚಪ್ಪಡಿಗಳು ದೊರಕುವುದರಿಂದ ಇದು ಸಹ ಬೃಹತ್ ಶಿಲಾ ಸಮಾಧಿಯಾಗಿರಬಹುದೆಂದು ಹೇಳಬಯಸುತ್ತೇನೆ.
೫. ಊರಿನ ಹೊಸ ಭಾಗದಲ್ಲಿ ಸಂಪೂರ್ಣವಾಗಿ ದುಸ್ಥಿತಿ ಹೊಂದಿರುವ ಶಿವ ದೇವಾಲಯ
ಶಿವದೇವಾಲಯವು ಬದನಗುಪ್ಪೆಯ ಪಶ್ಚಿಮ ದಿಕ್ಕಿಗೆ ಹಾಗೂ ಪಣ್ಯದಹುಂಡಿಯ ದಿಕ್ಕಿಗೆ ಊರಿನ ಹೊರಭಾಗದ ರೈಲ್ವೆ ಹಳಿಯ ಪಕ್ಕದಲ್ಲಿ ಕಂಡುಬರುತ್ತದೆ. ಈ ದೇವಾಲಯವು ಪೂರ್ವಾಭಿಮುಖವಾಗಿದ್ದು ಸಂಪೂರ್ಣವಾಗಿ ದುಸ್ಥಿತಿ ಹೊಂದಿದೆ. ಆದರೆ ಈ ದೇವಾಲಯ ಯಾವ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳುವುದಕ್ಕೆ ಯಾವುದೇ ಆಧಾರಗಳಿಲ್ಲ. ಆದರೂ ಸಹ ಈ ದೇವಾಲಯದ ಗರ್ಭಗೃಹದಲ್ಲಿ ಶಿವಲಿಂಗವಿರುವುದರಿಂದ ಇದೊಂದು ಶಿವದೇವಾಲಯವಾಗಿತ್ತೆಂದು ಮಾತ್ರ ಹೇಳಲು ಸಾಧ್ಯ.
೬. ಕೆಲವು ವೀರಗಲ್ಲು
ಬದನಗುಪ್ಪೆಯ ಪಶ್ಚಿಮ ದಿಕ್ಕಿಗೆ ಮತ್ತು ಪಣ್ಯದ ಹುಂಡಿಯ ಪೂರ್ವ ದಿಕ್ಕಿಗೆ ಇರುವ ಒಂದು ಹೊಲದಲ್ಲಿ ವೀರಗಲ್ಲುಗಳಿವೆ. ಹೊಲದಲ್ಲಿ ದೊರೆತಿರುವ ವೀರಗಲ್ಲನ್ನು ಗಮನಿಸಿದರೆ ಇದು ಮೂರು ಅಂತಸ್ತಿನಿಂದ ಕೂಡಿದ್ದು, ಕೆಳಭಾಗದ ಅಂತಸ್ತಿನಲ್ಲಿ ಇಬ್ಬರು ಯೋಧರು ವೀರಾವೇಶದಿಂದ ಹೋರಾಡುತ್ತಿರುವ ದೃಶ್ಯಾವಳಿಯನ್ನು ಮನೋಜ್ಞವಾಗಿ ಶಿಲ್ಪದಲ್ಲಿ ಕೆತ್ತಲಾಗಿದೆ. ಈ ಶಿಲ್ಪವನ್ನು ನೋಡಿದರೆ ರಾಜನೇ ಹೋರಾಟ ಮಾಡುತ್ತಿರುವ ದೃಶ್ಯ ಕಂಡುಬರುತ್ತದೆ. ಏಕೆಂದರೆ ರಾಜನ ವೇಷ-ಭೂಷಣಗಳನ್ನು ಹೊಂದಿರುವ ಒಬ್ಬ ರಾಜ ಸೊಂಟದಲ್ಲಿ ಖಡ್ಗವನ್ನು ಕಟ್ಟಿಕೊಂಡಿದ್ದು, ಮತ್ತೊಂದು ಕೈಯಲ್ಲಿ ಖಡ್ಗ ಗುರಾಣಿಯನ್ನು ಹಿಡಿದುಕೊಂಡಿರುವುದು ಕಂಡುಬರುತ್ತದೆ.
ಇದರ ಮೇಲಿನ ಹಂತದಲ್ಲಿ ಮೂರು ಜನ ವ್ಯಕ್ತಿಗಳ ಉಬ್ಬುಶಿಲ್ಪಗಳು, ಮಡಿದವರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ಕೆತ್ತಲಾಗಿವೆ. ಇದರ ಮೇಲಿನ ಭಾಗ ೩ನೇ ಅಂತಸ್ತಿನದಾಗಿದ್ದು, ಇಲ್ಲಿ ನಂದಿಯ ಶಿಲ್ಪವಿದ್ದು, ಭಕ್ತಿಪೂರ್ವಕವಾಗಿ ಕೈಮುಗಿಯುತ್ತಿರುವ ಶಿಲ್ಪ ಸುಂದರವಾಗಿ ಮೂಡಿಬಂದಿದೆ. ಈ ಮೇಲಿನ ಎಲ್ಲಾ ಆಧಾರಗಳಿಂದ ಮಾನವನ ಸಾಂಸ್ಕೃತಿಕ ಬೆಳವಣಿಗೆಯ ಚರಿತ್ರೆಯಲ್ಲಿ ಕಂಡುಬರುವ ಹಲವಾರು ಮಹತ್ವದ ಸಾಧನೆಗಳಲ್ಲಿ ಒಂದು ಎಂದು ಹೇಳಬಹುದು. ಅಲ್ಲದೆ ಪ್ರಾಗೈತಿಹಾಸಿಕ ಕಾಲದಲ್ಲಿ ಮಾನವನು ಜೀವನ ನಡೆಸುತ್ತಿರುವಾಗ ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಪ್ರಕೃತಿಯತ್ತ ವಿಶೇಷ ಗಮನಹರಿಸತೊಡಗಿದನು. ಜೀವಿಗಳ ಜನನ-ಮರಣಗಳು ಪ್ರಕೃತಿಯ ಅದ್ಭುತ ದೃಷ್ಟಿ ವಿಶೇಷ ಪರಿಣಾಮಕಾರಿ ಪ್ರಸಂಗಗಳು ಇವನ್ನೆಲ್ಲ ಹಲವು ಕಾಲಗಳ ಸತತ ಗಮನಿಸುವಿಕೆಯಿಂದ ಮಾನವನು ಕಂಡುಕೊಂಡನು. ಆತ ಪ್ರಕೃತಿಯು ತನಗಿಂತಲೂ ಅಧಿಕ ಶಕ್ತಿಯುಳ್ಳದ್ದೆಂದೂ ಅದರಲ್ಲಿಯೇ ಜನನ-ಜೀವನ-ಮರಣವೆಂದೂ ಅರಿತು ಅದನ್ನು ಗೌರವ ಮತ್ತು ಭಯ ಭಕ್ತಿಯಿಂದ ಕಾಣತೊಡಗಿದನು. ಈ ಹಿನ್ನೆಲೆಯಿಂದ ಅಂದು ಮಾನವನು ತನ್ನ ರಾಜನನ್ನು, ಯಜಮಾನರನ್ನು, ಪ್ರಮುಖರನ್ನು, ಯೋಧರನ್ನು, ಮರಣ ಹೊಂದಿದ ನಂತರ ಸುಂದರವಾದ ಕಲ್ಲಿನಿಂದ ನಿರ್ಮಿತಗೊಂಡ ಸಮಾಧಿಯನ್ನು ನಿರ್ಮಿಸಿ ಶವ ಸಂಸ್ಕಾರವನ್ನು ಮಾಡುತ್ತಿದ್ದರು. ಅದು ಬದನಗುಪ್ಪೆಯ ಪರಿಸರದಲ್ಲೂ ಕಂಡುಬಂದಿರುವುದನ್ನು ಪ್ರಸ್ತುತ ಈ ಪ್ರಬಂಧದಲ್ಲಿ ಪ್ರಸ್ತುತಪಡಿಸಲಾಗಿದೆ.

ಆಧಾರಸೂಚಿ
೧.         ಬಿ.ಎಲ್. ರೈಸ್., ಮೈಸೂರ್ ಅಂಡ್ ಕೂರ್ಗ್ ಫ್ರಂ ಇನ್ಸ್‌ಕ್ರಿಪ್‌ಷನ್ಸ್, 
೨.         ಮಲೆಯೂರು ಗುರುಸ್ವಾಮಿ, ಹೊನ್ನಹೊಳೆ, ಬಿ.ಎನ್. ನಾಗರತ್ನ., ಸಾಂಸ್ಕೃತಿಕ ರಾಜಧಾನಿ ತೆರಕಣಾಂಬಿ, ಚಾಮರಾಜನಗರ, ೨೦೦೭.
೩.         ಪಿ.ಬಿ. ದೇಸಾಯಿ ಮತ್ತು ಇತರರು., ಹಿಸ್ಟರಿ ಆಫ್ ಕರ್ನಾಟಕ, ಕನ್ನಡ ಸಂಶೋಧನ ಸಂಸ್ಥೆ, ಕರ್ನಾಟಕ ವಿ.ವಿ. ಧಾರವಾಡ, ೧೯೭೦.
೪.         ಎಚ್. ತಿಪ್ಪೇರುದ್ರಸ್ವಾಮಿ., ಕರ್ಣಾಟಕ ಸಂಸ್ಕೃತಿ ಸಮೀಕ್ಷೆ.
೫.         ಎಸ್. ಶ್ರೀಕಂಠಶಾಸ್ತ್ರಿ., ಪುರಾತತ್ತ್ವ ಶೋಧನೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೬೦, ೧೯೭೫.
೬.         ಕೆ.ಬಿ. ಶಿವತಾರಕ್., ಕರ್ನಾಟಕದ ಪುರಾತತ್ತ್ವ ನೆಲೆಗಳು, ಹಂಪಿ, ಕನ್ನಡ ವಿವಿ. ೨೦೧೧.

 ೩೧೩, ತಗರಪುರ, ತಿಲಕವಾಡಿ ಅಂಚೆ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ-೫೭೧೪೪೦.



Wednesday, December 19, 2012

ಕಮ್ಮಾರಗಟ್ಟೆಯ ಪರಿಸರದ ಪ್ರಾಚ್ಯಾವಶೇಷಗಳು



ಕೆ. ಸಿದ್ದಪ್ಪ
ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು
ದಾವಣಗೆರೆ ಜಿಲ್ಲೆ-೫೭೭೨೧೭.



ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಒಂದು ಐತಿಹಾಸಿಕ ನೆಲೆಯಾಗಿರುವ ಕಮ್ಮಾರಗಟ್ಟೆಯು ಹೊನ್ನಾಳಿಯಿಂದ ಬಸವಾಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿ ೭ ಕಿ.ಮೀ. ದೂರದಲ್ಲಿದೆ. ಕರ್ಮಹರ ಕ್ಷೇತ್ರವೆಂದು ಪ್ರಸಿದ್ದಿ ಪಡೆದಿರುವ ಕಮ್ಮಾರಗಟ್ಟೆಯು ತುಂಗಭದ್ರಾ ನದಿಯ ದಡದಲ್ಲಿದ್ದು, ಅನೇಕ ಪ್ರಾಚ್ಯಾವಶೇಷಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡು, ಒಂದು ಐತಿಹಾಸಿಕ ನೆಲೆಯೂ ಆಗಿದೆ.
ಹಿಂದೆ ಇಲ್ಲಿ ಬಹುಪಾಲು ಜನ ಕಮ್ಮಾರರು ವಾಸವಾಗಿದ್ದರೆಂದು, ಅವರು ಈ ನಾಡಿನ ಪಾಳೆಗಾರರಿಗೆ ಕತ್ತಿ, ಗುರಾಣಿ, ಭರ್ಜಿ, ಬಾಣ ಮುಂತಾದ ಯುದ್ದ ಸಾಮಗ್ರಿಗಳನ್ನು ತಯಾರಿಸಿ ಕೊಡುತ್ತಿದ್ದುದಾಗಿ ತಿಳಿಯುತ್ತದೆ. ಇದಕ್ಕೆ ಸಾಕ್ಷಿಯಾಗಿ ಪುರಾತನ ಕುಲುಮೆಯ ಅವಶೇಷಗಳನ್ನು ಕಾಣಬಹುದು. ಆದ್ದರಿಂದಲೇ ಕಮ್ಮಾರರ ಕೊಪ್ಪಲು, ಕಮ್ಮಾರಕಟ್ಟಿ, ಕಮ್ಮಾರಗಟ್ಟೆಯಾಗಿರುವುದಾಗಿ ಹೇಳಲಾಗುತ್ತಿದೆ.
ಈ ಗ್ರಾಮದ ಬಗ್ಗೆ ಅನೇಕ ದಂತಕಥೆಗಳಿರುತ್ತವೆ. ಒಂದು ಕಥೆ ಪ್ರಕಾರ - ಹಿಂದೆ ಪರುಶುರಾಮನು ತನ್ನ ತಾಯಿ ರೇಣುಕೆಯ ಶಿರ ಕಡಿದು ಭೂಮಂಡಲದ ಕ್ಷತ್ರಿಯರ ವಧೆಮಾಡಿ, ತನ್ನ ರಕ್ತಸಿಕ್ತವಾದ ಪರಶುವನ್ನು (ಕೊಡಲಿ) ಎಲ್ಲಿ ತೊಳೆದರೂ ಅದರ ರಕ್ತ ಕಲೆ ಹೋಗಿರಲಿಲ್ಲವಾದ್ದರಿಂದಾಗಿ ಅಲೆಯುತ್ತಾ ಬಂದ ಅವನು, ಇಲ್ಲಿನ ತುಂಗಭದ್ರಾ ನದಿಯಲ್ಲಿ ಆ ಕೊಡಲಿಯನ್ನು ತೊಳೆಯಲು ಅದಕ್ಕೆ ಹತ್ತಿದ್ದ ರಕ್ತ ಹೋಗಿ, ಆತನ ಕರ್ಮ ಹರಿದ ಕಾರಣ ಈ ಸ್ಥಳವು ಕರ್ಮಹರ ಕ್ಷೇತ್ರವೆಂದು ಹೆಸರಾಯಿತೆನ್ನುವುದು ಜನ-ಜನಿತವಾಗಿದೆ.
ಮತ್ತೊಂದು ಕಥಾನಕದಂತೆ ತ್ರೇತಾಯುಗದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆಯರು ಹನುಮಂತನೊಂದಿಗೆ ತಿರುಗಾಡುತ್ತಾ ಇಲ್ಲಿಗೆ ಬಂದು ಹಲವು ದಿನ ನೆಲೆಸುತ್ತಾರೆ. ಆ ಸಂದರ್ಭದಲ್ಲಿ ಅಡುಗೆಗೆ ಬೇಕಾದ ಹುಣಸೇಹಣ್ಣನ್ನು ತರಲು ಸೀತಾಮಾತೆಯು ಆಂಜನೇಯನಿಗೆ ಹೇಳಲು, ಹಣ್ಣುತರುವ ಬದಲು ಇಡೀ ಮರವನ್ನೇ ಕಿತ್ತು ತರುತ್ತಾನೆ. ಸೀತಾದೇವಿ ಬೈದು ತನಗೆ ಬೇಕಾಗುವಷ್ಟು ಹಣ್ಣನ್ನು ಕಿತ್ತುಕೊಂಡು ಮರವನ್ನು ಎಸೆಯಲು ಹೇಳುತ್ತಾಳೆ, ಅಲ್ಲಿಂದಲೇ ಹುಣಸೇ ಮರವನ್ನು ಎಸೆದ ಫಲವಾಗಿ ಅದು ಬುಡಮೇಲಾಗಿ ಬಿದ್ದು ಅದು ಹಾಗೇ ಚಿಗುರಿ ಫಲ ಕೊಡುತ್ತಿರುವ ಮರವನ್ನು ಮರವನ್ನು ಇಂದಿಗೂ ಕಾಣಬಹುದಾಗಿದೆ.
೧೭-೧೭ನೇ ಶತಮಾನದ ಮಧ್ಯಕಾಲದಲ್ಲಿದ್ದ ಶರಣೆ, ಅಪರೂಪದ ಮಹಿಳಾ ದಾಸಸಾಹಿತಿ ಹೆಳವನಕಟ್ಟೆ ಗಿರಿಯಮ್ಮ ಈ ಪವಿತ್ರ ಕರ್ಮಹರಿದ ಕ್ಷೇತ್ರದಲ್ಲಿ ಜೀವ ಸಮಾಧಿಯಾಗಲು ಇಚ್ಚಿಸಿ, ನಾಗರಪಂಚಮಿಯಂದು ತುಂಗಭದ್ರಾ ನದಿಯಲ್ಲಿ ದೇಹತ್ಯಾಗ ಮಾಡಿದಳು ಎಂಬುದೇ ಕುತೂಹಲಕಾರಿ ಸಂಗತಿ. ಆ ಸಮಯದಲ್ಲಿ ಗಿರಿಯಮ್ಮನ ದೈವನಾಗಿದ್ದ ಆಂಜನೇಯ ದರ್ಶನ ಕೊಟ್ಟದ್ದರ ಕುರುಹಾಗಿ, ಆಂಜನೇಯನು ಹುಣಸೇಮರವನ್ನು ಕಿತ್ತು ಬುಡಮೇಲು ಹಾಕಿದನೆಂದು ಹೇಳಲಾಗುತ್ತದೆ. ನದಿ ತಟದಲ್ಲಿ ಈಗಲೂ ಮೇಲಿನ ಫೋಟೊದಲ್ಲಿರುವಂತೆ ವಿಚಿತ್ರಕಾರದ ಹುಣಸೇಮರವಿರುವುದನ್ನು ಕಾಣಬಹುದಾಗಿದೆ.
ಹೀಗೆ ಜನಪದ ಮಾತು ಹಾಗೂ ಕತೆಗಳನುಸಾರ ಈ ಗ್ರಾಮವು ಪ್ರಾಚೀನತೆಯ ಸೊಗಡನ್ನು ಹೊಂದಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಪ್ರಾಚೀನ ಅವಶೇಷಗಳು ಇಲ್ಲಿ ಕಾಣಸಿಗುತ್ತವೆ. ಅವುಗಳನ್ನು ಸಂಕ್ಷೇಪವಾಗಿ ಅವಲೋಕಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಸಿದ್ದೇಶ್ವರ ದೇವಸ್ಥಾನ
ಕಮ್ಮಾರಗಟ್ಟೆಯ ದಕ್ಷಿಣ ದಿಕ್ಕಿಗೆ ತುಂಗಭದ್ರಾ ನದಿಯ ತಟದ ಸ್ವಲ್ಪ ದೂರದಲ್ಲಿ ಎತ್ತರವಾದ ದಿಣ್ಣೆಯೊಂದು ಇದ್ದು, ಅದು ಗಿಡಗಂಟಿಗಳು ಬೆಳೆದು ಮುಚ್ಚಿಹೋಗಿತ್ತು, ಅದರ ಅಡಿಯಲ್ಲಿ ದೇವಾಲಯವಿರುವುದು ತಿಳಿದಿರಲಿಲ್ಲ, ಇದು ನದಿಯ ಪ್ರವಾಹಕ್ಕೆ ಸಿಕ್ಕಿ ಮುಚ್ಚಿರಬೇಕು, ಅಥವಾ ಪರಕೀಯರ ದಾಳಿಯಿಂದ ರಕ್ಷಿಸಲು ಜನರೇ ಮಣ್ಣಿನಿಂದ ಮುಚ್ಚಿರಬಹುದು, ದಿನಗಳೆದಂತೆ ಮಳೆಯ ಸವೆತಕ್ಕೆ ದೇವಾಲಯದ ಮೇಲ್ಬಾಗ ಕಾಣಿಸಿಕೊಂಡಿತು. ದಿಬ್ಬದ ಅಡಿಯಲ್ಲಿ ದೇವಾಲಯ ಇರುವುದನ್ನು ತಿಳಿದ ಗ್ರಾಮಸ್ಥರು ೧೯೯೮-೧೯೯೯ರಲ್ಲಿ ದಿಬ್ಬದ ಮಣ್ಣನ್ನು ತೆರವುಗೊಳಿಸಲು ಆರಂಭಿಸಿದರು, ಆಶ್ಚರ್ಯವೆಂದರೆ ಆ ಉತ್ಖನನದ ಫಲವಾಗಿ ಈ ಸುಂದರ ದೇವಾಲಯ ಕಂಗೊಳಿಸಿತು.
ಕಲ್ಯಾಣ ಚಾಲುಕ್ಯ ಶೈಲಿಯನ್ನು ಹೋಲುವ ಈ ದೇವಸ್ಥಾನ ತುಂಬಾ ಸರಳ ರಚನೆಯಿಂದ ಕೂಡಿದೆ. ಗರ್ಭಗುಡಿ ಹಾಗೂ ಮುಖಮಂಟಪ ಹೊಂದಿದ್ದು ದೇವಾಲಯದ ನಿರ್ಮಾಣಕ್ಕೆ ಬಳಪದ ಕಲ್ಲನ್ನು ಬಳಸಿದ್ದಾರೆ. ಮುಖಮಂಟಪವು ೧೬ ಕಂಬಗಳಿಂದ ಕೂಡಿದ್ದು ೪ ಕಂಬಗಳು ಮಾತ್ರ ತಿರುಗಣೆ ಯಂತ್ರವನ್ನು ಬಳಸಿ ತಯಾರಿಸಲಾಗಿದೆ. ಉಳಿದ ಕಂಬಗಳನ್ನು ಗೋಡೆಗೆ ಹೊಂದಿಸಿ ಆಧಾರವಾಗಿ ನಿಲ್ಲಿಸಲಾಗಿದ್ದು, ಅವುಗಳೂ ಸಹ ಸುಂದರ ಕಲಾತ್ಮಕ ಕೆತ್ತನೆಯಿಂದ ಕೂಡಿದೆ. ಬೋದಿಗೆಗಳ ಮೇಲೆ ತೊಲೆಗಳಿದ್ದು, ಮೇಲೆ ಹಾಸುಗಲ್ಲುಗಳನ್ನು ಹಾಕಲಾಗಿದ್ದು, ಮುಖಮಂಟಪದ ಮಧ್ಯಭಾಗದಲ್ಲಿ ಸರಳ ಭುವನೇಶ್ವರಿಯ ಚಿತ್ರವಿದೆ. ದೇಗುಲದ ಮೇಲೆ ಯಾವುದೇ ಗೋಪರವಿಲ್ಲ ಅಥವಾ ಹಾಳಾಗಿರುವ ಕುರುಹುಗಳು ಇರುವುದಿಲ್ಲ. ದ್ವಾರಬಾಗಿಲು ಮತ್ತು ಗರ್ಭಗುಡಿಯ ಬಾಗಿಲುಗಳ ಪಕ್ಕದಲ್ಲಿ ಜಾಲಂದ್ರಗಳಿದ್ದು ಚೌಕಾಕಾರದಲ್ಲಿ ತುಂಬಾ ಸರಳವಾಗಿ ನಿರ್ಮಿಸಿದ್ದಾರೆ. ಗರ್ಭಗುಡಿಯ ಬಾಗಿಲು ತುಂಬಾ ಸರಳವಾಗಿದ್ದು ಒಂದೇ ಕಲ್ಲಿನಲ್ಲಿ ೫ ಪಟ್ಟಿಕೆಗಳನ್ನು ನಿರ್ಮಿಸಿ, ಅವುಗಳ ಮೇಲೆ ಬಳ್ಳಿ ಕೋನಾಕೃತಿಯ ಚಿತ್ರಗಳನ್ನು ಕೆತ್ತಲಾಗಿದ್ದು, ಕೆಳಗೆ ದ್ವಾರಪಾಲಕರ ಚಿತ್ರಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ಮುಂಭಾಗದಲ್ಲಿ ನಂದಿಯ ಶಿಲ್ಪವಿದೆ. ದೇವಾಲಯದ ಹೊರಭಾಗದ ತಳವಿನ್ಯಾಸ ಹೊರಚಾಚುಗಳಿಂದ ಕೂಡಿದ್ದು, ಮೇಲ್ಬಾಗದಲ್ಲೂ ಕಲಾತ್ಮಕ ಹೊರಚಾಚು ರಕ್ಷಣೆಗಿದೆ. ದೇವಾಲಯದ ಸುತ್ತಲೂ ಒಂದು ಅಡಿ ವ್ಯಾಸದಲ್ಲಿ ಚೌಕ ಕೋನಾಕೃತಿಯ ಹೂಗಳ ಪಟ್ಟಿಯಿಂದ ಸುತ್ತುವರೆದಿದೆ. ಹಾಗು ಹೊರಭಾಗದಲ್ಲಿ ೩ ದಿಕ್ಕಿಗೆ ೩ ಗೂಡುಗಳಿವೆ. ಗೂಡುಗಳು ಹೊರಚಾಚಿದ ಕಂಬಗಳಿಂದ ಕೂಡಿದ್ದು, ಗೂಡಿನಲ್ಲಿ ಯಾವುದೇ ಮೂರ್ತಿಶಿಲ್ಪವಿಲ್ಲ.
ಗ್ರಾಮಸ್ಥರ ಆಸಕ್ತಿಯಿಂದ ಜೀರ್ಣೋದ್ದಾರಗೊಂಡಿದ್ದು, ದೇವಾಲಯಕ್ಕೆ ಯಾವುದೇ ಧಕ್ಕೆಯನ್ನುಂಟುಮಾಡದಂತೆ ಮೇಲ್ಚಾವಣಿಯನ್ನು ದುರಸ್ತಿಗೊಳಿಸಿ, ದೇವಾಲಯದ ಮುಂಭಾಗದಲ್ಲಿ ಛಾವಣಿಯನ್ನು ನಿರ್ಮಿಸಿದ್ದಾರೆ.
ದೇವಾಲಯದ ಮಣ್ಣನ್ನು ತೆಗೆಯುವಾಗ ಎರಡು ವೀರಗಲ್ಲುಗಳು, ಕಲ್ಲಿನ ಮಣೆ, ಸಪ್ತಮಾತೃಕೆಯರ ಶಿಲ್ಪ, ಜಡೆಮುನಿ, ಪಾಣಿಪೀಠಗಳು, ದೇವಾಲಯ ಕಟ್ಟಡದ ಬೇರೆ ಬೇರೆ ಭಾಗದ ಅಲಂಕೃತ ಪಟ್ಟಿಕೆಗಳು, ಅಧಿಕಶಿಲ್ಪಗಳು ದೊರೆತಿವೆ. ಇವುಗಳನ್ನು ನೋಡಿದರೆ ಇನ್ನೂ ಒಂದು ದೇವಾಲಯವಿದ್ದು ಹಾಳಾಗಿರಬಹುದೆಂಬ ಅನುಮಾನ ಬರುತ್ತದೆ.
ಜಡೆಮುನಿ ಶಿಲ್ಪ: ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸುಮಾರು ಮೂರು ಅಡಿ ಎತ್ತರದ ಜಡೆಮುನಿ ಶಿಲ್ಪವಿದೆ. ಪದ್ಮಾಸನದಲ್ಲಿ ಕುಳಿತು ಗಡ್ಡಧಾರಿಯಾಗಿದ್ದು, ಕೈಯಲ್ಲಿ ಲಿಂಗವನ್ನು ಹಿಡಿದಿದ್ದು ಇನ್ನೊಂದು ಕೈಯಲ್ಲಿ ರುದ್ರಾಕ್ಷಿಯನ್ನು ಹಿಡಿದು ಜಪಿಸುವಂತಿದ್ದು, ಈ ಕ್ಷೇತ್ರದಲ್ಲಿ ಋಷಿ ಮುನಿಗಳು ವಾಸಿಸುತ್ತಿರುವ ಕುರುಹುವಾಗಿರಬಹುದೆನಿಸುತ್ತದೆ.
ಕೊರಳು, ತೋಳು, ಕೈಗಳು ಹಾಗೂ ಕಿವಿಗಳು ರುದ್ರಾಕ್ಷಿ ಹಾರದಿಂದ ಕಂಗೊಳಿಸುತ್ತಿದೆ. ಶಿರಭಾರ ಪೇಟದಂತೆ ಅಲಂಕೃತವಾಗಿದ್ದು ಉದ್ದನೆಯ ಜಡೆ ಇದೆ, ಆ ಜಡೆಯು ಬಳ್ಳಿಗಳ ಶಿಲ್ಪದಿಂದ ಅಲಂಕೃತವಾಗಿದೆ. ಯೋಗಿಶಿಲ್ಪ ನಗುಮೊಗದ ಏಕಾಗ್ರತೆಯಿಂದ ಕೂಡಿ ಧ್ಯಾನದ ಭಂಗಿಯನ್ನು ಕಾಣಬಹುದು. ಇಲ್ಲಿಗೆ ೧೫ ಕಿ.ಮೀ. ದೂರದ ಕುರುವದಲ್ಲೂ ಇಂತಹ ಶಿಲ್ಪಗಳಿದ್ದು ಈ ಸ್ಥಳವನ್ನು ಶ್ರೀ ರಾಮಭಟ್ಟರವರು ಅಧ್ಯಯನ ನಡೆಸಿ - “ಕುರುವ ಸ್ಥಳವನ್ನು ‘ಕಾಳಮುಖರ ತವರೂರು ಎಂದಿದ್ದಾರೆ. ಇದನ್ನು ಗಮನಿಸಿದಾಗ ಕಮ್ಮಾರಗಟ್ಟೆ ಹಾಗೂ ಇಲ್ಲಿನ ಪಾರ್ಥನಾಥೇಶ್ವರ ದೇವಾಲಯದ ಪರಿಸರವೂ ಕೂಡ ಕಾಳಾಮುಖರ ಪ್ರದೇಶವಾಗಿರಬಹುದೆನಿಸುತ್ತದೆ.
ಮಹಾಸತಿ ಶಿಲ್ಪ
ಕಮ್ಮಾರಗಟ್ಟೆ ಗ್ರಾಮದ ಒಳಗೆ ಸುಮಾರು ೧೭ನೇ ಶತಮಾನಕ್ಕೆ ಸೇರಿದ ಮಹಾಸತಿ ಶಿಲ್ಪವಿದ್ದು, ತಲೆಯ ಹಿಂಭಾಗ ಸುಂದರವಾಗಿ ಅಲಂಕೃತವಾಗಿದ್ದು, ಕೊರಳು, ಸೊಂಟ, ಕೈಗಳು ಆಭರಣಗಳಿಂದ ಶೃಂಗಾರಗೊಂಡಿವೆ. ಒಂದು ಕೈಯನ್ನು ಮೇಲೆ ಎತ್ತಿದ್ದು, ಮತ್ತೊಂದು ಕೈಯಲ್ಲಿ ನಿಂಬೇಹಣ್ಣನ್ನು ಹಿಡಿದಿದ್ದಾಳೆ. ಪಕ್ಕದಲ್ಲಿ ಸಣ್ಣದಾದ ಕೈಮುಗಿದು ನಿಂತ ವ್ಯಕ್ತಿಯ (ಪತಿ) ಚಿತ್ರವಿದೆ.
ವಿಶೇಷವೆಂದರೆ ಈ ಶಿಲ್ಪದ ಎರಡೂ ಬದಿಗೆ ಇಬ್ಬರು ವೀರರ ಶಿಲ್ಪಗಳಿವೆ, ಇಬ್ಬರೂ ಖಡ್ಗಧಾರಿಗಳಾಗಿದ್ದು, ತಲೆ ಮುಡಿಯನ್ನು ಕಟ್ಟಿದ್ದು, ಎರಡೂ ವೀರರ ಪಕ್ಕದಲ್ಲಿ ಅಲಂಕೃತವಾದ ನೀರಿನ ಹೂಜಿಯ ಚಿತ್ರವಿದೆ. ವೀರನ ಶಿಲ್ಪದ ಪಕ್ಕದಲ್ಲಿ ಡಾಂಬಿಕೇಯ (ಡಾಂಬಿಕಯ್ಯ) ಎಂಬ ಬರಹ ಇದೆ. ಈ ಮೂರು ಶಿಲ್ಪಗಳಿಗೂ ಕಲ್ಲುಗಳನ್ನು ನಿಲ್ಲಿಸಿ ಗುಡಿಗಳನ್ನು ಕಟ್ಟಿದ್ದಾರೆ. ಸತಿ ಹೋದವಳು ಇಲ್ಲಿನ ರಾಣಿಯಾಗಿರಬೇಕೆನಿಸುತ್ತದೆ. ಈ ಡಾಂಬಿಕೇಯ ಯಾರು? ಇವರನ್ನು ಸತಿ ಶಿಲ್ಪದ ಪಕ್ಕದಲ್ಲಿ ಏಕೆ ನಿಲ್ಲಿಸಿದ್ದಾರೆ? ಸತಿ ಶಿಲ್ಪಕ್ಕೂ ಈ ವೀರರಿಗೂ ಏನು ಸಂಬಂಧ ಎಂಬುದನ್ನು ಪತ್ತೆ ಮಾಡಬೇಕಿದೆ. ಅಲ್ಲದೇ ಸತಿ ಶಿಲ್ಪಕ್ಕೂ ಮತ್ತು ಇಬ್ಬರು ವೀರರ ಶಿಲ್ಪಗಳು ಕಾಲಮಾನಗಳ ವ್ಯತ್ಯಾಸವೂ ಇದೆ ಎನಿಸುತ್ತದೆ.
ಕಮ್ಮಾರಗಟ್ಟೆಯ ಶಾಲೆಯ ಪಕ್ಕದ ರಸ್ತೆಯಲ್ಲಿ ಐನಾರ ನೀಲಮ್ಮನವರ ಮನೆಯ ಹಿತ್ತಲಲ್ಲಿ ಮೇಲೆ ತಿಳಿಸಿದ ಮಹಾಸತಿ ಶಿಲ್ಪದಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಮಹಾಸತಿಯ ಶಿಲ್ಪವಿದೆ. ಇದು ನೆಲೆಮಟ್ಟದಿಂದ ಸುಮಾರು ೫ ಅಡಿ ಎತ್ತರವಿದ್ದು ಬಹಳ ಸುಂದರವಾಗಿದೆ. ತಲೆಯ ಹಿಂಭಾಗ ಕೇದಿಗೆಯಿಂದ ಅಲಂಕೃತವಾಗಿದೆ. ತೋಳು, ಕೈಗಳು, ಮತ್ತು ಸೊಂಟ ಆಭರಣಗಳಿಂದ ಅಲಂಕೃತಗೊಂಡಿದ್ದು, ಸೀರೆಯ ನೆರಿಗೆಗಳನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ. ಪಕ್ಕದಲ್ಲಿ ಕೈಮುಗಿದು ಕುಳಿತ ವ್ಯಕ್ತಿ (ಪತಿ)ಯ ಚಿತ್ರವಿದೆ.
ಈ ಶಿಲ್ಪದ ಮುಂಭಾಗದಲ್ಲಿ ವಿಶಾಲ ಪಾಳು ಜಾಗವಿದೆ. ಇದು ಸಂಪೂರ್ಣ ಗಿಡಗಂಟಿಗಳಿಂದ ಕೂಡಿದ್ದು ಅದನ್ನು ಅಗ್ನಿಕುಂಡ (ಬೆಂಕಿಕೊಂಡ) ಎಂದು ಕರೆಯುತ್ತಾರೆ. ಬಹುಶಃ ಇದೇ ಸ್ಥಳದಲ್ಲಿ ಚಿತೆಯನ್ನು ಮಾಡಿರ ಬಹುದೆನಿಸುತ್ತದೆ. ಈ ಚಿತೆಗೆ ಹಾರಿ ಪ್ರಾಣ ಕಳೆದುಕೊಂಡ ಸ್ತ್ರೀಯ ಸತಿಕಲ್ಲು ಆಗಿರಬಹುದು.
ಈಶ್ವರ ದೇವಾಲಯ
ಕಮ್ಮಾರಗಟ್ಟೆಯ ಉತ್ತರ ದಿಕ್ಕಿಗೆ ಊರ ಹೊರಗೆ ಮತ್ತೊಂದು ದಿಬ್ಬವಿದ್ದು, ಸುತ್ತಲೂ ಪೆಳೆ, ಗಿಡ, ಮರಗಳಿಂದ ಕೂಡಿದ್ದು, ದೇವಾಲಯ ಸಂಪೂರ್ಣ ನೆಲಸಮವಾಗಿದೆ. ಒಳಗೆ ಹೋಗುವುದು ತುಂಬಾ ಕಷ್ಟ, ಇಲ್ಲಿ ವಷಕ್ಕೊಮ್ಮೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಇಲ್ಲಿರುವ ಶಿವಲಿಂಗ ಸಂಪೂರ್ಣ ಮಣ್ಣಿನಿಂದ ಮುಚ್ಚಿದ್ದು ಪೀಠದ ಮೇಲ್ಬಾಗ ಮಾತ್ರ ಕಾಣಿಸುತ್ತದೆ.
ಮುಂದೆ ಭಗ್ನಗೊಂಡ ನಂದಿಯ ಶಿಲ್ಪವಿದೆ. ಶಿವಲಿಂಗದ ಹಿಂದೆ (ಸೂರ್ಯ ವಿಗ್ರಹ) ಒಂದು ಮೂರ್ತಿ ಶಿಲ್ಪವಿದ್ದು, ಅದೂ ಸಹ ನೆಲದಲ್ಲಿ ಹೂತಿದೆ. ಈ ಗ್ರಾಮದ ಸುತ್ತಲೂ ೧೦೧ ಲಿಂಗಗಳಿವೆ ಎಂದು ಸ್ಥಳೀಯರು ತಿಳಿಸುತ್ತಾರೆ. ಈ ಸ್ಥಳವನ್ನು ಉತ್ಖನನ ನಡೆಸಿದರೆ ಇನ್ನೂ ಹೆಚ್ಚಿನ ವಿವರಗಳು ಸಿಗುವುದರಲ್ಲಿ ಅನುಮಾನವಿಲ್ಲ.
ಬುರುಜು
ಹೊನ್ನಾಳಿ ತಾಲ್ಲೂಕಿನ ಹೆಚ್ಚಿನ ಹಳ್ಳಿಗಳಲ್ಲಿ ಅನೇಕ ಬುರುಜುಗಳನ್ನು ಕಾಣಬಹುದು. ವಿಜಯನಗರೋತ್ತರ ಕಾಲದಲ್ಲಿ ನಿರ್ಮಿಸಲಾಗಿರುವ ಇಂಥಹ ಬುರುಜುಗಳನ್ನು ಮಾಸಡಿ, ಕೋಟೆಮಲ್ಲೂರು, ಕಮ್ಮಾರಗಟ್ಟೆ, ಗೊವೀನಕೋವಿ, ಹಿರೇಗೊಣೆಗೆರೆ, ಉಜ್ಜಿನಿಪುರ, ಮುಂತಾದ ಸ್ಥಳಗಳಲ್ಲಿ ಕಾಣಬಹುದು.
ಕಮ್ಮಾರಗಟ್ಟೆಯ ಈ ಬುರುಜು ಉತ್ತಮ ಸ್ಥಿತಿಯಲ್ಲಿದ್ದು, ತಳಹಂತದಲ್ಲಿ ತಳಪಾಯಕ್ಕೆ ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿದ್ದಾರೆ. ತಳವಿನ್ಯಾಸದಿಂದ ಮೇಲೆ ಬಹಳಷ್ಟು ಸಣ್ಣ ಸಣ್ಣ ಕಲ್ಲು ಮತ್ತು ಮಣ್ಣುಗಳನ್ನು ಬಳಸಿ ವೃತ್ತಾಕಾರವಾಗಿ ನಿರ್ಮಿಸಿದ್ದಾರೆ. ೫೦ ಅಡಿಗಿಂತಲೂ ಹೆಚ್ಚು ಎತ್ತರವಾಗಿದ್ದು, ಮೇಲ್ಬಾಗದಲ್ಲಿ ಸುತ್ತಲೂ ಶತ್ರುಗಳ ವೀಕ್ಷಣೆಗೆ ವೀಕ್ಷಣಾ ಕಿಂಡಿಗಳಿದ್ದು, ರಕ್ಷಣೆಗೆ ಸೂಕ್ತವಾಗಿದೆ. ಸುಮಾರು ೩೦ ಅಡಿ ಎತ್ತರದಲ್ಲಿ ಬುರುಜಿಗೆ ಕಲ್ಲಿನ ಬಾಗಿಲನ್ನು ನಿಲ್ಲಿಸಲಾಗಿದೆ. ಈ ಕಟ್ಟಡದ ಕೌಶಲ್ಯವನ್ನು ನೋಡಿಯೇ ಸವಿಯಬೇಕು, ಇದನ್ನು ಯಾರು, ಯಾವಾಗ ನಿರ್ಮಿಸಿದರೆಂಬುದಕ್ಕೆ ಯಾವುದೇ ಲಿಖಿತ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ.
ಸುಮಾರು ೩೦೦ ರಿಂದ ೪೦೦ ವರ್ಷದಿಂದ ಮಳೆ, ಗಾಳಿ, ಬಿಸಿಲಿಗೆ ಮೈಯೊಡ್ಡಿದರೂ ಸುರಕ್ಷಿತವಾಗಿಯೇ ಇದೆ. ಆದರೆ ಇಂತಹ ಸುಂದರ ಸ್ಮಾರಕದ ಸುತ್ತಲೂ ಒತ್ತುವರಿ ಮಾಡಿರುವುದರಿಂದ ರಕ್ಷಣೆಗೆ ತೊಂದರೆಯಾಗಿದೆ. ಗ್ರಾಮಸ್ಥರು ಈ ಐತಿಹಾಸಿಕ ಪರಂಪರೆಯ ತಾಣವನ್ನು ರಕ್ಷಿಸುವಲ್ಲಿ ಪ್ರಯತ್ನಿಸುತ್ತಿದ್ದು, ಪುರಾತತ್ವ ಇಲಾಖೆಯ ನೆರವೂ, ಜೊತೆಗೆ ಸ್ಥಳೀಯರ ಆಸಕ್ತಿಯೂ ಬೇಕಿದೆ.
ಮುರುಡ ಬಸವೇಶ್ವರ ದೇವಸ್ಥಾನ
ಕಮ್ಮಾರಗಟ್ಟೆ ಗ್ರಾಮದ ದಕ್ಷಿಣ ದಿಕ್ಕಿಗೆ ತುಂಗಭದ್ರಾ ನದಿಯ ದಡದಲ್ಲಿ ಈ ದೇವಾಲಯವಿದೆ. ಹೊನ್ನಾಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಶ್ರಮದಾನದಿಂದ ಸ್ವಚ್ಚಗೊಳಿಸಿದಾಗ ಈ ಸರಳ ರಚನೆಯ ದೇವಸ್ಥಾನ ಕಂಡುಬಂತು.
ಆರು ಕಂಬಗಳ ಮೇಲೆ ಮೇಲ್ಛಾವಣೆ ಇದ್ದು, ಸುತ್ತಲೂ ಇಳಿಜಾರಿನ ರೀತಿ ಕಲ್ಲುಗಳನ್ನು ಏರಿಸಿ ಗುಮ್ಮಟಾಕಾರವಾಗಿ ದೇವಾಲಯ ನಿರ್ಮಿಸಿದ್ದಾರೆ. ಆರಂಭಿಕ ಕಾಲದ ದೇವಾಲಯದಂತೆ ಕಾಣುತ್ತದೆ. ಯಾವುದೇ ನಾಜೂಕಿನ ಕೆಲಸವಿಲ್ಲ, ಬಾಗಿಲು, ಮೆಟ್ಟಿಲು ಸಂಪೂರ್ಣವಾಗಿ ಹಾಳಾಗಿದ್ದು ಸುಮಾರು ನಾಲ್ಕು ಅಡಿ ಎತ್ತರದ ಎರಡು ನಾಗರಕಲ್ಲುಗಳು ದ್ವಾರಬಾಗಿಲಲ್ಲಿವೆ. ಒಳಗಡೆ ಯಾವುದೇ ವಿಗ್ರಹವಿಲ್ಲ, ಅಥವಾ ಮಣ್ಣಲ್ಲಿ ಮುಚ್ಚಿರಬಹುದು. ಇದು ಮುರುಡ ಬಸವೇಶ್ವರ ದೇವಾಲಯ, ಮೊದಲು ಇಲ್ಲಿ ದನಕರುಗಳಿಗೆ ಉಣ್ಣೆಯಾದರೆ ತೆಂಗಿನಕಾಯಿ ಉರುಳಿಬಿಡುತ್ತಿದ್ದುದಾಗಿ ಸ್ಥಳಿಯರು ತಿಳಿಸುತ್ತಾರೆ.
ಸೂರ್ಯನ ವಿಗ್ರಹ
ಸುಮಾರು ಮೂರು ಅಡಿ ಎತ್ತರದ ಸೂರ್ಯನ ವಿಗ್ರಹ ಮುರುಡ ಬಸವೇಶ್ವರ ದೇವಸ್ಥಾನದ ಬಳಿ ಪಾಯ ತೆಗೆಯುವಾಗ ಸಿಕ್ಕಿದೆ.
ಈ ಮೂರ್ತಿಯ ಬಹಳಷ್ಟು ಭಾಗ ಭಗ್ನಗೊಂಡಿದ್ದು, ಕಿರೀಟ ಆಭರಣಗಳಿಂದ ಸರ್ವಾಂಗ ಸುಂದರವಾಗಿ ಅಲಂಕೃತವಾಗಿದೆ. ಈ ಭಾಗದಲ್ಲಿ ಎರಡು ಸೂರ್ಯನ ವಿಗ್ರಹಗಳು ಪತ್ತೆಯಾದಂತಾಗಿವೆ.
ಹೀಗೆ ಈ ಕಮ್ಮಾರಗಟ್ಟೆ ಪರಿಸರ ಅಪಾರವಾದ ಪ್ರಾಚ್ಯಾವಶೇಷಗಳ ಸಂಪತ್ತನ್ನು ತನ್ನ ಮಡಿಲಲ್ಲಿ ಅಡಗಿಸಿಟ್ಟುಕೊಂಡಿದ್ದು, ಅಪಾರ ಐತಿಹಾಸಿಕ ಮಾಹಿತಿಗಳನ್ನು ಒದಗಿಸುವ ನೆಲೆಯಾಗಿದೆ ಎಂದು ಹೇಳಬಹುದು.

[ಈ ಲೇಖನ ಬರೆಯಲು ಸಹಕಾರ, ಮಾರ್ಗದರ್ಶನ ನೀಡಿದ. ಶ್ರೀ ಬುರುಡೇಕಟ್ಟೆ ಮಂಜಪ್ಪ, ಶ್ರೀ ಯು.ಎನ್. ಸಂಗನಾಳ್ ಮಠ.
ಡಾ|| ಕೊಟ್ರೇಶ್ ಉತ್ತಂಗಿ. ಶ್ರೀ ದೇವರಕೊಂಡಾರೆಡ್ಡಿ, ವಿನಾಯಕ ಶೆಟ್ರು, ಹಾಗೂ ಒಂದು ವಾರಗಳ ಕಾಲ ಕ್ಷೇತ್ರಕಾರ್ಯದಲ್ಲಿ ನೆರವಾದ ಹೊನ್ನಾಳಿ ಸರ್ಕಾರಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಮತ್ತು ಕಮ್ಮಾರಗಟ್ಟೆಯ ಜನತೆಗೆ ಧನ್ಯವಾದಗಳು.]

ಆಧಾರಸೂಚಿ
೧.         ಕಾಳಾಮುಖ ದರ್ಶನ, ಎಸ್.ಎಸ್. ಹಿರೇಮಠ, ಸಮತಾ ಪ್ರಕಾಶನ, ಹರಪನಹಳ್ಳಿ, ೨೦೦೪.
೨.         ಕರ್ನಾಟಕದ ವೀರಗಲ್ಲುಗಳು, ಡಾ|| ಆರ್. ಶೇಷಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತತು, ೧೯೮೨.
೩.         ಹೊನ್ನಲೆಗಳು, ಡಾ|| ನಾ. ಕೊಟ್ರೇಶ್ ಉತ್ತಂಗಿ, ಸಹನಾದ್ರಿ ಪ್ರಕಾಶನ, ಹೊನ್ನಾಳಿ, ೨೦೦೪.
೪.         ಅಪರೂಪದ ಮಹಿಳಾ ದಾಸ ಸಾಹಿತಿ      , ಪ್ರಜಾವಾಣಿ ಲೇಖನ, ಲೇ: ಎಂ. ನಟರಾಜನ್
೫.         ಐತಿಹಾಸಿಕ ಹಿನ್ನೆಲೆಯ ಹೆಳವನಕಟ್ಟೆ       , ಕರ್ಮವೀರ ಲೇಖನ, ಲೇ: ರಾಮಚಂದ್ರ ನಾಡಿಗ್.